NEWSರಾಜಕೀಯಲೇಖನಗಳು

ಸಾರಿಗೆ ನೌಕರರ ಮುಷ್ಕರ ಒಡೆದೆವೂ ಎಂದು ಹಿಗ್ಗುತ್ತಿದ್ದರೆ ಅದು ಭಂಡತನದ ಪರಮಾವಧಿ….

ಸಾರಿಗೆ ಸಿಬ್ಬಂದಿ ಒಡಲುರಿ ಅಸಾಯಕತೆಯಿಂದಾಗಿ ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿರಬಹುದು ಆದರೆ, ಅರಿದಂತಿಲ್ಲ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಒಡೆದೆವೂ ಎಂದು ಹಿಗ್ಗುತ್ತಿದ್ದರೆ ಅದು ಭಂಡತನದ ಪರಮಾವಧಿಯಾದೀತು. ಅದಕ್ಕೆ ಕಾರಣವೂ ಇಲ್ಲದಂತಿಲ್ಲ. ಸಾರಿಗೆ ಸಿಬ್ಬಂದಿ ಒಡಲುರಿ ಅಸಾಯಕತೆಯಿಂದಾಗಿ ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿರಬಹುದು. ಆದರೆ, ಅರಿದಂತಿಲ್ಲ. ಮುಂದಿನ ದಿನಗಳಲ್ಲಿ ಈ ಹೋರಾಟ ಜ್ವಾಲಾಮುಖಿಯಾಗಬಹುದು. ಆ ವೇಳೆ ಇಡೀ ವಿಶ್ವವೇ ಅರೆಹೊಟ್ಟೆಯಲ್ಲಿ ಬದುಕುತ್ತಿರುವ ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವುದರಲ್ಲಿ ಎರಡನೇ ಮಾತಿಲ್ಲ ಎಂಬುವುದು ನನ್ನ ಅಚಲವಾದ ನಂಬಿಕೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈ ನಂಬಿಕೆ ನನ್ನದಷ್ಟೇ ಅಲ್ಲ ಹೊಟ್ಟೆ ತುಂಬ ಅನ್ನ ಕೊಡಿ ಎನ್ನುತ್ತ ಬೀದಿಗಿಳಿದು ಕಳೆದ ಏಪ್ರಿಲ್‌ 7ರಿಂದ 21ರವರೆಗೆ ಹೋರಾಟ ಮಾಡಿದ ಸುಮಾರು 1.30ಲಕ್ಷ ಸಾರಿಗೆ ನೌಕರರು ಮತ್ತು ಅವರ ಕುಟುಂಬದವರು ಮತ್ತು ಹೋರಾಟಕ್ಕೆ ಬೆಂಬಲ ನೀಡಿದ ಕೋಟ್ಯಂತರ ಜನರ ಬಲವಾದ ನಂಬಿಕೆಯೂ ಹೌದು!

ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯ ಅಸಾಯಕತೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರಕ್ಕೆ ಸದ್ಯಕ್ಕೆ ವರವಾಗಿದೆ. ಈ ಸಿಬ್ಬಂದಿ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಕ್ಕೂ ಹೊಟ್ಟೆತುಂಬಾ ಅನ್ನದ ಪ್ರಶ್ನೆ ಕಾರಣವಾಗಿತ್ತು. ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ಮರಳುವುದಕ್ಕೂ ಈ ಅನ್ನವೇ ಕಾರಣವಾಗಿದೆ. ಸ್ವಾಭಿಮಾನದಿಂದ ಬದುಕಲು ಶ್ರಮಕ್ಕೆ ತಕ್ಕ ಪ್ರತಿಫಲ ಬೇಕೆನ್ನುವುದು ಇವರ ಬೇಡಿಕೆಯಾಗಿತ್ತು. ಈಗಲು ಅದು ಬೂದಿಮುಚ್ಚಿದ ಕೆಂಡದಂತಿದೆ.

