ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸಿಡಿ ಪ್ರಕರಣದ ಸಂತ್ರಸ್ತೆಯು ತನ್ನ ಮದುವೆಗಾಗಿ ತಾನೇ ಬಯೋಡೇಟಾ ಟೈಪ್ ಮಾಡಿಸಿದ್ದಳು ಎನ್ನುವ ಅಂಶ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಟೈಪ್ ಮಾಡಿಸಿದ್ದ ಬಯೋಡೇಟಾ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಅಂದುಕೊಂಡಂತೆ ಆಗಿದ್ದರೆ ಆಕೆಯ ಮದುವೆ ಇಷ್ಟರಲ್ಲೇ ನೆರವೇರುತ್ತಿತ್ತು. ಒಂದು ರೀತಿ ಸಂತಸ ಸಂಸಾರ ನಡೆಸುತ್ತಿರು ಎಂದು ಹೇಳಬಹುದು.
ಆದರೆ, ಈ ಸಮಾಜದಲ್ಲಿನಡೆದಿರುವುದೇ ಬೇರೆ. ಉಳ್ಳವರು ಮತ್ತು ಹಸಿದವರ ಮಧ್ಯೆ ನಡೆಯುವ ಈ ಯುದ್ಧದಲ್ಲಿ ಯಾರೋ ಬಲಿ ಪಶುಗಳಾಗಿ ಜೀನವ ಮೌಲ್ಯವನ್ನು ಕಳೆದುಕೊಳ್ಳುತ್ತಾರೆ.
ಇಂಥ ಕೆಟ್ಟ ಸಮಾಜ ಮತ್ತು ಸಮಾಜದಲ್ಲಿ ಮುಖವಾಡ ಧರಿಸಿ ಬದುಕುವ ಜನರ ವಿರುದ್ಧ ನೊಂದ ಪ್ರತಿಯೊಬ್ಬರೂ ಸಿಡಿದು ನಿಂತರೆ ಕಾಮುಕರು ಮತ್ತು ಸಮಾಜ ದ್ರೋಹಿಗಳಿಗೆ ತಕ್ಕ ಶಿಕ್ಷೆ ನೀಡಬಹುದಾಗಿದೆ.
ಇನ್ನು ಪಾಪ ತನ್ನ ಹೆಸರು, ಜಾತಿ, ಬೆಡಗು, ಎತ್ತರ, ಕುಲ ಎಲ್ಲವನ್ನೂ ಒಳಗೊಂಡ ಬಯೋಡೇಟಾ ಮಾಡಿ ಅದೇನು ಕನಸು ಹೊತ್ತುಕೊಂಡಿದ್ದಳೋ ಆ ಹೆಣ್ಣು ಮಗಳು. ಆಕೆಗೆ ಆಸೆಯ ಲೋಕದಲ್ಲಿ ಸುತ್ತಾಡಿಸಿ ಕೊನೆಗೆ ಹಾವು ಕೋಲಿನ ಸ್ಥಿತಿಗೆ ತಂದು ನಿಲ್ಲಿಸಿದೆ ಈ ಸಮಾಜ. ಇಲ್ಲಿ ಯಾರನ್ನು ದೂರಬೇಕು ಎಂಬುವುದು ಅವರವರ ಭಾವಕ್ಕೆ ನೋಟಕ್ಕೆ ಮತ್ತು ಆಲೋಚನೆಗೆ ಬಿಟ್ಟಿದ್ದು.