NEWSದೇಶ-ವಿದೇಶವಿಜ್ಞಾನ

ಕೋವಿಡ್-19 ಎದುರಿಸಲು ವಿಜ್ಞಾನಿಗಳಿಂದ ಸೋಂಕು ನಿವಾರಕ ಸಿಂಪಡಣಾಯಂತ್ರ ಅಭಿವೃದ್ಧಿ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ದುರ್ಗಾಪುರದ ಸಿಎಸ್ ಐ ಆರ್ –ಕೇಂದ್ರೀಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿಎಂಇಆರ್ ಐ) ವಿಜ್ಞಾನಿಗಳು ಎರಡು ಸಂಚಾರಿ ಒಳಾಂಗಣ ಸೋಂಕು ನಿವಾರಕಾ ಸಿಂಪಡಣಾ ಯಂತ್ರಗಳ (ಸ್ಪ್ರೇಯರ್) ಘಟಕಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಘಟಕಗಳನ್ನು ಶುಚಿಗೊಳಿಸಲು ಮತ್ತು ವೈರಾಣುಗಳ ವಿರುದ್ಧ ಸೋಂಕು ನಿವಾರಣೆಗೆ ವಿಶೇಷವಾಗಿ ಆಸ್ಪತ್ರೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಸಂಸ್ಥೆಯ  ಪ್ರೊ. ಹರೀಶ್ ಹಿರಾನಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟರಿ ಆಧಾರಿತ ಸೋಂಕು ನಿವಾರಕಾ ಸಿಂಪಡಣಾ ಯಂತ್ರ (ಬಿಪಿಡಿಎಸ್) ಮತ್ತು ನ್ಯುಮ್ಯಾಟಿಕಲ್ ಆಪರೇಟೆಡ್ ಮೊಬೈಲ್ ಇಂಡೋರ್ ಡಿಸ್ಇನ್ಫೆಕ್ಷನ್(ಪಿಒಎಂಐಡಿ) ಎಂದು ಈ ಘಟಕಗಳನ್ನು ಕರೆಯಲಾಗುತ್ತಿದ್ದು, ಇವುಗಳನ್ನು ಪದೇ ಪದೇ ಬಳಸಬಹುದಾದಂತಹ ನೆಲದ ಮೇಲೆ ಸೋಂಕು ನಿವಾರಕಗೊಳಿಸಲು ಮತ್ತು ಶುಚಿಗೊಳಿಸಲು ಉಪಯೋಗಿಸಬಹುದು ಹಾಗೂ ಟೇಬಲ್, ಡೋರ್ ನಾಬ್ಸ್, ದೀಪದ ಸ್ವಿಚ್ಚುಗಳು, ಕೌಂಟರ್ ಟಾಪ್ ಗಳು, ಹ್ಯಾಂಡಲ್, ಡೆಸ್ಕ್, ಫೋನ್, ಕೀಬೋರ್ಡ್, ಶೌಚಾಲಯ, ನಲ್ಲಿಗಳು, ಸಿಂಕ್ ಮತ್ತು ಕಾರ್ಡ್ ಬೋರ್ಡ್ ಗಳನ್ನು ಶುಚಿ ಮತ್ತು ಸೋಂಕು ನಿವಾರಣೆ ಸಿಂಪಡಿಸಬಹುದಾಗಿದೆ. ಈ ಸೋಂಕು ನಿವಾರಕ ಘಟಕಗಳನ್ನು ನಿರಂತರವಾಗಿ ಬಳಕೆ ಮಾಡಬಹುದಾಗಿದ್ದು, ಇದರಿಂದ ಸೋಂಕಿತ ವ್ಯಕ್ತಿ ಏನಾದರು ಬಂದು ಇವುಗಳನ್ನು ಮುಟ್ಟಿದ್ದರೆ ಅಂತಹ ಸಂದರ್ಭಗಳಲ್ಲಿ ಕೊರೊನಾ ಸೋಂಕು ಜನರಿಗೆ ಹರಡುವ ಅಪಾಯವನ್ನು ತಗ್ಗಿಸುತ್ತದೆ ಎಂದುವಿವರಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

