ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಇಂದಿನಿಂದ ಬಸ್ಗಳ ಸಂಚಾರ ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಈ ಮುಷ್ಕರಕ್ಕೆ ನಾಳೆ (ಡಿ.12) ಕಾಂಗ್ರೆಸ್ ಬೆಂಬಲ ಸೂಚಿಸಿದೆ.
ಸರ್ಕಾರ ಪ್ರತಿಭಟನೆಗೆ ನಿರತ ನೌಕರರಿಗೆ ಸ್ಪಂದಿಸದೆ ತಾತ್ಸಾರ ಮನೋಭಾವನೆ ತಳೆದಿದ್ದು, ಇದರಿಂದ ಇನ್ನಷ್ಟು ರೊಚ್ಚಿಗೆದ್ದಿರುವ ಸಾರಿಗೆ ನೌಕರರ ನಾಳೆಯೂ ಬಂದ್ ಮುಂದುವರಿಸುವುದಾಗಿ ಘೋಷಣೆ ಮಾಡಿದ್ದಾರೆ.
ಈ ನಾಳಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಗೊಂಡಿದ್ದು. ಬನಶಂಕರಿ ಟಿಟಿಎಂಸಿಯಲ್ಲಿ ಯಥಾಸ್ಥಿತಿ ಮುಷ್ಕರ ಮುಂದುವರಿಯಲಿದೆ. ಇನ್ನು ಈ ಮುಷ್ಕರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಯಂ ಪ್ರೇರಿತವಾಗಿ ಬೆಂಬಲ ಸೂಚಿಸಿದ್ದು, ಬನಶಂಕರಿ ಬಸ್ ನಿಲ್ದಾಣದಕ್ಕೆ ಬೆಳಗ್ಗೆ 6.30 ಗಂಟೆಗೆ ಆಗಮಿಸಿ ಹೋರಾಟದಲ್ಲಿ ನಿರತರಾಗಲಿದ್ದಾರೆ. ನಮ್ಮ ಈ ನ್ಯಾಯಯುತ ಮುಷ್ಕರಕ್ಕೆ ಬೆಂಬಲ ನೀಡುತ್ತಿರುವ ಇತರ ಸಂಘಟನೆಗಳು ಮತ್ತು ಮುಖಂಡರಿಗೆ ನಾವು ಅಭಾರಿ ಆಗಿದ್ದೇವೆ ಎಂದು ನೌಕರರು ಹೇಳಿದ್ದಾರೆ.
ಇನ್ನು ಮುಷ್ಕರಕ್ಕೆ ಇಂದಿನಂತೆ ನಾಳೆಯೂ ಎಲ್ಲಾ ವಿಭಾಗದ ಕಾರ್ಮಿಕರು ಬನಶಂಕರಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 6.30ರಿಂದ ಹೋರಾಟ ಮುಂದುವರಿಸಲಿದ್ದಾರೆ.