ನಿಷ್ಕಾರಣವಾಗಿ ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಲೆಂದೇ ಸಂಚಿನ ಭಾಗವಾಗಿ ಎಲ್ಲಾ ಸಿಬ್ಬಂದಿಯನ್ನು ಒಗ್ಗೂಡಿಸುವುದು ಸಾಧ್ಯವೇ ಇಲ್ಲ. ಹಸಿವು ಮಾತ್ರ ಈ ಎಲ್ಲಾ ಸಿದ್ಧಾಂತ, ರಾಜಕೀಯ ಪಕ್ಷಗಳು, ಪ್ರಭಾವಗಳನ್ನು ಮೀರಿ ಹೋಗುವುದಕ್ಕೆ ನೆರವಾಗುತ್ತದೆ, ಸಿಬ್ಬಂದಿಯಲ್ಲಿ ಕಾಂಗ್ರೆಸ್ ಒಲವಿರುವವರು, ಬಿಜೆಪಿ ಬೆಂಬಲಿಗರು, ಯಡಿಯೂರಪ್ಪ ಅಭಿಮಾನಿಗಳು, ಸಿದ್ದರಾಮಯ್ಯರನ್ನು ಪ್ರೀತಿಸುವವರು, ಜಾತಿ ರಾಜಕಾರಣದಿಂದ ಯಾವುದೋ ನಾಯಕನ ಬಗ್ಗೆ ಅಂಧಾಭಿಮಾನ ಬೆಳೆಸಿಕೊಂಡವರು ಇರುತ್ತಾರೆ.

ಇಂಥವರ ನಡುವೆ ಸಮನ್ವ ಸಾಧ್ಯವಾಗುವುದಕ್ಕೆ ಪ್ರಾಮಾಣಿಕ ಕಾರಣ ಮತ್ತು ಗುರಿ ಇದ್ದಾಗ ಮಾತ್ರ. ಆದರೂ, ಈ ಹೋರಾಟ ಗುರಿ ಮುಟ್ಟದೇ ವಿಫಲವಾಯಿತು. ಬಹುತೇಕ ಕಾರ್ಮಿಕರು ಕೆಲಸಕ್ಕೆ ಮರಳಿದರು. ಇನ್ನು ಕೆಲವರಿಗೆ ಅಮಾನತು, ವಜಾ, ವರ್ಗಾವಣೆಯಂತ ಶಿಕ್ಷೆ ನೀಡಿದೆ. ಈ ಭಂಡತನವನ್ನೆ ನಮ್ಮ ಮನೆ ಎಂಬಂತೆ ಮಾಡಿಕೊಂಡಿರುವ ಸಾರಿಗೆಯ ನಾಲ್ಕೂ ಸಂಸ್ಥೆಗಳು. ಮುಷ್ಕರ ಆರಂಭವಾದಾಗಿನಿಂದಲೂ ಒಂದೇ ಒಂದು ಸಂಧಾನಕ್ಕೂ ಬಾರದ ರಾಜ್ಯ ಸರ್ಕಾರದ ನಿಲುವು ಮೊದಲ ದಿನದಿಂದಲೂ ಮುಷ್ಕರ ಹತ್ತಿಕ್ಕುವ ನಡೆಯಲ್ಲಿ ಅಚಲವಾಗಿತ್ತು. ಹೀಗಾಗಿ ಅದು ಕೋಡಿಹಳ್ಳಿ ಚಂದ್ರಶೇಖರ್‌ಗೂ ಸಾರಿಗೆ ಸಿಬ್ಬಂದಿಗೂ ಏನು ಸಂಬಂಧ. ಅವರೇನಾದರೂ ಸುತ್ತಿಗೆ ಹಿಡಿದಿದ್ದಾರಾ? ಸ್ಪಾನರ್‌ ಏನಾದರೂ ಹಿಡಿದಿದ್ದಾರಾ? ಎನ್ನುವ ರೀತಿಯಲ್ಲಿ ಚಿಲ್ಲರೆ ಪ್ರಶ್ನೆಗಳನ್ನೇ ಮುಂದಿಟ್ಟಿತ್ತು.

