NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಜಂಟಿ ಕ್ರಿಯಾ ಸಮಿತಿ ಬೇಡಿಕೆ ಮನವಿ ತಿರಸ್ಕರಿಸಿ – ಎಂಡಿಗಳಿಗೆ ಪ್ರತಿಯೊಬ್ಬ ನೌಕರನೂ ಬರೆಯುತ್ತಿದ್ದಾನೆ ಪತ್ರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ಸಂಸ್ಥೆಗಳ ನೌಕರರು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುವ ಚಳವಳಿ ಆರಂಬಿಸಿದ್ದಾರೆ. ಅಲ್ಲದೆ ಸಾರಿಗೆ ನೌಕರರ ಪರವಾಗಿ ಇರಬೇಕಾದ ಸಂಘಟನೆಗಳು ನೌಕರರಿಗೆ ಸಮಸ್ಯೆ ಹೆಚ್ಚಿಸುವ ಕೆಲಸದಲ್ಲಿ ತೊಡಗಿವೆ.
ಹೀಗಾಗಿ ಈ ಸಂಘಟನೆಗಳು ಇಟ್ಟಿರುವ ಬೇಡಿಕೆಗಳನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಈ ವಿಷಯವಾಗಿ ಪ್ರತಿಯೊಬ್ಬ ನೌಕರನೂ (ನಾನು) ತಿಳಿಸುವುದೇನೆಂದರೆ ಪ್ರಸ್ತುತ ನಮ್ಮ ಸಾರಿಗೆ ಸಂಸ್ಥೆಯಲ್ಲಿ 6-7 ಕಾರ್ಮಿಕ ಸಂಘಟನೆಗಳು ಇದ್ದಾವೆ. ಆದರೆ ಯಾವುದೇ ಸಂಘಟನೆಗಳ ಮೂಲ ಉದ್ದೇಶ ನೌಕರರ ಬೇಕು-ಬೇಡಾಗಳನ್ನು ಅರಿತು ನೌಕರರ ಶ್ರೇಯೋಭಿವೃದ್ದಿಗೆ ಶ್ರಮಿಸುವುದಾಗಿದೆ.

ಆದರೆ ಮೊನ್ನೆ 08/08/2022 ರಂದು ನಡೆದ ಕಾರ್ಮಿಕ ಸಂಘಟನೆಯ ಜಂಟಿ ಕ್ರಿಯಾ ಸಮಿತಿಯ ವರದಿಯಲ್ಲಿ ಕೂಟ ಸಂಘಟನೆಯ ಬೇಡಿಕೆಗಳಿಗೆ ಒಂದು ಅಂಶಕ್ಕೂ ಪ್ರಾಮುಖ್ಯತೆ ನೀಡಿರುವುದಿಲ್ಲ. ಸಾರಿಗೆ ಸಂಸ್ಥೆಯ ಬಹುಪಾಲು 90%ಪ್ರತಿಶತ ಸಿಬ್ಬಂದಿಗಳು ಕೂಟ ಸಂಘಟನೆಯ ಬೇಡಿಕೆಗಳಿಗೆ ಬೆಂಬಲವನ್ನು ಸೂಚಿಸಿದ್ದಾರೆ.

ಜಂಟಿ ಕ್ರೀಯಾ ಸಮಿತಿಯ ಉದ್ದೇಶಗಳು:
▪️ವೇತನ ತಾರತಮ್ಯಕ್ಕೆ ಶಾಶ್ವತ ಪರಿಹಾರವನ್ನು ನೀಡುವ ಮನೋಭಾವವನ್ನು ಹೊಂದಿರುವುದಿಲ್ಲ. ▪️ಸಾರಿಗೆ ನೌಕರರ ಯಾವ ಸಮಸ್ಯೆಗಳು ಬಗೆಹರಿಯಬಾರದು. ▪️ಪ್ರತಿ ನಾಲ್ಕು ವರ್ಷಕೊಮ್ಮೆ ಮುಷ್ಕರ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುವ ಮನೋಭಾವವನ್ನು ಹೊಂದಿರುತ್ತಾರೆ. ▪️ಮುಖ್ಯವಾಗಿ ಎಲ್ಲ ಸಂಘಟನೆಗಳು ತಮ್ಮ ಅಸ್ತಿತ್ವಕ್ಕಾಗಿ ಕೇವಲ ನೌಕರರ ಕಣ್ಣೀರು ಒರೆಸುವವರಾಗಿರುತ್ತಾರೆ. ▪️ಯಾವುದೇ ಸರ್ಕಾರವಿದ್ದರೂ ಮುಷ್ಕರದ ಮುಜುಗರವನ್ನುಂಟುಮಾಡಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವವರಾಗಿರುತ್ತಾರೆ.

ಕೂಟದ ಉದ್ದೇಶ:
▪️ನೌಕರರ ಎಲ್ಲ ರೀತಿಯ ಸಮಸ್ಯೆಗಳ ಪರಿಹಾರದ ಕೈಪಿಡಿಯಾಗಿ ಬೇಡಿಕೆಗಳಾಗಿದ್ದಾವೆ. ▪️ಸಾರ್ವಜನಿಕರಿಗೆ ಭವಿಷ್ಯದಲ್ಲಿ ತೊಂದರೆ ಕೊಡದೇ ವೇತನದ ವಿಷಯವಾಗಿ ಶಾಶ್ವತವಾದ ಮಾರ್ಗವನ್ನು ಹೊಂದುವ ಬೇಡಿಕೆಯನ್ನು ಹೊಂದಿರುತ್ತಾರೆ. ▪️ಕೂಟದ ಬೇಡಿಕೆಗಳನ್ನು ಇಡೇರಿಸಿದರೆ ಆಳುವ ಸರ್ಕಾರ ಯಾವುದೇ ಇದ್ದರೂ ಅವರಿಗೆ ಎಲ್ಲ ನೌಕರರು ಬೆಂಬಲಿಸುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.

ಆದ್ದರಿಂದ ಜಂಟಿ ಕ್ರಿಯಾ ಸಮಿತಿಯವರ ಮನವಿಯನ್ನು ತಿರಸ್ಕರಿಸಿ ಈ ಕೂಡಲೇ ಸಾರಿಗೆ ನೌಕರರ ಸಂಘಟನೆಗಳ ಚುನಾವಣೆ ಘೋಷಿಸಿ ಗೆದ್ದ ಸಂಘಟನೆಯನ್ನು “RECOGNISED UNION ” ಎಂದು ಘೋಷಿಸಿ ಅವರ ಬೇಡಿಕೆಯನ್ನು ಇಡೇರಿಸಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಹೀಗೆ ಸಾರಿಗೆ ಎಂಡಿಗಳೀಗೆ ಪತ್ರ ಬರೆಯುವ ಚಳವಳಿಯನ್ನು ಆರಂಬಿಸುತ್ತಿದ್ದಾರೆ. ಇದರಿಂದ ನೌಕರರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳಾಗುವ ಬದಲು ಅನುಕೂಲವಾಗಲಿದೆ ಎಂದು ನೌಕರರು ಆಶಾ ಭಾವನೆ ಹೊಂದಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