NEWSದೇಶ-ವಿದೇಶವಿದೇಶ

ಅಂದು ಮಾಹಿತಿ ತಂತ್ರಜ್ಞಾನ ಸಚಿವ ಇಂದು ಆಹಾರ ಡೆಲಿವರಿ ಬಾಯ್‌

ವಿಜಯಪಥ ಸಮಗ್ರ ಸುದ್ದಿ

ಬರ್ಲಿನ್: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ತಾಲಿಬಾನಿ ಉಗ್ರರ ದರ್ಬಾರ್‌ ನಡೆಯುತ್ತಿದ್ದು ಅಲ್ಲೆ ಅಶಾಂತಿಯ ವಾತಾವರಣ  ನಿರ್ಮಾಣವಾಗಿದೆ. ಇದನ್ನು ಒಂದು ವರ್ಷದ ಹಿಂದೆಯೇ ಅರಿತ ಅಫ್ಘಾನಿಸ್ತಾನದ ಸಚಿವರೊಬ್ಬರು ಅಫ್ಘಾನಿಸ್ತಾನ ತೊರೆದು ಪ್ರಸ್ತುತ ಜರ್ಮನಿಯ ಲೀಪ್ಜಿಗ್‌ನಲ್ಲಿ ಆಹಾರ ಡೆಲಿವರಿ ಕೆಲಸ ಮಾಡುತ್ತಿದ್ದಾರೆ.

ಹೌದು! ಅಫ್ಘಾನಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವರಾಗಿದ್ದ ಸಯ್ಯದ್ ಅಹ್ಮದ್ ಶಾ ಸಾದತ್, ಪ್ರಸ್ತುತ ಜರ್ಮನಿಯ ಲೀಪ್ಜಿಗ್‌ನಲ್ಲಿ ಆಹಾರ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದಾರೆ. ಜರ್ಮನಿಯ ಬೀದಿಗಳಲ್ಲಿ ಪಿಜ್ಜಾ ಡೆಲಿವರಿ ಮಾಡುವಾಗ ಅವರನ್ನು ಕೆಲವರು ಗುರುತಿಸಿದ್ದಾರೆ.

ಅಂದು ಅಫ್ಘಾನಿಸ್ತಾನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಜತೆಗಿನ ಮನಸ್ತಾಪದ ಬಳಿಕ ಸಾದತ್ ಅವರು ವರ್ಷದ ಹಿಂದೆ ದೇಶವನ್ನು ತೊರೆದಿದ್ದರು. ತಾಲಿಬಾನ್ ಮರು ಸ್ಥಾಪನೆಯ ಸುಳಿವು ಇದ್ದಿದ್ದರಿಂದ ಅವರು ಮುನ್ನೆಚ್ಚರಿಕೆಯಿಂದ ದೇಶದಿಂದ ಹೊರ ಹೋಗಿ ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾರೆ.

ಇನ್ನು ನಿತ್ಯದ ಜೀವನ ಸಾಗಿಸಲು ಅವರು ಪಿಜ್ಜಾ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇನ್ನು ಅಲ್ಲಿ ಪಿಜ್ಜಾ ಡೆಲಿವರಿ ಮಾಡುವಾಗ ಜರ್ಮನಿಯ ಪತ್ರಕರ್ತರೊಬ್ಬರ ಕಣ್ಣಿಗೆ ಬಿದ್ದಿದ್ದಾರೆ.

ಈ ವೇಳೆ ಆ ಪತ್ರಕರ್ತರು ಸಾದತ್ ಅವರನ್ನು ವಿಚಾರಿಸಿದಾಗ ಹೌದು ನಾವು ಒಬ್ಬ ಸಚಿವರಾಗಿದ್ದವರು ಎಂದು ಹೇಳಿಕೊಂಡಿದ್ದಾರೆ. ಜತೆಗೆ ಈಗ ಮಾಡುತ್ತಿರುವ ಕೆಲಸದ ಬಗ್ಗೆಯೂ ನನಗೆ ತುಂಬ ಗೌರವವಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಈಗ ನಾನು ಬಹಳ ಸರಳವಾದ ಜೀವನ ನಡೆಸುತ್ತಿದ್ದೇನೆ. ಜರ್ಮನಿಯಲ್ಲಿ ಸುರಕ್ಷಿತವಾಗಿರುವ ಅನುಭವವಾಗುತ್ತಿದೆ. ಲೀಪ್ಜಿಗ್‌ನಲ್ಲಿ ಕುಟುಂಬದೊಂದಿಗೆ ಸಂತೋಷವಾಗಿದ್ದೇನೆ.