ಹೋರಾಟದ ನಾಯಕ ಯಾರೇ ಇರಲಿ ಸಿಬ್ಬಂದಿಯ ಬೇಡಿಕೆ ಎಷ್ಟು ಮುಖ್ಯ ಅನ್ನುವುದನ್ನು ಪರಿಗಣಿಸಬೇಕಿತ್ತು. ಆದರೆ, ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ರಾಜ್ಯಸರ್ಕಾರದ ಒಬ್ಬನೇ ಒಬ್ಬ ಪ್ರತಿನಿಧಿ ಹಾಜರಾಗದೆ ನಿರ್ಲಕ್ಷ ಮೆರೆಯಿತು. ಸಾರಿಗೆ ಸಿಬ್ಬಂದಿ ಹೋರಾಟಗಳ ಇತಿಹಾಸದಲ್ಲಿ ಇದೇ ಮೊದಲ ಸಾರಿಗೆ ಸಚಿವ ಅಥವಾ ಯಾವೊಬ್ಬ ಸರ್ಕಾರದ ಪ್ರತಿನಿಧಿ ಹಾಜರಾಗಲಿಲ್ಲ. ಇನ್ನು ಈಗಾಗಲೇ 8ಬೇಡಿಕೆಗಳನ್ನು ಈಡೇರಿಸಿದ್ದೇವೆ ಇನ್ನೊಂದು ಬೇಡಿಕೆ ಈಡೇರಿಸುವುದು ಸಾಧ್ಯವಿಲ್ಲ ಎನ್ನುವುದು ಸರ್ಕಾರದ ನಿಲುವು. ಆದರೆ ಇವರು ಈಡೇರಿಸಿದ್ದೇವೆ ಎನ್ನುವ ಬೇಡಿಕೆಗಳಲ್ಲೂ ಹಲವಾರು ದೋಷಗಳು ಇನ್ನು ರಕ್ಕಸ ಪ್ರವೃತ್ತಿಯಲ್ಲೇ ಸಿಬ್ಬಂಧಿಯನ್ನು ಬಾಧಿಸುವ ನಿಟ್ಟಿನಲ್ಲೇ ಮೆರೆವಣಿ ಹೊರಟಿರುವುದು. ಆ ಬೇಡಿಕೆ ಈಡೇರಿಸಿದ್ದೇವೆ ಎನ್ನುವರರ ಕಣ್ಣನ್ನು ಇನ್ನೂ ತೆರೆಸದಿರುವುದು ಕುರುಡು ಕಾಂಚಾಣವನ್ನೂ ಅಣಕಿಸುವಂತಿದೆ.

ಇನ್ನು ಸಾರಿಗೆ ಸಿಬ್ಬಂದಿ ಜನಸಾಮಾನ್ಯರಿಗೆ ತೊಂದರೆ ನೀಡುವ ಕಾರಣದಿಂದಲೇ ಪ್ರತಿಭಟನೆ ನಡೆಸಲಿಲ್ಲ. ಆದರೆ ಸರ್ಕಾರವನ್ನು ಟೀಕಿಸ ಬೇಕಾದ ಜನರು ಸಾರಿಗೆ ಸಿಬ್ಬಂದಿ ಬಗ್ಗೆ ಕೆಂಗಣ್ಣು ಬೀರುವಂತೆ ವ್ಯವಸ್ಥಿತ ಪ್ರಯತ್ನ ನಡೆಯಿತು. ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಜೀವನ ಖಾತ್ರಿಪಡಿಸಬೇಕಿದ್ದ ಸರ್ಕಾರ ಅವರನ್ನು ಸೇವೆಯಿಂದ ವಜಾ ಮಾಡಿ ಅನ್ನವನ್ನೇ ಕಿತ್ತುಕೊಳ್ಳುವ ಅಮಾನವೀಯ ನಿರ್ಧಾರ ಕೈಗೊಂಡಿತ್ತು. ಇದರಿಂದ ಒಂದಷ್ಟು ಮಂದಿ ಅಮಾನತಿಗೆ ಒಳಗಾದರೂ ಸರ್ಕಾರದ ಭಂಡ ಧೈರ್ಯದ ಗುಟ್ಟಾದರೂ ಏನು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

ಇನ್ನು ವರ್ಷಗಳ ಕಾಲ ಸಾರಿಗೆ ಸಿಬ್ಬಂದಿ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಬಿಂಬಿಸಿಕೊಳ್ಳುತ್ತಿದ್ದ ಕಾರ್ಮಿಕ ಸಂಘಟನೆಯ ಒಂದು ವರ್ಗದಲ್ಲಿ ಪ್ರತಿಭಟನೆಯೇ ಮುಖ್ಯ ಎನ್ನುತ್ತಿದ್ದವರು ಅವರ ಹಸಿವಿನ ಧ್ವನಿಗೆ ಧ್ವನಿಗೂಡಿಸಲೇ ಇಲ್ಲ. ಸಿಬ್ಬಂದಿಯ ಹೋರಾಟಕ್ಕೆ ಬೆಂಬಲ ಹೋಗಲಿ ಒಂದೇ ಒಂದು ಅನುಕಂಪದ ಮಾತುಗಳನ್ನು ಆಡಲಿಲ್ಲ. ಹಲವು ವರ್ಷಗಳ ಕಾಲ ಸಾರಿಗೆ ಸಿಬ್ಬಂದಿಯ ಮುಷ್ಕರ ವನ್ನು ಸಂಘಟಿಸುತ್ತಲೇ ಬಂದಿದ್ದ ಎಡಪಂಥೀಯ ಸಂಘಟನೆ ಮೌನ ವಹಿಸಿತ್ತು.

ವಿಚಿತ್ರ ಎಂದರೆ ಪ್ರತಿಭಟನೆ ವಿರೋಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಎಡಪಂಥೀಯ ಪಕ್ಷಗಳ ಸಕ್ರಿಯ ಕಾರ್ಯಕರ್ತರು ಮತ್ತು ಬಹುತೇಕ ಬ್ರಾಹ್ಮಣರ ನಿಲುವು ( ಕೆಲವು ಅಪವಾದಗಳನ್ನು ಹೊರತುಪಡಿಸಿ) ಒಂದೇ ರೀತಿ ಇರುತ್ತಿತ್ತು. ಈಗಲೂ ಅದು ಮುಂದುವರಿದಿದೆ. ಎಡಪಂಥೀಯ ಪಕ್ಷಗಳ ನಾಯಕರಂತೂ ಇದು ಹೋರಾಟಕ್ಕೆ ಸಕಾಲವಲ್ಲ. ಕೊರೊನಾ ರೋಗಿಗಳು ಆಸ್ಪತ್ರೆಗೆ ಓಡಾಡುವುದಕ್ಕೆ ಸಾರಿಗೆ ಸಂಸ್ಥೆಯ ಬಸ್ ಗಳ ಅಗತ್ಯ ಇದೆ. ಈ ಕಾರಣದಿಂದಾರೂ ಪ್ರತಿಭಟನೆಗೆ ಸ್ಥಗಿತಗೊಳಿಸುವುದು ಒಳಿತು ಎಂದು ಸಲಹೆ ನೀಡುತ್ತಿದ್ದರು.

