NEWSರಾಜಕೀಯ

ನನ್ನ ವಿರುದ್ಧ ಏನೇ ದೂರು ನೀಡಲಿ, ಯಾವುದಕ್ಕೂ ಜಗ್ಗುವುದಿಲ್ಲ: ಈಶ್ವರಪ್ಪ ಖಡಕ್‌ ಮಾತು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ನನ್ನ ವಿರುದ್ಧ ಬೇಕಾದರೆ ಶಾಸಕರ ಸಹಿ ಸಂಗ್ರಹ ಮಾಡಲಿ. ನನಗೂ ಬೆಂಬಲ ಇದೆ. ನನ್ನ ವಿರುದ್ಧ ಏನೇ ದೂರು ನೀಡಲಿ, ಯಾವುದಕ್ಕೂ ಜಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಖಡಕ್ಕಾಗಿ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ಹಂಚಿಕೆಯಲ್ಲಿ ಸಿಎಂಗೆ ಪರಮಾಧಿಕಾರ ಇರಬಹುದು. ಆದರೆ, ಬಜೆಟ್​ನಲ್ಲಿ ಬಿಡುಗಡೆ ಆದ ಹಣ ಇಲಾಖೆಗೆ ಬಂದ ಬಳಿಕ ಅದು ಆ ಇಲಾಖೆಯ ಸಚಿವರಿಗೆ ಬಿಟ್ಟಿದ್ದು. ಸಚಿವರ ಗಮನಕ್ಕೆ ತಾರದೇ ಶಾಸಕರಿಗೆ ಆ ಅನುದಾನ ಹಂಚಿಕೆ ಮಾಡಿದ್ದು ಸರಿಯಲ್ಲ. ಹೀಗಾಗಿ, ರಾಜ್ಯಪಾಲರ ಸಲಹೆ ಪಡೆಯಲು ಯತ್ನಿಸಿದೆನೇ ಹೊರತು ಅವರ ವಿರುದ್ಧ ದೂರು ಕೊಟ್ಟಿಲ್ಲ ಎಂದರು.

ತಾನು ಯಡಿಯೂರಪ್ಪ ವಿರುದ್ಧ ದೂರು ನೀಡಲು ರಾಜ್ಯಪಾಲರ ಬಳಿಗೆ ಹೋಗಿದ್ದೆ ಎಂಬ ಮಾತನ್ನು ಅಲ್ಲಗಳೆದ ಅವರು, ಅನುದಾನ ವಿಚಾರದಲ್ಲಿ ನಿಯಮ ಮೀರಿದ್ದು ಕಂಡು ಬಂದಿತ್ತು. ರಾಜ್ಯಪಾಲ ವಜುಭಾಯ್ ರೂಢಭಾಯಿ ವಾಲಾ ಅವರು ಗುಜರಾತ್ ಸರ್ಕಾರದಲ್ಲಿ 9 ವರ್ಷ ಹಣಕಾಸು ಸಚಿವರಾಗಿದ್ದವರು. ಅನುದಾನ ವಿಚಾರದ ಬಗ್ಗೆ ಅವರ ಗಮನಕ್ಕೆ ತಂದು ಸರಿಯೋ ತಪ್ಪೋ ಎಂದು ಸಮಾಲೋಚನೆ ಮಾಡಲು ಹೋಗಿದ್ದೆ ಎಂದು ತಿಳಿಸಿದರು.

ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ನಾನು ಪಕ್ಷದ ನಿಷ್ಠಾವಂತನಾಗಿ ವಿರೋಧ ಮಾಡಿದ್ದೆ. ಬೇಡ ಎಂದು ಸಲಹೆ ನೀಡಿದ್ದೆ. ಆದರೂ ಕೆಲವರ ಮಾತು ಕೇಳಿ ಕೆಜೆಪಿ ಕಟ್ಟಿದರು. ಆದರೆ, ಅವರು ವಾಪಸ್ ಬಿಜೆಪಿಗೆ ಬರಲು ನಾನೂ ಒಬ್ಬ ಕಾರಣನಾಗಿದ್ದೆ. ನಾನು ಸಂಘಟನೆಗೆ ನಿಷ್ಠನಾದವನು. ನಾನು ಯಾವತ್ತಿದ್ದರೂ ರೆಬೆಲ್ ಅಲ್ಲ. ಪಕ್ಷಕ್ಕೆ ನಿಷ್ಠನಾದವನು ಎಂದು ಹೇಳಿದರು.

ಇನ್ನು ನಾನು ಮತ್ತು ಯಡಿಯೂರಪ್ಪ ಬಹಳ ವರ್ಷಗಳಿಂದ ಒಟ್ಟಿಗೆ ಹೋರಾಟ ಮಾಡಿ ಬಂದವರು. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು. ನಮ್ಮ ಮಧ್ಯೆ ಕೆಲ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆಯಾದರೂ ನಾವು ಯಾವತ್ತಿದ್ದರೂ ಒಂದೆಯೇ. ಅವರು ಈಗಲೂ ನನಗೆ ಮುಖ್ಯಮಂತ್ರಿಯೇ. ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ಮುನಿಸಿಲ್ಲ. ತಮ್ಮ ಸುತ್ತಮುತ್ತಲ ಜನರ ಮಾತನ್ನು ಅವರು ನಂಬಿದ್ಧಾರೆ. ಈಗ ನನಗೆ ಅನುದಾನದ ವ್ಯವಸ್ಥೆ ಸರಿಯಾಗಬೇಕೆಂಬ ಉದ್ದೇಶ ಮಾತ್ರ ಎಂದು ತಿಳಿಸಿದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