ಜರ್ಮನ್ ಕೋರ್ಸ್ ಮಾಡಲು ಹಾಗೂ ಮತ್ತಷ್ಟು ಓದಲು ಹಣ ಉಳಿಸಲು ಬಯಸಿದ್ದೇನೆ. ನಾನು ಅನೇಕ ಕೆಲಸಗಳಿಗೆ ಅರ್ಜಿ ಸಲ್ಲಿಸಿದ್ದೇನೆ, ಆದರೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಜರ್ಮನಿಯ ದೂರಸಂಪರ್ಕ ಕಂಪೆನಿಯಲ್ಲಿ ಕೆಲಸ ಮಾಡುವುದು ನನ್ನ ಕನಸು’ ಎಂದು ಅವರು ಹೇಳಿಕೊಂಡಿದ್ದಾರೆ.

ಸುಶಿಕ್ಷಿತರಾಗಿರುವ ಸಾದತ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸಂವಹನಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರಿಂಗ್‌ನ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಈ ಮೊದಲು ಅವರು ಅರಾಮ್ಕೋ ಮತ್ತು ಸೌದಿ ದೂರಸಂಪರ್ಕ ಕಂಪನಿಯಲ್ಲಿ ಸಹ ಕೆಲಸ ಮಾಡಿದ್ದರು.

2018ರಲ್ಲಿ ಅಶ್ರಫ್ ಘನಿ ನೇತೃತ್ವದ ಅಫ್ಘನ್ ಸರ್ಕಾರದಲ್ಲಿ ಸಚಿವರಾಗಿ ಸೇರಿಕೊಂಡಿದ್ದ ಅವರು, 2020ರಲ್ಲಿ ರಾಜೀನಾಮೆ ನೀಡಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಜರ್ಮನಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಗೆ ಸ್ಥಳಾಂತರಗೊಂಡ ಕೆಲವೇ ಸಮಯದಲ್ಲಿ ಹಣಕಾಸಿನ ಕೊರತೆ ಉಂಟಾಯಿತು. ಹೀಗಾಗಿ ದೈನಂದಿನ ಜೀವನಕ್ಕಾಗಿ ಆಹಾರ ಪೂರೈಕೆ ಕೆಲಸಕ್ಕೆ ಸೇರಿಕೊಂಡರು.

ನಿತ್ಯವೂ ಸೈಕಲ್ ಏರಿ ಮನೆಯಿಂದ ಮನೆಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಒಂದು ದೇಶದ ಸಚಿವನಾಗಿ ಉನ್ನತ ಹುದ್ದೆಯಲ್ಲಿದ್ದವರು ಪಿಜ್ಜಾ ಡೆಲಿವರಿ ಮಾಡುವ ಸ್ಥಿತಿಗೆ ಬಂದಿದ್ದು ಬೇಸರ ಉಂಟುಮಾಡುತ್ತಿಲ್ಲವೇ? ಎಂದು ಕೇಳಿದರೆ, ತಮಗೆ ಕಾರ್ಮಿಕನ ಘನತೆ ತಿಳಿದಿದೆ. ಈ ಕೆಲಸ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳುತ್ತಾರೆ.

ಒಂದು ದೇಶದಲ್ಲಿ ಗೌರವಯುತ ಹುದ್ದೆ ಅಲಂಕರಿಸಿ ಈಗ ಆ ಹುದ್ದೆಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಸರಳ ಜೀವನ ನಡೆಸಲು ಹೊರಟಿರುವ ಅಫ್ಘಾನಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವರಾಗಿದ್ದ ಸಯ್ಯದ್ ಅಹ್ಮದ್ ಶಾ ಸಾದತ್ ಅವರ ನಡೆಗೆ ಎಲ್ಲೆಡೆ ಪ್ರಸಂಶೆಯ ಮಹಪೂರವೇ ಹರಿದು ಬರುತ್ತಿದೆ.

Leave a Reply

error: Content is protected !!
LATEST
ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