“ಸೋಂಕು ನಿವಾರಕದ ಕಣಗಳ ಗಾತ್ರ ಮತ್ತು ಸಂಖ್ಯೆ ಎರಡೂ ಕೂಡ ಪ್ರಮುಖ ಮಾನದಂಡಗಳಾಗಿದ್ದು, ಅವುಗಳು ಸೋಂಕು ನಿವಾರಕ ಸಿಂಪಡಣೆಯ ಪರಿಣಾಮವನ್ನು ನಿರ್ಧರಿಸುತ್ತವೆ. ಕೋವಿಡ್-19 ಹರಡದಂತೆ ತಡೆಯುವ ಪರಿಣಾಮಕಾರಿ ತಂತ್ರಜ್ಞಾನ ಅಭಿವೃದ್ಧಿಗೆ ಸಿಎಸ್ ಐಆರ್ –ಸಿಎಂಇಆರ್ ಐ ನಿರಂತರವಾಗಿ ಗಮನಹರಿಸುತ್ತಿದೆ. ಮುಂದಿನ ಹಂತದಲ್ಲಿ 360 ಡಿಗ್ರಿ ವ್ಯಾಪ್ತಿಯ ಸೋಂಕು ನಿವಾರಕಯಂತ್ರ ಅಭಿವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ. ಅವುಗಳನ್ನು ಶುಚಿಗೊಳಿಸುವ ಸಿಂಪಡಣಾ ಯಂತ್ರಗಳನ್ನಾಗಿ ರೂಪಿಸಿ, ಅವುಗಳನ್ನು ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಬಳಕೆ ಮಾಡಬಹುದಾಗಿದೆಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

ಈ ಸಿಂಪಡಣಾ ಯಂತ್ರಗಳು ಸ್ವಚ್ಛಗೊಳಿಸಬಹುದಾದ ಅಂಶಗಳು ಹಾಗೂ ವಿಸ್ತರಿಸಬಹುದಾದ ತೋಳನ್ನು ಹೊಂದಿರಲಿದ್ದು, ಅವು ಗುಪ್ತ ಪ್ರದೇಶಗಳಿಗೆ ಸುಲಭವಾಗಿ ತಲುಪಲಿದೆ ಮತ್ತು ಸಮಗ್ರವಾಗಿ ಶುಚಿಗೊಳಿಸಲಿದೆ. ಸದ್ಯದ ಕೋವಿಡ್-19 ಬಿಕ್ಕಟ್ಟಿನ ನಂತರವೂ ಈ ತಂತ್ರಜ್ಞಾನದ ಪ್ರಸ್ತುತತೆ ಇರುತ್ತದೆ. ಏಕೆಂದರೆ ವೈರಾಣುಗಳು ಮುಂದುವರಿಯಲಿದ್ದು, ಜ್ವರದಂತಹ ಹಲವು ಬಗೆಯ ಪ್ರಕರಣಗಳು ಜಾಗತಿಕವಾಗಿ ಪ್ರತಿ ವರ್ಷ ಹರಡುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಪ್ರೊ. ಹರೀಶ್ ಹಿರಾನಿ ಅವರು, ಈ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಮುಂದಾಗುವಂತೆ ದೇಶದ ಎಂಎಸ್ಎಂಇಗಳಿಗೆ ಕರೆ ನೀಡಿದರು ಹಾಗೂ ಭವಿಷ್ಯದಲ್ಲಿ ಶುಚಿತ್ವ ಮತ್ತು ಆರೋಗ್ಯ ರಕ್ಷಣಾ ಉಪಕರಣಗಳ ಬೇಡಿಕೆಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ  https://play.google.com/store/apps/detail

 

Leave a Reply

error: Content is protected !!
LATEST
KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