ಪ್ರಯಾಣಿಕರಿಗೆ ವಿತರಿಸದ ಟಿಕೆಟ್ ಮೌಲ್ಯ ಶೂನ್ಯ: ಆದರೂ ನಿರ್ವಾಹಕರು ದಂಡಕಟ್ಟಬೇಕೆಂಬ ಅಸಂಬದ್ಧ ಸುತ್ತೋಲೆ!!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ತೆಗೆದುಕೊಂಡಿದ್ದರು. ಈಗ ಆ ರೀತಿಯ ಟಿಕೆಟ್ ಇಲ್ಲ ಬಿಡಿ. ಆದರೆ ಅಧಿಕಾರಿಗಳು ತೆಗೆದುಕೊಳ್ಳುವ ಸಣ್ಣತನದ ನಿರ್ಧಾರದಿಂದ ನೌಕರರು ಎಷ್ಟೆಲ್ಲ ಸಮಸ್ಯೆ ಅನುಭವಸಬೇಕಾಗುತ್ತದೆ ಅನ್ನೋದು ಗೊತ್ತಾಗಬೇಕಲ್ಲ, ಅದಕ್ಕಾಗಿ.
ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಶಾಂತಿ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕುಳಿತು ಒಂದು ಸಹಿ ಮಾಡಿ ಆದೇಶ ಮಾಡಿಬಿಟ್ಟರು. ಆದರೆ ಅವರಿಗೇನುಗೊತ್ತು ಕಳೆದುಕೊಂಡ ಟಿಕೆಟ್ಗೆ ಮೌಲ್ಯವೇ ಇಲ್ಲದಾಗ ನಿರ್ವಾಹಕರಿಂದ ಪ್ರತಿ ಶೂನ್ಯ ಟಿಕೆಟ್ 10 ರೂಪಾಯಿ ವಸೂಲಿ ಮಾಡಿ ಎಂಬ ಆದೇಶದಿಂದ ನೌಕರರಿಗೆ ಲಾಸ್ ಆಗುತ್ತದೆ ಎಂದು.
ಈ ರೀತಿ ಆದೇಶ ಹೊರಡಿಸುವ ಮುನ್ನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸ್ವಲ್ಪ ತಾಳ್ಮೆಯಿಂದ ಯೋಚಿಸಬೇಕಾಗುತ್ತದೆ. ಟಿಕೆಟ್ಅನ್ನು ನಿರ್ವಾಹಕರು ಕಳೆದುಕೊಂಡಿದ್ದಾರೆ ಎಂದ ಮೇಲೆ ಆ ಟಿಕೆಟ್ನಿಂದ ಸಂಸ್ಥೆಗೆ ಯಾವುದೇ ನಷ್ಟವಾಗುವುದಿಲ್ಲ. ಅಂದ ಮೇಲೆ ನಿರ್ವಾಹಕರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬೇಕು ಅವರಿಂದ ಟಿಕೆಟ್ ಹೇಗೆ ಕಳೆದುಕೊಂಡಿರಿ ಎಂಬ ಬಗ್ಗೆ ವಿವರಣೆ ಬರದುಕೊಡಿ ಎಂದು ಹೇಳಿ ಬರೆಸಿಕೊಂಡು ಆ ಬಳಿಕ ನಿಜವಾಗಲು ಟಿಕೆಟ್ ಕೆಳೆದುಹೋಗಿವೆ ಎಂದು ಖಚಿತವಾದ ಮೇಲೆ ಆ ಪ್ರಕರಣವನ್ನು ಕೈ ಬಿಟ್ಟರಾಯಿತಲ್ಲವೇ?
ಅದನ್ನು ಬಿಟ್ಟು ನಿರ್ವಾಹಕರೆ ಏನೋ ಆ ಟಿಕೆಟ್ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಅವರಿಂದ ಪ್ರತಿ ಟಿಕೆಟ್ಗೆ 10 ರೂಪಾಯಿ ವಸೂಲಿ ಮಾಡಿ ಎಂಬ ಸುತ್ತೋಲೆ ಹೊರಡಿಸಿರುವುದು ಒಂದು ರೀತಿ ಹಾಸ್ಯಸ್ಪದವಾಗಿ ಕಾಣುತ್ತಿದೆ. ಅಲ್ಲದೆ ಆ ಅಧಿಕಾರಿಯ ಮನಸ್ಥಿತಿ ಏನಾಗಿದೆ ಎಂಬುದರ ಬಗ್ಗೆಯೂ ಯೋಚಿಸಬೇಕಿದೆ ಎಂಬ ಅನುಮಾನ ಮೂಡುವಂತಿದೆ.
ಆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಹೊರಟಿಸಿರುವ ಸುತ್ತೋಲೆ? ಸುತ್ತೋಲೆ ಸಂಖ್ಯೆ: 1796/2024 (ಸಂಚಾರ ಇಲಾಖೆಯಿಂದ ಹೊರಡಿಸಲಾಗಿದೆ) ವಿಷಯ: “ಶಕ್ತಿ ಯೋಜನೆ’ಯಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರುಗಳಿಗೆ ವಿತರಿಸಲು ನೀಡಿರುವ ಪಿಂಕ್ ಟಿಕೆಟ್ಗಳನ್ನು ಕಳೆದುಕೊಂಡಾಗ ಕೈಗೊಳ್ಳಬೇಕಾದ ಕ್ರಮದ ಕುರಿತು.
ಉಲ್ಲೇಖ:ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ: 818/2023, ದಿನಾಂಕ: 07-06.2023.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 818/2023 ರನ್ವಯ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಇ.ಟಿ.ಎಂ. ಕಾರ್ಯ ನಿರ್ವಹಿಸದ ಸ್ಪಂದರ್ಭದಲ್ಲಿ ಪಿಂಕ್ ಟಿಕೆಟ್ ವಿತರಿಸಲು (ಲಗ್ಗೇಜ್ ಟಿಕೆಟ್ ರೀತಿಯಲ್ಲಿ) ತಿಳಿಸಲಾಗಿರುತ್ತದೆ. ಅದೇ ರೀತಿ ಎಲ್ಲ
ನಿರ್ವಾಹಕರಿಗೂ ಪಿಂಕ್ ಟಿಕೆಟ್ನ್ನು ವಿತರಿಸಲಾಗಿರುತ್ತದೆ. ಈ ರೀತಿ ನಿರ್ವಾಹಕರಿಗೆ ವಿತರಿಸಿರುವ ಪಿಂಕ್ ಟಿಕೆಟ್ ಕಳೆದುಹೋದ ಪಕ್ಷದಲ್ಲಿ ನಿರ್ವಾಹಕರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಯಾವುದೇ ಮಾರ್ಗದರ್ಶನ ನೀಡಿರುವುದಿಲ್ಲವೆಂದು ತಿಳಿಸಿ, ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾರ್ಗದರ್ಶನವನ್ನು ಕೋರಿ ವಿಭಾಗಗಳಿಂದ ಪತ್ರಗಳನ್ನು ಸ್ವೀಕರಿಸಲಾಗುತ್ತಿರುತ್ತದೆ.
