Vijayapatha - ವಿಜಯಪಥ > NEWS > ನಮ್ಮರಾಜ್ಯ > ನೀರಿನಲ್ಲಿ ಮುಳುಗಿ ಮೃತಪಟ್ಟ ಮಂಡ್ಯದ 7 ಮಂದಿಗೆ ಸಿಎಂ ನಿಧಿಯಿಂದ ಪರಿಹಾರ

ಮಂಡ್ಯ: ಜಿಲ್ಲೆಯಲ್ಲಿ ಮೂರು ದಿನದ ಹಿಂದೆ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಜಲಸಮಾಧಿಯಾದ 7 ಮಂದಿಯ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು 22 ಲಕ್ಷ ರೂ. ಪರಿಹಾರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಕೊಟ್ಟಿದ್ದಾರೆ.

ಜೂನ್ 14 ರಂದು ನಾಗಮಂಗಲ ತಾಲೂಕು ಬೀರನಹಳ್ಳಿಯ ಗೀತಾ, ಸವಿತಾ ಹಾಗೂ ಸೌಮ್ಯ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಅವರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ಶೀಘ್ರದಲ್ಲೇ ವಿತರಿಸಲು ಸೂಚನೆ ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇದೇ ತಾಲೂಕಿನ ಚೋಳಸಂದ್ರದ ರಶ್ಮಿ ಮತ್ತು ಇಂಚರಾ, ಇನ್ನೊಂದು ಪ್ರಕರಣದಲ್ಲಿ ಕೆ ಆರ್ ಪೇಟೆ ತಾಲೂಕಿನ ಹುಳಿ ಗಂಗನಹಳ್ಳಿಯ ಮಾಸ್ಟರ್ ಅಭಿಷೇಕ್ ಮತ್ತು ಆದಿಹಳ್ಳಿಯ ಕುಮಾರ್ ಅವರು ಮೃತಪಟ್ಟಿದ್ದರು. ಅವರ ಕುಟುಂಬದವರಿಗೆ ತಲಾ 2 ಲಕ್ಷ ರೂ.ಗಳನ್ನು ಪರಿಹಾರ ನಿಧಿಯಿಂದ ತುರ್ತಾಗಿ ನೀಡಲು ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.
Related posts
ಪಿಎಫ್ಐ ಬೆದರಿಕೆ : ಮೇಲುಕೋಟೆ ಶ್ರೀ ನಾರಾಯಣ ರಾಮಾನು ಜೀಯರ್ಗೆ ವೈ ಮಾದರಿ ಭದ್ರತೆ..!?
ಮಂಡ್ಯ : ಮೇಲುಕೋಟೆ ಯದುಗಿರಿಯ ...
Crime
ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಸಿಎಂ ಬಿಎಸ್ವೈ ಚಾಲನೆ
ವಿಜಯಪಥ ಸಮಗ್ರ ಸುದ್ದಿ
ಬೆಂಗಳ...
NEWS
ಬಿಎಸ್ವೈ ರಾಜ್ಯ ಸರ್ಕಾರ ದಿವಾಳಿ ಮಾಡಲು ತೀರ್ಮಾನಿಸಿದ್ದಾರೆಯೇ: ಮಾಜಿ ಸಿಎಂ ಸಿದ್ದು ಪ್ರಶ್ನೆ
ಬೆಂಗಳೂರು: ಕೇಂದ್ರ ಸರ್ಕಾರದ ವ...
NEWS
Editordev
Leave a reply