ವಿಶ್ವವಿಖ್ಯಾತ ಮೈಸೂರು ದಸರಾ ನವ ತರುಣಿಯಂತೆ ಆಚರಣೆಯಲ್ಲಿರುವುದು ಕನ್ನಡಿಗರ-ಕರ್ನಾಟಕದ ಹೆಮ್ಮೆ!

ಮೈಸೂರು ಮಲ್ಲಿಗೆ, ಅರಮನೆಗಳ ನಗರಿ, ಪಾರಂಪರಿಕ ಕಟ್ಟಡಗಳುಳ್ಳ ಸಾಂಸ್ಕೃತಿಕ ನಗರಿ ಎಂಬಿತ್ಯಾದಿಯಾಗಿ ವರ್ಣನೆಗೆ ನಿಲುಕಿ ವಿಶ್ವದಲ್ಲೇ ಚಿರ ಪರಿಚಿತವಾಗಿರುವ ಮೈಸೂರು ಈಗ ಪ್ರವಾಸಿಗರ ಕೇಂದ್ರ ಬಿಂದು.
ರಾಜರ ಆಳ್ವಿಕೆ ಕಾಲದಲ್ಲಿ ಪ್ರಾರಂಭವಾದ ನಾಡಹಬ್ಬ ನವರಾತ್ರಿ ಉತ್ಸವ ಎಂದು ಬಿಂಬಿತವಾದ ವಿಶ್ವವಿಖ್ಯಾತ ಮೈಸೂರು ದಸರಾ ಇಂದಿಗೂ ನವ ತರುಣಿಯಂತೆ ಆಚರಣೆಯಲ್ಲಿರುವುದು ಕನ್ನಡಿಗರ ಮತ್ತು ಕರ್ನಾಟಕದ ವೈಭವವನ್ನು ಪ್ರಪಂಚದಾದ್ಯಂತ ಪಸರಿಸಲು ಸಾಕ್ಷಿಕರಿಸಿದಂತೆ.
ನಾಡ ಹಬ್ಬದ ಪ್ರಯುಕ್ತ ಮೈಸೂರು ನಗರವು ವಿದ್ಯುತ್ ಅಲಂಕಾರದಿಂದ ಶೃಂಗಾರಗೊಳ್ಳುವ ಸಿದ್ಧತೆ ಭರದಿಂದ ಸಾಗುತ್ತಿದೆ. ಪ್ರಮುಖವಾಗಿ ಮೈಸೂರು ಅರಮನೆ, ಕಲಾಮಂದಿರ ಭೂಮಿಗೀತ, ರಂಗಮಂದಿರ, ನಟನ ಮಂಟಪ, ದೇವರಾಜ ವಿವಿಧೋದ್ದೇಶ ಕ್ರೀಡಾಂಗಣ ಚಾಮುಡಿವಿಹಾರ ಕ್ರೀಡಾಂಗಣ, ವಸ್ತು ಪ್ರದರ್ಶನ ಅವರಣ, ಕರ್ಜನ್ ಪಾರ್ಕ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಮಕ್ಕಳಿಂದ ವೃದ್ಧರವರೆವಿಗೂ ಲಿಂಗಬೇಧವಿಲ್ಲದೆ ಎಲ್ಲರೂ ಪಾಲ್ಗೊಂಡು, ಸಂಗೀತ, ಕ್ರೀಡೆ, ಫಲಪುಷ್ಪ ವೀಕ್ಷಣೆ, ಕುಸ್ತಿಯನ್ನು ನೋಡುವುದರ ಜೊತೆಗೆ ಅರಮನೆಯಲ್ಲಿ ಜಗಮಗಿಸುವ ವಿದ್ಯುತ್ ದೀಪಗಳ ಮೋಹಕ ಚಿತ್ತಾರದ ಬೆಳಕನ್ನು ಸವಿಯುವುದರಲ್ಲಿ ತಲ್ಲಿನರಾಗುವುದಕ್ಕೆ ದಿನಗಣನೆ ಶುರುವಾಗಿದೆ.
ಇನ್ನು ಈ ಎಲ್ಲವನ್ನು ನೋಡುವವರಿಗೆ ಸಮಯ ಜಾರುವುದೆ ಮರೆತು ಹೋಗುತ್ತದೆ. ಅಷ್ಟರ ಮಟ್ಟಿಗೆ ನಾಡಹಬ್ಬ ಜನ-ಮನ ಸೂರೆಗೊಂಡಿದೆ. ಗ್ರಾಮೀಣ ಸೊಗಡಿನ ಜಾನಪದ ಗೀತೆಗಳು ಮೇಲೈಸುವಿಕೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಚಲನ ಚಿತ್ರಗೀತೆಗಳು, ಆಹಾರ ಮೇಳದಲ್ಲಿ ಬಗೆಬಗೆಯ ತಿಂಡಿ- ತಿನಿಸುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತ ರಂಜಿಸಲಿವೆ.
ಅದರಲ್ಲೂ ಚಲನ ಚಿತ್ರಗೀತೆಗಳನ್ನು ಹಾಡುವುದಕೋಸ್ಕರವೇ ‘ಯುವ ದಸರಾ’ ಎಂಬ ನಾಮಾಂಕಿತದೊಂದಿಗೆ ತೆರೆಯಲಿರುವ ಈ ಕಾರ್ಯಕ್ರಮ ಯುವ ಹೆಂಗಳೆಯರ ಹೃದಯಗಳಲ್ಲಿ ನವ ಸಿಂಚನದ ಛಾಪು ಮೂಡಿಸಿ ಪ್ರೇಮಲೋಕಕ್ಕೆ ಕರೆದೊಯ್ದರೆ, ಕಲಾ ಮಂದಿರದಲ್ಲಿ ವಿವಿಧ ಜಾನಪದ ತಂಡಗಳಿಂದ ಮೈನವಿರೇಳಿಸುವ ವಿಶಿಷ್ಟ ಕಲೆಗಳ ಪ್ರದರ್ಶನ ಜರುಗುತ್ತವೆ.
ವಸ್ತು ಪ್ರದರ್ಶನ ಆವರಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಾಲಭವನ ಬನ್ನಿ ಮಂಟಪದಲ್ಲಿ ಚಲನಚಿತ್ರ ರಂಗದ ಮಹಾನ್ ವ್ಯಕ್ತಿಗಳ ಚಿತ್ರಪ್ರದರ್ಶನ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕವಿ ಕಾವ್ಯ ಪರಂಪರೆ, ಕಾಡಾ ಕಚೇರಿ ಆವರಣದಲ್ಲಿ ಆಹಾರ ಮೇಳ, ಭೂಮಿಗೀತ, ರಂಗಮಂದಿರದಲ್ಲಿ ನಾಟಕಗಳು, ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜಗನ್ನೋಹನ ಅರಮನೆಯಲ್ಲಿ ರಂಗಗೀತೆಗಳು, ಪುರಭವನ, ನಟನ ರಂಗಮಂಟಪ ಹೀಗೆ ನಗರದ ಎಲ್ಲ ಪ್ರಮುಖ ಮಂದಿರಗಳು, ದೇವಾಲಯಗಳಲ್ಲೂ ನವ ರಾತ್ರಿಯ ಉತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತವೆ.
ನವ ರಾತ್ರಿಗಳು ಸಂಗೀತ ರಸದೌತಣದೊಂದಿಗೆ ಜಾರಿ ದಶ(ಹತ್ತನೆ) ದಿನದಂದು ಅಭಿಮನ್ಯು ಮೇಲೆ 750ಕೆಜಿಯ ಚಿನ್ನದ ಅಂಬಾರಿಯನ್ನಿಟ್ಟು ಅಂಬಾರಿಯಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿಯ ಪ್ರತಿಮೆಯನ್ನಿಟ್ಟು ಅರಮನೆಯಿಂದ ಬನ್ನಿ ಮಂಟಪದ ವರೆವಿಗೂ ಅಭಿಮನ್ಯು ಗಂಭೀರವಾಗಿ ನಯನ ಮನೋಹರವಾದ ಅಡಿಯಿಡುತ್ತ ಸಾಗುತ್ತಿದ್ದರೆ ಪ್ರೇಕ್ಷಕರ ಮನಸ್ಸು ಕೆಲಕ್ಷಣ ‘ನಾನು ಅಂಬಾರಿಯ ಮೇಲೆ ಕುಳಿತು ಹೊರಟ್ಟಿದ್ದೇನೆ ಎಂಬಂತಹ ಕಲ್ಪನಾ ಲೋಕದಲ್ಲಿ ತೇಲಿ ಮಿಂಚಿನಂತೆ ಮಾಯವಾಗದಿರದು.
ಅಭಿಮನ್ಯು ಗಾಂಭೀರದ ನಡಿಗೆಯಲ್ಲಿ ಚಿನ್ನದ ಅಂಬಾರಿಯನ್ನು ತನ್ನ ಬೆನ್ನ ಮೇಲೆ ಹೊತ್ತು ಬರುತ್ತಿರುವುದನ್ನು ವೀಕ್ಷಿಸಲೆಂದೇ ಸಾವಿರಾರು ಮೈಲಿಗಳಿಂದ ದೇಶ- ವಿದೇಶಿಗರು ಆಗಮಿಸುತ್ತಾರೆ. ಅಷ್ಟೆಯಲ್ಲ ನಮ್ಮ ನಾಡಿನಲ್ಲಿ ಜರುಗುವ ಈ ದಸರಾ ಉತ್ಸವವನ್ನು ತಮ್ಮ ತಾಯ್ನಾಡಿನ ಪತ್ರಿಕೆಗಳಲ್ಲಿ ತಮ್ಮದೇ ಶೈಲಿಯಲ್ಲಿ ಬರೆದು ಹಾಡಿ ಹೊಗಳುವುದು ಮೈಸೂರು ದಸರಾದ ಸಂಭ್ರಮಾಚರಣೆಗೆ ಹಿಡಿದ ಕನ್ನಡಿ.
ಪ್ರವಾಸಿಗರ ಬರವಣಿಗೆಯಿಂದ ಪುಳಕಿತರಾಗಿ ಆಕರ್ಷಿತರಾದ ವಿದೇಶಿಯರು ಒಮ್ಮೆಯಾದರು ಮೈಸೂರು ದಸರಾ ನೋಡಬೇಕೆಂಬ ಆಶಯ ವ್ಯಕ್ತಪಡಿಸದೆ ಇರರು. – ದೇವರಾಜು ಬೀಡನಹಳ್ಳಿ
Related

You Might Also Like
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...
KSRTC: ಯಾವುದೇ ಕಾರಣಕ್ಕೂ ನೌಕರರ ವಾರದ ರಜೆ ರದ್ದುಪಡಿಸಬಾರದು- ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಆದೇಶ
ವಾರದ ರಜೆ ರದ್ದು ಪಡಿಸಿದರೆ ಅಂಥ ಅಧಿಕಾರಿಯ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ಅಧಿಕಾರಿ ನೌಕರರಿಗೆ ಇದೆ ಬೆಂಗಳೂರು: ನೌಕರರಿಗೆ ವಾರದ ರಜೆಯನ್ನು ನಿಗದಿತ ದಿನದಂದು ನೀಡಬೇಕು...
ಚಂದ್ರಶೇಖರನಾಥ ಶ್ರೀಗಳ ಪೂರ್ವಾಶ್ರಮದ ಹೆಸರು ಕೆ.ಟಿ.ಗೋವಿಂದೇಗೌಡ
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ 80 ವರ್ಷದ ಶ್ರೀ ಚಂದ್ರಶೇಖರನಾಥ ಸ್ವಾಮಿಗಳು ಇಂದು ರಾತ್ರಿ 12.01 ರ ಸಮಯದಲ್ಲಿ ಇಹಲೋಕ ತ್ಯಜಿಸುವ ಮೂಲಕ ಶ್ರೀ ಕೃಷ್ಣನ...
ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ: ದೇವಕಿ ಸುತನ ವೇಷದಲ್ಲಿ ಮಿಂಚಿದ ಲಿಟಲ್ ಲಿಶಾನ್
ಬೆಂಗಳೂರು: ರಾಜ್ಯಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶನಿವಾರ ಅದ್ದೂರಿಯಾಗಿ ಆಚರಿಸುತ್ತಿದ್ದು, ಪುಟಾಣಿಗಳು ಶ್ರೀಕೃಷ್ಣ - ರಾಧೆ ವೇಷ ಧರಿಸಿ ಮಿಂಚುತ್ತಿದ್ದಾರೆ. ಈ ಪೈಕಿ ಮಕ್ಕಳ ಚಂದದ ಫೋಟೋಗಳನ್ನು...
ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ನಿಧನ
ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರು ಇಂದು ತಡರಾತ್ರಿ ನಿಧನಹೊಂದಿದ್ದಾರೆ. ಕೆಂಗೇರಿ ಸಮೀಪ ಶ್ರೀಮಠ ಸ್ಥಾಪನೆ ಮಾಡಿ ಶಿಕ್ಷಣ, ಆಧ್ಯಾತ್ಮಿಕ...
EPS ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ಜಾರಿಗೆ ಸಂಸತ್ತಿನಲ್ಲಿ ಒತ್ತಾಯಿಸಲು ಆಗ್ರಹಿಸಿ ಸಂಸದರ ಮನೆ ಮುಂದೆ ಧರಣಿಗೆ ನಿರ್ಧಾರ
ಮೈಸೂರು: ಇಪಿಎಸ್ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ 7500 ರೂ.+ ಇತರೆ ಸೌಲಭ್ಯಗಳನ್ನು ಜಾರಿ ಮಾಡುವ ಸಂಬಂಧ ಲೋಕಸಭೆ ಅಧಿವೇಶನದಲ್ಲಿ ಗಮನ ಸೆಳೆಯುವಂತೆ ಮೈಸೂರು ಹಾಗೂ ಚಾಮರಾಜನಗರ...
ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ
ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜಾಮೀನು...
ಮೈಸೂರು: ದಸರಾ ಆನೆಗಳಿಗೆ ನಿತ್ಯ ಅರಮನೆಯಿಂದ ಬನ್ನಿ ಮಂಟಪದವರೆಗೆ ಬೆಳಗ್ಗೆ-ಸಂಜೆ ದೈನಂದಿನ ನಡಿಗೆ ತಾಲೀಮು
ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆ ತಾಲೀಮನ್ನು ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಈಗಾಗಲೇ ಆರಂಭಿಸಿದ್ದು, ಈ ತಾಲೀಮಿನಲ್ಲಿ ಗಜಪಡೆಯ ಮೊದಲ ಹಂತದ 9 ಆನೆಗಳು...
ಸಾರಿಗೆ ನೌಕರರ ಮುಷ್ಕರಕ್ಕೆ ಸಿಎಂ, ಸಾರಿಗೆ ಸಚಿವರು, ಎಂಡಿಗಳೇ ನೇರ ಕಾರಣ: ಲಿಖಿತ ಸಮಜಾಯಿಷಿ ಕೊಡುತ್ತಿರುವ ನೌಕರರು
ಬೆಂಗಳೂರು: ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರು ಮುಷ್ಕರ ಮಾಡಲು ಮೂಲ ಕಾರಣ ನಾಲ್ಕೂ ಸಂಸ್ಥೆಯ ಆಡಳಿತ ವರ್ಗದ ಮುಖ್ಯಸ್ಥರೇ ಎಂದು ಆಪಾದನಾ ಪತ್ರ ನೀಡಿರುವ ಶಿಸ್ತುಪಾಲನಾಧಿಕಾರಿಯೂ...