ಬೆಂಗಳೂರು: ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದು ಸರ್ಕಾರ ಶಾಲೆಗಳನ್ನು ಆರಂಭಿಸಲು ಆತುರ ತೋರುತ್ತಿದೆಯೇ ಎಂಬ ಅನುಮಾನ ಪಾಲಕರನ್ನು ಕಾಡುತ್ತಿದೆ.
ಕೊರೊನಾ ವಿಶ್ವಮಾರಿ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಈ ಹೊತ್ತಿನಲ್ಲಿ ಶಾಲೆ ತೆರೆದರೆ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿದೆಯೇ? ಈ ರೀತಿ ಮಕ್ಕಳ ಜೀವದ ಜತೆ ಆಟವಾಡಲು ಸರ್ಕಾರ ಮುಂದಾಗುವುದು ಸರಿಯಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಖಾಸಗಿ ಶಾಲೆಗಳ ಮಾಲೀಕರ ಖಜಾನೆ ತುಂಬಿಸಲು ಈ ರೀತಿಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಕೊರೊನಾ ಸೋಂಕು ಹೆಚ್ಚಾಗುವುದೇ ಹೊರತು. ಮಕ್ಕಳ ಜ್ಞಾನ ವೃದ್ಧಿಗೆ ಯಾವುದೇ ಪ್ರಯೋಜನ ವಾಗದು ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ.
ಇನ್ನು ಕೊರೊನಾ ಮಹಾಮಾರಿಯಿಂದ ದೂರವಿರಲು ದೊಡ್ಡವರೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ. ಇಂಥ ಪರಿಸ್ಥಿಯಲ್ಲಿ ಮಕ್ಕಳು ದೂರ ದೂರ ಕೂರಲು ಸಾಧ್ಯವಿದೆಯೇ ಎಂದು ಪಾಲಕರು ಕೇಳುತ್ತಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಯಾವರೀತಿ ಕ್ರಮ ಕೈಗೊಂಡಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿಲ್ಲ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಆದರೆ, ಮಕ್ಕಳು ಒಂದಾರು ತಿಂಗಳು ಶಾಲೆಗೆ ಹೋಗದಿದ್ದರೆ ಕಲಿಕೆಯಲ್ಲಿ ಹಿಂದೆ ಬೀಳುವರೆ, ಅವರ ಜ್ಞಾನ ಕುಂದುವುದೆ? ಏಕೆ ರೀತಿಯ ನಿರ್ಧಾರಕ್ಕೆ ಸರ್ಕಾರ ಮುಂದಾಗಿದೆ. ಇದು ಎಷ್ಟು ಸರಿ ಎಂದು ಪಾಲುಕರು ಕಿಡಿಕಾರುತ್ತಿದ್ದಾರೆ.
ಮೊದಲು ಕೊರೊನಾ ನಿಯಂತ್ರಿಸುವತ್ತ ಗಮನಕೊಡಿ ಆ ನಂತರ ಶಾಲೆಗಳನ್ನು ಓಪನ್ ಮಾಡಿ. ಅದನ್ನು ಬಿಟ್ಟು ಸರ್ಕಾರ ಮಕ್ಕಳ ರೀತಿಯಲ್ಲೇ ನಡೆದುಕೊಳ್ಳುವ ಮೂರ್ಖತನವನ್ನು ತೋರಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇಂಥ ಮೂರ್ಖ ಶಿಕ್ಷಣ ಸಚಿವರು ನಮಗೆ ಬೇಕ ಎಂಬುದನ್ನು ಪಾಲಕರು ಆಕ್ರೋಶದಿಂದಲೇ ಹೊರಹಾಕುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಇಂಥ ದುಸ್ಸಾಹಸಕ್ಕೆ ಕೈಹಾಕುವುದನ್ನು ಬಿಡಬೇಕು ಎಂದು ಹೇಳುತ್ತಿದ್ದಾರೆ.
ಪಾಲಕರ ಸಲಹೆಯನ್ನು ಮೀರಿ ಶಾಲೆ ತೆರೆಯಲು ಅನುವು ಮಾಡಿಕೊಟ್ಟರೆ ದೊಡ್ಡ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಮಕ್ಕಳ ಪಾಲನಾ ಸಂಘ ಸಂಸ್ಥೆಗಳು ಮತ್ತು ಪಾಲಕರು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail