NEWSದೇಶ-ವಿದೇಶನಮ್ಮರಾಜ್ಯ

ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ !

ವಿಜಯಪಥ ಸಮಗ್ರ ಸುದ್ದಿ

ಉತ್ತರ ಕನ್ನಡ: ಪತ್ನಿಯ ಮೇಲೆ ಸುಮಾರು 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ, ಸಾಯುವ ವೇಳೆಯೂ ಮಾತನಾಡದೇ ಕೊನೆಯುಸಿರೆಳೆದಿರುವ ಪ್ರಸಂಗ ಜಿಲ್ಲೆಯ ಜೊಯಿಡಾ ತಾಲೂಕಿನ ರಾಮನಗರ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಲೂಯಿಸ್ ಫರ್ನಾಂಡಿಸ್ (75) ನಿಧನ ಹೊಂದಿದವರು. ಕಳೆದ 40 ವರ್ಷಗಳ ಹಿಂದೆ ಪತ್ನಿ ಜೊತೆ ಕೋಪಿಸಿಕೊಂಡು ಲೂಯಿಸ್ ಮಾತು ಬಿಟ್ಟಿದ್ದರಂತೆ. ಇದರಿಂದ ನೊಂದ ಪತ್ನಿ ಕೆಲಸ ಅರಸಿ ಮುಂಬೈಗೆ ಹೋಗಿದ್ದರು.

ಇನ್ನು ಇತ್ತ ಕೂಲಿ ಕೆಲಸದ ಜೊತೆಗೆ ಪ್ಲಾಸ್ಟಿಕ್ ಆರಿಸುತ್ತಿದ್ದ ಲೂಯಿಸ್, ಎಂಎಸ್​ಐಎಲ್​ ಮದ್ಯದಂಗಡಿ ಪಕ್ಕ ವಾಸವಿದ್ದ. ಇತ್ತೀಚೆಗೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಗಾಳಿ, ಮಳೆಗೆ ಚಳಿಯಿಂದ ಲೂಯಿಸ್ ನಡಗುತ್ತಿದ್ದರು. ಅದನ್ನು ಗಮನಿಸಿದ ಕೆಪಿಸಿ ಕಾಲೋನಿಯ ಸ್ಥಳೀಯ ಸ್ಟಿವನ್ ತಮ್ಮ ಮನೆಗೆ ಬರುವಂತೆ ಕೇಳಿಕೊಂಡಿದ್ದಾರೆ. ಆದರೆ ಲೂಯಿಸ್ ಅವರ ಮನೆಗೆ ಹೋಗಲು ಒಪ್ಪಲಿಲ್ಲ ಎನ್ನಲಾಗಿದೆ.

ಜುಲೈ 23 ರಂದು ಸಂಜೆ ಸ್ಟಿವನ್ ವಡಾಪಾವ್ ನೀಡಿ ಲೂಯಿಸ್​​ನನ್ನು ಕೊನೆಯದಾಗಿ ಮಾತನಾಡಿಸಿಕೊಂಡು ಬಂದಿದ್ದರು. ಈ ವೇಳೆ ಸ್ಟಿವನ್, ಲೂಯಿಸ್ ಪತ್ನಿಗೆ ಕರೆ ಮಾಡಿ ವಿಚಾರ ಹೇಳಿದ್ದರಂತೆ. ಆಗ ಲೂಯಿಸ್​ ಜೊತೆ ಆತನ ಪತ್ನಿ ಮಾತನಾಡೋದಾಗಿ ಹೇಳಿದ್ದಾರೆ.

ಆದರೆ ಲೂಯಿಸ್ ಮಾತನಾಡಲು ಇಷ್ಟಪಡಲಿಲ್ಲ ಎನ್ನಲಾಗಿದೆ. ಜುಲೈ 25 ರಂದು ಸಂಜೆ 6 ಗಂಟೆ ವೇಳೆಗೆ ಲೂಯಿಸ್ ನಿಧನರಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ನಿಧನ ಹೊಂದಿದ ಬಳಿಕ ಆತನ ಪತ್ನಿಗೆ ಫೋನ್ ಮಾಡಿ ಮಾಹಿತಿ ನೀಡಲಾಗಿದೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