ಸಾರಿಗೆ ನೌಕರರ ಮುಷ್ಕರದ ಸಂಗ್ರಹ ಚಿತ್ರ

ಸದಾ ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಮಾತುಗಳನ್ನಾಡುತ್ತಿದ್ದ ಪ್ರತಿಭಟನೆಗಳನ್ನು ಸಂಘಟಿಸುತ್ತಿದ್ದ ಎಡಪಂಥೀಯ ಪಕ್ಷಗಳ ನಿಲುವಿನಲ್ಲಿ ಏಕಾದರೂ ಈ ಬದಲಾವಣೆಯಾಗಿರಬಹುದು? ಒಂದೋ ಅದು ಕೇವಲ ಕಾರ್ಮಿಕರ ಕಷ್ಟಕ್ಕಷ್ಟೇ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿ ಕಿತ್ತೆಸೆದು ಅದರ ನೆಲೆ ಜನಸಮುದಾಯದಲ್ಲಿ ವಿಸ್ತರಿಸುವ ಉದ್ದೇಶ ಇರಬೇಕು. ಈ ಕಾರಣದಿಂದಲೇ ಸಾರಿಗೆ ಸಿಬ್ಬಂದಿ ಹೋರಾಟವನ್ನು ನಿರ್ಲಕ್ಷಿಸಿ ಜನಸಾಮಾನ್ಯರ ಸಮಸ್ಯೆ ಎಂಬ ಹೆಚ್ಚು ವಿಸ್ತೃತವಾದ ನೆಲೆಗಟ್ಟಿಗೆ ತನ್ನನ್ನು ವರ್ಗಾಯಿಸಿ ಕೊಂಡಿರಬೇಕು. ಅಥವಾ ಎಡಪಂಥೀಯ ಪಕ್ಷದ ಕಾರ್ಮಿಕ ಸಂಘಟನೆ ಹಳಸಲಾಗಿ ಸಿಬ್ಬಂದಿಯಿಂದ ತಿರಸ್ಕೃತಗೊಂಡಿರಬೇಕು. ಇದನ್ನು ಬಿಟ್ಟರೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದ ಈ ಅವಕಾಶವನ್ನು ಎಡಪಂಥೀಯ ಪಕ್ಷಗಳು ಕಳೆದುಕೊಂಡಿರುವುದಕ್ಕೆ ಬೇರೆ ಗಂಭೀರ ಕಾರಣಗಳೇನು ಕಾಣಿಸುತ್ತಿಲ್ಲ.

ಲಿಂಗಾಯತ ಲಾಬಿ ಪ್ರಯತ್ನ ಅಥವಾ ವ್ಯವಹಾರಿಕ ಕಾರಣಗಳೇನು ಇದ್ದಂತಿಲ್ಲ. ಆದರೆ ರೈತರ ಸಂಘಟನೆಯೊಂದರ ನಾಯಕ ಸಾರಿಗೆ ಸಿಬ್ಬಂದಿಯ ಹೋರಾಟವನ್ನು ಮುನ್ನಡೆಸಲು ಧುತ್ತನೆ ಕಾಣಿಸಿಕೊಂಡಿದ್ದನ್ನು ಮಾತ್ರ ಸಹಿಸಿಕೊಳ್ಳಲು ಎಡಪಕ್ಷಗಳ ನಾಯಕರು ಸಿದ್ಧರಿರಲಿಲ್ಲ ಎನ್ನುವುದು ಅವರ ವರ್ತನೆ, ಹೇಳಿಕೆಗಳಿಂದಲೇ ಗೊತ್ತಾಗುತ್ತಿತ್ತು. ಹೋರಾಟವನ್ನು ಇನ್ಯಾರೋ ಮಾಡಿದ್ದಾರೆಂಬ ಹಿಡಿತ ಕಳೆದುಕೊಂಡ ಪಕ್ಷಗಳಲ್ಲಿ ಹುಟ್ಟಿಕೊಂಡಿತ್ತು. ಸಾರಿಗೆ ಸಿಬ್ಬಂದಿ ಹೋರಾಟಕ್ಕೆ ಎಡಪಕ್ಷಗಳ ಬೆಂಬಲ ಇಲ್ಲದಿದ್ದದ್ದೇ ಯಡಿಯೂರಪ್ಪ ಅವರಿಗೆ ಆನೆ ಬಲ ಬಂದತ್ತಾಗಿ ಸ್ವ ಪ್ರತಿಷ್ಠೆ ಮತ್ತು ಹಠಕ್ಕೆ ಜೋತುಬಿದ್ದರು. ಒಂದರ್ಥದಲ್ಲಿ ತನಗರಿವಿಲ್ಲದಂತೆ ಎಡಪಕ್ಷಗಳು ಬಿಜೆಪಿ ಸರ್ಕಾರವನ್ನು ಬೆಂಬಲಿಸಿದವು.

