ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಸೇರಿದಂತೆ ದೇಶಾದ್ಯಂತ ಕಳೆದ ಕೆಲದಿನಗಳಿಂದ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರಿಂದ ಹಲವು ಕೊರೊನಾ ರೋಗಿಗಳು ಸಾವಿಗೀಡಾಗಿದ್ದಾರೆ.
ಕರ್ನಾಟಕದಲ್ಲೂ ಆಕ್ಸಿಜನ್ ಕೊರತೆಯಿಂದಾಗಿ ಜನ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆಕ್ಸಿಜನ್ ಹೆಚ್ಚುವರಿ ಪೂರೈಕೆ ಮಾಡದಿದ್ದರೆ ಆರೋಗ್ಯ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಪ್ರಧಾನಿ ಸಭೆಯಲ್ಲಿ ಹೇಳಿದ್ದಾರೆ. ಈ ಮಧ್ಯೆ ತಕ್ಷಣ ಆಕ್ಸಿಜನ್ ಪೂರೈಹಿಕೆ ಹೆಚ್ಚಿಸಿ ಎಂದು ಟ್ವಿಟ್ಟರ್ನಲ್ಲಿ ಆಂದೋಲನ ಶುರುವಾಗಿದೆ.
ಇಂದು ಬೆಳಗ್ಗೆ 10 ಗಂಟೆಯಿಂದ 12ಗಂಟೆವರೆಗೆ ಈ ಆಂದೋಲನ ಆರಂಭವಾಗಿದ್ದು. ಆಕ್ಸಿಜನ್ ಬೆಡ್ ಹೆಚ್ಚಿಸಿ…. ಪ್ರತಿದಿನ ಎಷ್ಟು ಹೊಸ ಬೆಡ್ ವಸ್ಥೆಯಾಯಿತು ವರದಿ ಕೊಡಿ….. ಬೆಂಗಳೂರಿನ ಸರ್ಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಿ…. ಯಾವ ಜಿಲ್ಲೆಯನ್ನು ಉಪೇಕ್ಷಿಸಬೇಡಿ… ಸರ್ಕಾರಿ ಸಿಬ್ಬಂದಿ ಹೆಚ್ಚಿಸಿ.. ಗುತ್ತಿಗೆನೌಕರರ ಮರೆಯಬೇಡಿ… ಒಕ್ಕೂಟ ಸರ್ಕಾರದಿಂದ ಆಕ್ಸಿಜನ್ ಪಾಲಿನ ಹಕ್ಕು ಪಡೆದಿದ್ದರ ಲೆಕ್ಕ ಕೊಡಿ….
ಜನರ ಹಕ್ಕೊತ್ತಾಯ ಪಟ್ಟಿ ಜಾರಿ ಮಾಡಿ…. ಸಿಎಂ ಮತ್ತು ಮಂತ್ರಿ ಟ್ಯಾಗ್ ಮಾಡುವುದನ್ನು ಮರೆಯಬೇಡಿ ಎಂದುಈ ಆಂದೋಲನದಲ್ಲಿ ಉಲ್ಲೇಖಿಸಲಾಗಿದೆ.
ಸರಕಾರವೇ ಜನರನ್ನು ಕೊಲ್ಲಬೇಡಿ. ಆಕ್ಸಿಜನ್ ಬೆಡ್ ಹೆಚ್ಚಿಸಿ ನಿಮಗೆ ಚುನಾವಣೆಯಲ್ಲಿ ಮತ ನೀಡಲಾದರೂ ಪ್ರಜೆಗಳ ಜೀವವನ್ನು ಕಾಪಾಡಿ..#DemandEverydayReport#Implement_Citizen's_charter#oxygenbedslekkakodi#ModiOxygenDo@CMofKarnataka@mla_sudhakar https://t.co/WJL2XQewCL pic.twitter.com/tLCt6BJWZw
— Fayaz Fakruddin (@FakruddinFayaz) April 24, 2021