CrimeNEWSನಮ್ಮಜಿಲ್ಲೆ

ವಯೋವೃದ್ಧರ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ, ನಗದು ದೋಚಿದ ದುಷ್ಕರ್ಮಿಗಳು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಪಿರಿಯಾಪಟ್ಟಣ: ತಾಲೂಕಿನ ಅಬ್ಬಳತಿ ಗ್ರಾಮದ ಹೊರವಲಯದಲ್ಲಿ ವಾಸವಿದ್ದ ವಯೋವೃದ್ಧರನ್ನು ದುಷ್ಕರ್ಮಿಗಳು ಮನೆಗೆ ನುಗ್ಗಿ ಬಾಯಿಗೆ ಬಟ್ಟೆತುರುಕಿ ಕೈಕಾಲು ಕಟ್ಟಿಹಾಕಿ ಒಡವೆ ಮತ್ತು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಬುಧವಾರ ರಾತ್ರಿ ಜರುಗಿದೆ.

ಗೋಪಿ ಮೋಹನ್ (70) ಪತ್ನಿ ಮಣಿ (63) ಎಂಬುವವರೆ ಹಲ್ಲೆಗೊಳಗಾಗಿ ಹಣ ಒಡವೆ ಕಳೆದುಕೊಂಡ ವಯೋವೃದ್ದ ದಂಪತಿಗಳು, ಇವರು ಸುಮಾರು 48 ವರ್ಷಗಳಿಂದ ಅಬ್ಬಳತಿ ಕಾಫೀ ಎಸ್ಟೇಟ್ ನಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದು ಮಗ ಬೆಂಗಳೂರಿನಲ್ಲಿ ಹಾಗೂ ಮಗಳು ಕೇರಳದಲ್ಲಿ ವಾಸವಿದ್ದಾರೆ.

ಈ ವೃದ್ಧ ದಂಪತಿ ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಕಾರಣ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದರು. ಬುಧವಾರ ರಾತ್ರಿ 10ರ ಸಮಯದಲ್ಲಿ ಮನೆಯಲ್ಲಿ ಇವರು ಟಿವಿ ನೋಡುತ್ತ ಕುಳಿತ್ತಿದ್ದರು.

ಈತನ ಹೆಂಡತಿಗೆ ಅನಾರೋಗ್ಯವಿದ್ದ ಕಾರಣ ರೂಂ ನಲ್ಲಿ ಮಲಗಿರುವ ಸಮಯದಲ್ಲಿ ಮನೆಯ ಹಿಂಭಾಗ ಕಟ್ಟಿಹಾಕಿದ್ದ ನಾಯಿ ಇದ್ದಕ್ಕಿದ್ದ ಹಾಗೆ ಬೊಗಳುತ್ತಿರುವುದನ್ನು ಗಮನಿಸಿ ಬಾಗಿಲು ತೆಗೆದು ಬಗ್ಗಿ ನೋಡಿದ ಕೂಡಲೇ 4 ಜನ ಅಪರಿಚಿತ ವ್ಯಕ್ತಿಗಳು ನನ್ನನ್ನು ತಳ್ಳಿಕೊಂಡು ಒಳನುಗ್ಗಿ, ನನ್ನನ್ನು ತಬ್ಬಿ ಹಿಡಿದು ಬಾಯಿಗೆ ಪ್ಲಾಸ್ಟಿಕ್ ಅಂಟಿಸಿ ಅದು ಅಂಟದಿದ್ದಾಗ ಬಟ್ಟೆ ತುರುಕಿ ಕೈಕಾಲು ಕಟ್ಟಿಹಾಕಿ ಲಾಂಗ್ ಮತ್ತು ಚಾಕುಗಳನ್ನು ತೋರಿಸಿದರು.

ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡುತ್ತ ಹೆದರಿಸಿ ಮೈಮೇಲಿದ್ದ ಒಡವೆ ಕೊಡುವಂತೆ ಬೆದರಿಕೆ ಒಡ್ಡುತ್ತ ಕತ್ತಿನಲ್ಲಿದ್ದ 31 ಗ್ರಾಂ ಚಿನ್ನದ ಚೈನ್ ಕಿತ್ತುಕೊಂಡು, ಬಲಗೈಲಿದ್ದ 06 ಗ್ರಾಂ ತೂಕದ ಉಂಗುರ, ಹೆಂಡತಿಯ ಕಿವಿಯಲ್ಲಿದ್ದ 04 ಗ್ರಾಂ ಓಲೆ, ಪರ್ಸಿನಲ್ಲಿದ್ದ 4 ನಾಲ್ಕು ಸಾವಿರ ನಗದು ಹಣ, ಮೂರು ಮೊಬೈಲ್, 4 ವಾಚ್ ಗಳನ್ನು ತೆಗೆದುಕೊಂಡು ಬೀರುವನ್ನೆಲ್ಲ ತಡಕಾಡಿ ಬಟ್ಟೆಗಳನ್ನೆಲ್ಲ ಚಲ್ಲಾಪಿಲ್ಲಿ ಮಾಡಿ ಬೇರೇನು ಸಿಗದಿದ್ದಾಗ ಹಿಂಬಾಗಿಲ ಮೂಲಕವೇ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್, ಡಿವೈಎಸ್ಪಿ ಯೋಗಿಂದ್ರನಾಥ್, ಸಿಪಿಐ ಜಗದೀಶ್, ಪಿಎಸ್ಐ ಸದಾಶಿವ ತಿಪ್ಪಾರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...