NEWSದೇಶ-ವಿದೇಶನಮ್ಮರಾಜ್ಯ

MSRTC ನೌಕರರ ಮುಷ್ಕರ: ‘ಸದಾವರ್ತೆ ಎಸ್‌ಟಿಗೆ ಕಳಂಕ’, ಬರೀ ಬೊಗಳೆ…’ ಈ ಟೀಕೆ ಮಾಡಿದವರು ಯಾರು?

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ನಾಳಿನ ಅಂದರೆ ಸೆ.4ರಂದು ಬೆಳಗ್ಗೆ ಏಳು ಗಂಟೆಗೆ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಪರಿಹಾರ ತೆಗೆದುಕೊಳ್ಳಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ನಾವು ಪ್ರಯಾಣಿಸುವ ಸಾರ್ವಜನಿಕರಲ್ಲಿ ಕ್ಷಮೆಯಾಚಿಸುತ್ತಿದ್ದೇವೆ’ ಎಂದು ಸಚಿವ ಉದಯ್ ಸಾಮಂತ್ ಭೇಟಿಯ ನಂತರ ಎಸ್‌ಟಿ ಕರ್ಮಾಚಾರಿ ಕ್ರಿಯಾ ಸಮಿತಿ ಅಧ್ಯಕ್ಷ ಸಂದೀಪ್ ಶಿಂಧೆ ಹೇಳಿದರು.

ಈ ನಡುವೆ ರಾಜ್ಯದಲ್ಲಿ ಎಸ್ಟಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ವಿಚಾರವಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕ್ರಿಯಾ ಸಮಿತಿ ಹಾಗೂ ಸಚಿವ ಉದಯ್ ಸಾಮಂತ್ ಮಂಗಳವಾರ ಅಂದರೆ ಇಂದು ಮಧ್ಯಾಹ್ನ ಸಭೆ ನಡೆಸಿದರು.

ಸಭೆ ಬಳಿಕ ನೌಕರರ ಕ್ರಿಯಾ ಸಮಿತಿ ಅಧ್ಯಕ್ಷ ಸಂದೀಪ್ ಶಿಂಧೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಾವು ನಾಳೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಮಾತನಾಡುತ್ತೇವೆ ಎಂದು ಉದಯ್ ಸಾಮಂತ್ ಹೇಳಿ ಈಗ ಹೋರಾಟ ಹಿಂಪಡೆಯಿರಿ ಎಂದರು ಅದಕ್ಕೆ ನಾವು ಕಳೆದ ಬಾರಿಯ ಪರಿಸ್ಥಿತಿಯನ್ನು ಅವರಿಗೆ ತಿಳಿಸಿದ್ದೇವೆ ಹಾಗಾಗಿ ಇಂದು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸಂದೀಪ್ ಶಿಂಧೆ ಹೇಳಿದರು.

ವಕೀಲ ಗುಣರತ್ನ ಸದಾವರ್ತೆ ವಿರುದ್ಧ ವಾಗ್ದಾಳಿ: ವಕೀಲ ಗುಣರತ್ನ ಸದಾವರ್ತೆ ಎಸ್ಟಿ ನೌಕರರನ್ನು ದಾರಿ ತಪ್ಪಿಸಿದರೇ ಎಂಬ ಪ್ರಶ್ನೆಯನ್ನು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಸಂದೀಪ್ ಶಿಂಧೆ, ನಾವು ನೌಕರರನ್ನು ತಪ್ಪುದಾರಿಗೆಳೆಯುತ್ತಿದ್ದವಾ? ವಕೀಲ ಗುಣರತ್ನ ಸದಾವರ್ತೆ ಎಸ್ಟಿ ಕಾರ್ಮಿಕ ಚಳವಳಿಯ ಕರಾಳ ಛಾಪು. ಕೇವಲ ಜೋರಾಗಿ ಕಿರುಚಾಡಿದರೆ ಎಸ್ಟಿ ಉದ್ಯೋಗಿ ಏನು ಮಾಡಲು ಸಾಧ್ಯ?

ಹಾಗಾಗಿ ಗುಣರತ್ನ ಸದಾವರ್ತೆ ಎಸ್ಟಿ ನೌಕರರ ಚಳವಳಿಗೆ ಕಳಂಕ’ ಅಲ್ಲದೆ ಅವರು ಬೊಗಳೆ ಬಿಡುವವರು ಎಂದು ಸದಾವರ್ತೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ ಶಿಂಧೆ ಅವರು ಸಂಸ್ಥೆಯ ನೌಕರರು ಅಂದು ಆತ್ಮಹತ್ಯೆ ಮಾಡಿಕೊಳ್ಳಲು ಸದಾವರ್ತೆ ಅವರೇ ಕಾರಣ ಎಂದು ಆರೋಪಿಸಿದರು.


Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು