NEWSಕ್ರೀಡೆದೇಶ-ವಿದೇಶ

ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ  ಮಣಿಸಿ ಕಪ್‌ ತನ್ನಾಗಿಸಿಕೊಂಡ ಲಂಕಾ – 6ನೇ ಬಾರಿಗೆ  ಚಾಂಪಿಯನ್ ಪಟ್ಟಕ್ಕೇರಿತು 

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ದುಬೈ: ರಾಷ್ಟ್ರದಲ್ಲಿ ಹಣದುಬ್ಬರ ಏರಿಳಿತದ ನಡುವೆ ಸೃಷ್ಟಿಯಾಗಿರುವ ಅರಾಜಕತೆ ನಡುವೆಯೂ ದಿಟ್ಟತನದಿಂದ ಹೋರಾಡಿದ ಲಂಕಾ ತಂಡ ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 23 ರನ್‌ಗಳಿಂದ ಮಣಿಸಿ ಕಪ್‌ ತನ್ನಾಗಿಸಿಕೊಳ್ಳುವ ಮೂಲಕ ಜಯದ ನಗೆ ಬೀರಿದೆ.

ಹೌದು! ಶ್ರೀಲಂಕಾ ತಂಡ 6ನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ ಪಟ್ಟಕ್ಕೇರಿದೆ. ಸತತ ಎರಡು ಬಾರಿ ಭಾರತ ಚಾಂಪಿಯನ್ ಆದ ನಂತರ ಏಷ್ಯಾಕಪ್ ಪ್ರಶಸ್ತಿ ಶ್ರೀಲಂಕಾಕ್ಕೆ ಮರಳಿದೆ.

ದುಬೈನಲ್ಲಿ ನಡೆದ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಾಸುನ್ ಶನಕಾ ತಂಡವು ಪಾಕಿಸ್ತಾನಕ್ಕೆ 171 ರನ್‌ಗಳ ಗುರಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಬಾಬರ್ ಅಜಮ್ ನೇತೃತ್ವದ ಇಡೀ ತಂಡ ಕೇವಲ 147 ರನ್‌ಗಳಿಗೆ ಆಲೌಟ್ ಆಯಿತು.

ಆರ್ಥಿಕ ಪ್ರಕ್ಷುಬ್ಧತೆ, ರಾಜಕೀಯ ಏರುಪೇರು ಮತ್ತು ಸಾರ್ವಜನಿಕ ದಂಗೆಯಿಂದಾಗಿ ಈ ವರ್ಷ ವಿಶ್ವದ ಮುಂದೆ ತಲೆಬಾಗಿದ್ದ ಶ್ರೀಲಂಕಾ, ಆತಿಥೇಯರಾಗಿದ್ದರೂ ತನ್ನ ತಾಯ್ನಾಡಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸುವುದನ್ನು ಮುಂದೂಡಬೇಕಾಯಿತು. ಮೇಲಿನ ಕಾರಣಗಳಿಂದಾಗಿ, ಏಷ್ಯಾಕಪ್​ ಅನ್ನು ಯುಎಇಗೆ ಸ್ಥಳಾಂತರಿಸಲಾಯಿತು.

ಆಡಿದ ಮೊದಲ ಪಂದ್ಯದಲ್ಲೇ ಅಫ್ಘಾನಿಸ್ತಾನದ ವಿರುದ್ಧ ಹೀನಾಯವಾಗಿ ಸೋತಿದ್ದ ಲಂಕಾ ಏಷ್ಯಾಕಪ್ ಚಾಂಪಿಯನ್ ಆಗಲಿದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಮೊದಲ ಪಂದ್ಯದಲ್ಲಿ 105 ರನ್‌ಗಳಿಂದ ಸೋತಿದ್ದ ಶ್ರೀಲಂಕಾ ತಂಡ ಇದಾದ ಬಳಿಕ ದಿಟ್ಟವಾಗಿ ತಿರುಗೇಟು ನೀಡಿ ಸತತ 5 ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಗೆದ್ದುಕೊಂಡಿತು.

ಪಾಕಿಸ್ತಾನದ ನಾಯಕ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ತಂಡದಲ್ಲಿ ಎರಡು ಬದಲಾವಣೆ ಮಾಡಿದ ಪಾಕ್, ಹಸನ್ ಅಲಿ ಮತ್ತು ಉಸ್ಮಾನ್ ಖಾದಿರ್ ಬದಲಿಗೆ ಶಾದಾಬ್ ಖಾನ್ ಮತ್ತು ನಸೀಮ್ ಶಾಗೆ ತಂಡದಲ್ಲಿ ಅವಕಾಶ ನೀಡಿದ್ದರು. ಫೈನಲ್‌ನಲ್ಲಿ ಆರಂಭದಲ್ಲೇ ಲಯ ಕಳೆದುಕೊಂಡರೂ ಬೇಗನೇ ತಿರುಗೇಟು ನೀಡಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಕೇವಲ 58 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಅಲ್ಲಿಂದ 20 ಓವರ್‌ಗಳ ಅಂತ್ಯಕ್ಕೆ ಲಂಕಾ ತಂಡ 6 ವಿಕೆಟ್​ ನಷ್ಟಕ್ಕೆ 170 ರನ್ ಗಳಿಸಿತು. ತಂಡದ ಈ ಬೃಹತ್​ ಟಾರ್ಗೆಟ್‌ ನಲ್ಲಿ ಭಾನುಕ ರಾಜಪಕ್ಷ ದೊಡ್ಡ ಪಾತ್ರವನ್ನು ವಹಿಸಿ 45 ಎಸೆತಗಳಲ್ಲಿ 71 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರ ಇನ್ನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು 3 ಬೌಂಡರಿ ಕೂಡ ಸೇರಿದ್ದವು.

ಇದೇ ವೇಳೆ ಹಸರಂಗ ಕೇವಲ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಪಾಕಿಸ್ತಾನ ಪರ ಹ್ಯಾರಿಸ್ ರೌಫ್ ಗರಿಷ್ಠ 3 ವಿಕೆಟ್ ಪಡೆದರು. ಅದೇ ವೇಳೆ ಶಾದಾಬ್ ಖಾನ್, ನಸೀಮ್ ಶಾ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.

ನಸೀಮ್ ಶಾ ಶ್ರೀಲಂಕಾಕ್ಕೆ ಮೊದಲ ಹೊಡೆತದ ರುಚಿ ನೋಡಿದರು. ಮೊದಲ ಓವರ್​ನಲ್ಲೇ ಮೆಂಡಿಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮೆಂಡಿಸ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಬಳಿಕ ಹಾರಿಸ್ ರೌಫ್ ಎರಡನೇ ವಿಕೆಟ್ ಪಡೆದರು. ಪಾಥುಮ್ ನಿಸ್ಸಾಂಕ 8 ರನ್ ಗಳಿಸಿ ಬಾಬರ್ ಅಜಮ್​ಗೆ ಕ್ಯಾಚ್ ನೀಡಿದರು. ಮೂರನೇ ವಿಕೆಟ್ ಪಡೆದ ರೌಫ್, 1 ರನ್ ಗಳಿಸಿದ್ದ, ದನುಷ್ಕಾ ಗುಣತಿಲಿಕಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಶ್ರೀಲಂಕಾ ಪರ ವನಿಂದು ಹಸರಂಗಾ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಅವರ ಬ್ಯಾಟಿಂಗ್​ನಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಕೂಡ ಸೇರಿದ್ದರೆ, ಅವರ ಸ್ಟ್ರೈಕ್ ರೇಟ್ 171.42 ಆಗಿತ್ತು. ಹಸರಂಗ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೈಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಇಫ್ತಿಕರ್ ಅಹ್ಮದ್ ನಾಲ್ಕನೇ ವಿಕೆಟ್ ರೂಪದಲ್ಲಿ ಧನಂಜಯ್ ಡಿಸಿಲ್ವಾ ಅವರನ್ನು ಪೆವಿಲಿಯನ್​ಗೆ ಸೇರಿಸಿದರು. ಧನಂಜಯ್ 21 ಎಸೆತಗಳಲ್ಲಿ 28 ರನ್ ಗಳಿಸಿದರು. ಶಾದಾಬ್ ಖಾನ್ ಶ್ರೀಲಂಕಾಕ್ಕೆ ಐದನೇ ಹೊಡೆತ ನೀಡಿದರು. ಅವರು 3 ಎಸೆತಗಳಲ್ಲಿ 2 ರನ್ ಗಳಿಸಿದ ಶ್ರೀಲಂಕಾ ನಾಯಕ ದಸುನ್ ಶನಕಾ ಅವರನ್ನು ಬೌಲ್ಡ್ ಮಾಡಿದರು.

ಪವರ್ ಪ್ಲೇನಲ್ಲಿ ಪಾಕಿಸ್ತಾನದ ಬೌಲರ್‌ಗಳ ಪ್ರಾಬಲ್ಯ: ಪಾಕಿಸ್ತಾನದ ಬೌಲರ್‌ಗಳು ಇನಿಂಗ್ಸ್‌ನಲ್ಲಿ ಶ್ರೀಲಂಕಾದ ಪವರ್ ಪ್ಲೇ ಮೇಲೆ ಪ್ರಾಬಲ್ಯ ಸಾಧಿಸಿದರು. 6 ಓವರ್‌ಗಳ ಆಟದಲ್ಲಿ ನಸೀಮ್ ಶಾ ಮತ್ತು ಹ್ಯಾರಿಸ್ ರವೂಫ್ ಶ್ರೀಲಂಕಾದ ಮೂರು ವಿಕೆಟ್‌ಗಳನ್ನು ಪಡೆದರು. ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು 36 ಎಸೆತಗಳಲ್ಲಿ 42 ರನ್ ಗಳಿಸಿದರು. ಇದರಲ್ಲಿ ಹಾರಿಸ್ ರವೂಫ್ ಎರಡು ಮತ್ತು ನಸೀಮ್ ಶಾ ಒಂದು ವಿಕೆಟ್ ಪಡೆದರು.

ಪಾಕ್ ಇನ್ನಿಂಗ್ಸ್: 171 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನಕ್ಕೆ ಮೊದಲ ಓವರ್​ನಲ್ಲೇ ಪ್ರಮೋದ್ ಮಧುಶನ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಿತ್ತು ಆಘಾತ ನೀಡಿದರು. ಎರಡನೇ ಎಸೆತದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅವರ ವಿಕೆಟ್ ಕಬಳಿಸಿದರೆ, ಮುಂದಿನ ಎಸೆತದಲ್ಲಿ ಫಖರ್ ಜಮಾನ್ ವಿಕೆಟ್ ತೆಗೆಯುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಪೆಟ್ಟು ನೀಡಿದರು.

ಪವರ್ ಪ್ಲೇನಲ್ಲಿ ಪಾಕಿಸ್ತಾನ 37 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಮಧುಶನ್ ಮೊದಲ ಸ್ಪೆಲ್‌ನಲ್ಲಿ 2 ಓವರ್‌ಗಳಲ್ಲಿ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದರು. ಆರಂಭಿಕ ಆಘಾತವನ್ನು ನಿಭಾಯಿಸಿದ ನಂತರ ರಿಜ್ವಾನ್-ಇಫ್ತಿಕರ್ ಜೋಡಿ ಕ್ರಮೇಣ ಪಂದ್ಯವನ್ನು ಪಾಕ್ ಪರ ವಾಲಿಸಲು ಪ್ರಯತ್ನಿಸಿತು.

ಮೊದಲ 10 ಓವರ್‌ಗಳಲ್ಲಿ ಪಾಕಿಸ್ತಾನ 68 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು. ಆದರೆ 14ನೇ ಓವರ್​ನಲ್ಲಿ ಮಧುಶನ್ ದಾಳಿ ನಡೆಸಿ, ಇಫ್ತಿಕರ್ ವಿಕೆಟ್ ಪಡೆದರು. ಇಫ್ತಿಕರ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ, 31 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ಆದರೆ ಅಗತ್ಯ ರನ್ ರೇಟ್ ಹೆಚ್ಚಿದ್ದರಿಂದ ಪಾಕಿಸ್ತಾನ ಒತ್ತಡಕ್ಕೆ ಸಿಲುಕಿತು.

ದೊಡ್ಡ ಹೊಡೆತಕ್ಕೆ ಯತ್ನಿಸಿದ ಮೊಹಮ್ಮದ್ ರಿಜ್ವಾನ್, ಚಮಿಕಾ ಕರುಣಾರತ್ನ ಎಸೆತದಲ್ಲಿ ಬಲಿಯಾದರು. ಅಂತ್ಯದಲ್ಲಿ ರನ್‌ಗಳ ಒತ್ತಡದಲ್ಲಿ ಪಾಕ್ ತಂಡ ಬೇಗ ವಿಕೆಟ್ ಕಳೆದುಕೊಂಡಿತು. ಹೀಗಾಗಿ ಅಂತಿಮವಾಗಿ ಪಾಕಿಸ್ತಾನ 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