ಹಾಗೆ ನೋಡಿದರೆ ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ವಾಪಸಾದ ಸಿಬ್ಬಂದಿ ಸೋತಿಲ್ಲ.ಸೋತಿರುವುದು ಮನುಷ್ಯತ್ವ. ಯಡಿಯೂರಪ್ಪ ಸರ್ಕಾರವೇನು ಗೆದ್ದಿಲ್ಲ. ತಾನೆ ಗೆದ್ದಿರುವುದಾಗಿ ಯಡಿಯೂರಪ್ಪ ಭಾವಿಸಿದರೆ ಎಡಪಕ್ಷಗಳ ನಾಯಕರು ಮುಸಿಮುಸಿ ನಕ್ಕಾರು. ಮಠಗಳಿಗೆ, ಜಾತಿಗಳಿಗೆ ಕೋಟಿ ಕೋಟಿ ರೂ. ಬಿಡುಗಡೆ ಮಾಡುತ್ತಲೇ ಇರುವ ಯಡಿಯೂರಪ್ಪ ಸರ್ಕಾರವಾಗಲೀ, ತಮ್ಮ ವೇತನ, ಭತ್ಯೆ, ಸೌಕರ್ಯಗಳನ್ನು ಯಾವುದೇ ವಿರೋಧವಿಲ್ಲದೆ ಏರಿಸುವ ನಿರ್ಧಾರ ಕೈಗೊಳ್ಳುವ ಶಾಸಕರಾಗಲೀ ತಮ್ಮ ಕುಟುಂಬದ ಭಾಗವಾಗಿರುವ ಸಾರಿಗೆ ಸಿಬ್ಬಂದಿಯನ್ನು ನಿರ್ಲಕ್ಷಿಸಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ.

ಸಿಬ್ಬಂದಿಯ ಒಡಲುರಿ ಅಸಾಯಕತೆ ಯಿಂದಾಗಿ ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿರಬಹುದು. ಆದರೆ, ಅರಿದಂತಿಲ್ಲ. ಇದನ್ನು ಸರಕಾರ ಅಷ್ಟೇ ಅಲ್ಲ ಎಡಪಕ್ಷಗಳು ಅರ್ಥಮಾಡಿಕೊಳ್ಳಬೇಕು. ಈ ವೈಫಲ್ಯದಿಂದ ಹೋರಾಟ ಸಂಘಟಿಸುವುದರಲ್ಲಿ ಎಡಪಕ್ಷಗಳು ಮಾತ್ರವೇ ನುರಿತಿವೆ ಎಂದೇನೂ ಭಾವಿಸಬೇಕಿಲ್ಲ. ಅದನ್ನು ತಾತ್ಕಾಲಿಕವಾಗಿ ದಮನ ಮಾಡಿರುವ ಸರಕಾರಕ್ಕೂ ಭವಿಷ್ಯದಲ್ಲೂ ಇದೇ ರೀತಿಯ ಅನುಕೂಲಕರ ವಾತಾವರಣ ಇರುತ್ತದೆ ಎಂದು ಹೇಳಲಾಗದು. ಸಾವಿರಾರು ಸಾರಿಗೆ ಸಿಬ್ಬಂದಿ ಪ್ರೀತಿ-ವಿಶ್ವಾಸ ಗಳಿಸುವ ಒಂದು ಒಳ್ಳೆಯ ಅವಕಾಶವನ್ನು ಯಡಿಯೂರಪ್ಪ ಕಳೆದುಕೊಂಡರು.

Leave a Reply

error: Content is protected !!
LATEST
ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !