NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬವನ್ನು ಕರುನಾಡು ಸಡಗರದಿಂದ ಸ್ವಾಗತಿಸಿ ಖುಷಿಪಡುತ್ತಿದೆ. ಈ ನಡುವೆಯೂ ರಾಜ್ಯದ ಸಾರಿಗೆ ನೌಕರರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ದೇಶದ ಸೈನಿಕರು ಹೇಗೆ ಗಡಿಯಲ್ಲಿ ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೋ ಹಾಗೆಯೇ ನಾಡಿನ ಒಳಗೆ ಸಾರಿಗೆ ಅಧಿಕಾರಿಗಳು-ನೌಕರರು ಕೂಡ ಕರ್ತವ್ಯದಲ್ಲಿ ಮಗ್ನರಾಗಿದ್ದಾರೆ.

vijayapatha.in - ವಿಜಯಪಥ.ಇನ್‌ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ.   ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ. 

ಹೌದು! ಯಾವುದೇ ಹಬ್ಬವಾದರೂ ನಾರಿಯರಿಗೆ ಅದರ ಸಂಭ್ರಮ ಸ್ವಲ್ಪ ಜಾಸ್ತಿನೇ. ಆದರೆ, ಸಾರಿಗೆ ನಿಗಮಗಳಲ್ಲಿರುವ ಮಹಿಳೆಯರು ಸೇರಿದಂತೆ ಸಮಸ್ತ ನೌಕರರು ತಮ್ಮ ಕರ್ತವ್ಯದಲ್ಲೇ ಈ ಬೆಳಕಿನ ಹಬ್ಬದ ಸಂಭ್ರಮ ಕಾಣುತ್ತಿದ್ದಾರೆ. ಇಂದು ಕೂಡ ಕರ್ತವ್ಯಕ್ಕೆ ಹಾಜರಾಗಿ ನಾಡಿನ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುವಲ್ಲಿ ನಿತರಾಗಿದ್ದಾರೆ.

ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿಗಳು ಕರ್ತವ್ಯ ನಿಷ್ಠೆ ಮೆರೆಯುತ್ತಿದ್ದಾರೆ. ಮುಂಜಾನೆ 4 ಗಂಟೆಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಮುಂಜಾವು 5 ಗಂಟೆಗೆ ಡಿಪೋಗಳಲ್ಲಿ ಹಾಜರಾಗಿ ತಮ್ಮ ಕಾಯಕಕ್ಕೆ ಸೈನಿಕರಂತೆ ನೌಕರರು ಸಜ್ಜಾಗಿ ತೆರಳಿದ್ದಾರೆ.

ಈ ಎಲ್ಲವನ್ನು ನೋಡಿದರೆ, ಪ್ರತಿಯೊಬ್ಬರ ಮನೆಯಲ್ಲೂ ಹಬ್ಬದ ಸಂಭ್ರಮ. ಆದರೆ, ಮನೆಯಲ್ಲಿ ನಡೆಯುತ್ತಿರುವ ಈ ಬೆಳಕಿನ ಹಬ್ಬದ ಸಡಗರದಲ್ಲಿ ಕುಟುಂಬದವರ ಜತೆ ಸಂಭ್ರಮಿಸಲು ಈ ನೌಕರರಿಗೆ ಸಾಧ್ಯವಾಗುತ್ತಿಲ್ಲ. ಆದರೂ ತಮ್ಮ ಕರ್ತವ್ಯ ನಿಷ್ಠೆ ಮೂಲಕವೇ ಸಂಭ್ರಮ, ಸಡಗರ ಪಡುತ್ತ ನಾಡಿನ ಜನರನ್ನು ಖುಷಿಯಿಂದಲೆ ಒಂದೆಡೆಯಿಂದ ಮತ್ತೊಂದೆಡೆಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ.

ಒಂದು ಗಂಟೆ ಬಸ್‌ಗಳು ತಡವಾದರೆ ನೂರಾರು ಮಂದಿ ತಾವು ತಲುಪಬೇಕಾದ ಸ್ಥಳವನ್ನು ತಲುಪುತ್ತೇವೋ ಇಲ್ಲವೋ ಎಂಬ ಚಿಂತೆಯಲ್ಲಿ ಒದ್ದಾಡುತ್ತಿರುತ್ತಾರೆ. ಅಂಥ ಜನರಿಗೆ ಸಂಜೀವಿನಿಯಂತೆ ಧಾವಿಸುವ ಸಾರಿಗೆ ಸಿಬ್ಬಂದಿಗಳು ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಅವರ ಸ್ಥಳಕ್ಕೆ ತಲುಪಿಸುತ್ತಿದಾರೆ. ಈ ರೀತಿ ಸೇವೆ ಮಾಡುವ ಇವರು ನಿಜವಾಗಲು ಸಾರ್ವಜನಿಕ ಸೇವಕರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ.

ಇನ್ನು ಇಂಥ ಸಾರಿಗೆ ನೌಕರರನ್ನು ನಾಡಿನ ಜನರು ಗೌರವದಿಂದ ಕಾಣಬೇಕು. ಇದಕ್ಕೂ ಮಿಗಿಲಾಗಿ ರಾಜ್ಯ ಸರ್ಕಾರ ಈ ನೌಕರರಿಗೆ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಮೀನಮೇಷ ಎಣಿಸಬಾರದು. ಆದರೆ, ಕಳೆದ ಬಿಜೆಪಿ ಸರ್ಕಾರ ಈ ನೌಕರರನ್ನು ಭಾರೀ ತುಚ್ಯವಾಗಿ ನಡೆಸಿಕೊಂಡಿದ್ದು ಮಾತ್ರ ಖೇದಕರ ಸಂಗತಿ.

ಬಿಜೆಪಿಗರಂತೆ ಕಾಂಗ್ರೆಸ್‌ ಸರ್ಕಾರ ನಡೆಸಿಕೊಳ್ಳದೆ ಸಾರಿಗೆ ಸಿಬ್ಬಂದಿಗೆ ನ್ಯಾಯಯುತವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಕೊಡುವಲ್ಲಿ ಹಿಂದೇಡು ಹಾಕಬಾರದು. ಜತೆಗೆ 2020 ಜನವರಿಯಿಂದ-2023ರ ಫೆಬ್ರವರಿ ನಡುವೆ ನಿವೃತ್ತರಾಗಿರುವ ನೌಕರರಿಗೆ ದೊರಕಬೇಕಿರುವ ಸೌಲಭ್ಯಗಳನ್ನು ನೀಡಬೇಕಿದೆ. ಇದನ್ನು ತಡಮಾಡದೆ ರಾಜ್ಯ ಸರ್ಕಾರ ಕೊಡಬೇಕು.

ಒಂದು ವೇಳೆ ತಡ ಮಾಡಿದರೆ ಈಗಾಗಲೇ 60 ವರ್ಷ ಪೂರೈಸಿರುವ ಜೀವಗಳು ನೀವು ತಡವಾಗಿ ಕೊಡುವ ಸೌಲಭ್ಯಗಳನ್ನು ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲವೇನೋ. ಅದಕ್ಕೆ ಆ ಹಿರಿಯ ಜೀವಗಳು ಬದುಕಿರುವಾಗಲೇ ಅವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ತಲುಪಿಸುವತ್ತ ಸರ್ಕಾರ ಮುಂದಾಗಬೇಕಿದೆ.

ಇನ್ನು 2024 ಜನವರಿ 1ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನವನ್ನು ಕೊಡುವ ಮೂಲಕ ಈ ನಾಡಿನೊಳಗಿನ ಸೈನಿಕರಾದ ಸಾರಿಗೆ ಅಧಿಕಾರಿಗಳು – ನೌಕರರಿಗೆ ಸಂತಸದ ವಾತಾವರಣವನ್ನು ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಕಲ್ಪಿಸಬೇಕು.

ಇನ್ನು ಈ ಹಬ್ಬ ಹರಿದಿನಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆಯುವ ಈ ಸಾರಿಗೆ ನೌಕರರು ನಾಡಿನ ಒಳಗಿನ ಸೈನಿಕರಾಗಿದ್ದು, ಹಬ್ಬದಲ್ಲೂ ಕರ್ತವ್ಯ ನಿರತ ಈ ಸಿಬ್ಬಂದಿಗೆ ಒಂದು ಸಲಾಮ್‌ ಅಲ್ಲ ಅಲ್ಲ ಕೋಟಿ ಕೋಟಿ ಸಲಾಮ್‌. ಎಲ್ಲ ಸಿಬ್ಬಂದಿಯೂ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುವುದಕ್ಕೆ ಈ ಬೆಳಕಿನ ಹಬ್ಬ ಇನ್ನಷ್ಟು ಶಕ್ತಿ ನೀಡುವುದಕ್ಕೆ ನಾಡಿನ ಜನತೆಯೂ ಪ್ರೇರಣೆಯಾಗಬೇಕು.

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!