ಈ ಸಂಬಂಧ ನಿರ್ವಾಹಕರಿಗೆ ಪಿಂಕ್ ಟಿಕೆಟ್ನ್ನು ಲಗ್ಗೇಜು ಟಿಕೆಟ್ ಮಾದರಿಯಲ್ಲಿ ವಿತರಿಸುತ್ತಿದ್ದು, ಸದರಿ ಟಿಕೆಟ್ಗಳಿಗೆ ಮುಖ ಬೆಲೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಕಳೆದುಹೋದ ಪ್ರತಿ ಟಿಕೆಟ್ಗೆ ರೂ. 10/- (ರೂ.ಹತ್ತು)ರಂತೆ ನಿಗದಿ ಮಾಡಿ, ಸದರಿ ಮೊತ್ತವನ್ನು ಸಂಬಂಧಿಸಿದ ನಿರ್ವಾಹಕರಿಂದ ಭರಿಸಿಕೊಳ್ಳುವಂತೆ ಹಾಗೂ ಸದರಿ ಟಿಕೆಟ್ ಕಳೆದ ಕಾರಣ ಅವರ ನಿರ್ಲಕ್ಷತೆಗೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಇನ್ನು ಈ ಸುತ್ತೋಲೆಯನ್ನು ಸ್ವೀಕರಿಸಿದ ಬಗ್ಗೆ ಸ್ವೀಕೃತಿಯನ್ನು ಹಾಗೂ ಕೈಗೊಂಡ ಕ್ರಮದ ಬಗ್ಗೆ ಅನುಸರಣಾ – ವರದಿಯನ್ನು ನೀಡುವುದು ಎಂದು ಮುಖ್ಯ ಸಂಚಾರಿ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ನಿರ್ವಾಹಕರಿಗೆ ಎಷ್ಟು ಕಿರಿಕಿರಿಯಾಗುತ್ತೆ ಎಂಬ ತಿಳಿವಳಿಕೆಯೂ ಇಲ್ಲದೆ ಈ ರೀತಿ ಸುತ್ತೋಲೆ ಹೊರಡಿಸುವುದು ಎಷ್ಟೆ ಮಟ್ಟಿಗೆ ಸರಿ ಇರುತ್ತದೆ. ಈ ಬಗ್ಗೆ ಏಕೆ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುವುದಿಲ್ಲ ಎಂಬುವುದೇ ಯಕ್ಷಪ್ರಶ್ನೆಯಾಗಿದೆ.
Related

You Might Also Like
ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಸಾಹಿತ್ಯಕ್ಕೆ ಸಮಾಜವನ್ನು ಬೆಸೆಯುವ ಶಕ್ತಿ ಇದೆ. ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಕನ್ನಡ ಮತ್ತು ಸಂಸ್ಕೃತಿ...
ಚಿನ್ನ ಕದ್ದು ಗಿರಿವಿ ಇಟ್ಟು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು
ಮೈಸೂರು: ಚಿನ್ನ ಕದ್ದು, ಅದನ್ನು ಗಿರಿವಿ ಇಟ್ಟು, ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಬ್ಯಾಡರಪುರದ...
ಪಾದರಕ್ಷೆಯಿಂದ ಆಟೋ ಚಾಲಕನಿಗೆ ಹೊಡೆದ ಮಹಿಳೆ ಕಾಲಿಡಿದು ಕ್ಷೆಮೆ ಕೇಳಿದಳು
ಬೆಂಗಳೂರು: ಬಿಹಾರದ ಹಿಂದಿ ಮಹಿಳೆಯೊಬ್ಬರು ಆಟೋ ಚಾಲಕನ ಮೇಲೆ ಚಪ್ಪಲಿಯಿಂದ ಹೊಡೆದ ಘಟನೆಯಿಂದ ಆಕ್ರೋಶ ಹೆಚ್ಚಾಗಿ, ಪೊಲೀಸ್ ಪ್ರಕರಣ ದಾಖಲಾಗುತ್ತಿದ್ದಂತೆ ಮಹಿಳೆ ಮತ್ತು ಆಕೆಯ ಪತಿ ಆಟೋ...
ತನ್ನ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಸೆಕ್ಸ್ ಮಾಡಿದ 27 ವರ್ಷದ ಶಿಕ್ಷಕಿ ಬಂಧನ
ನ್ಯೂಯಾರ್ಕ್: ಫ್ಲೋರಿಡಾದ ರಿವರ್ವ್ಯೂ ಪ್ರೌಢಶಾಲೆಯ ಶಿಕ್ಷಕಿಯೊಬ್ಬ ತರಗತಿಯಲ್ಲಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಸಂಬಂಧ ಪೊಲೀಸರು ಬಂಧಿಸಿದ್ದಾರೆ. 27 ವರ್ಷದ ಬ್ರೂಕ್ ಆಂಡರ್ಸನ್ ಒಬ್ಬ ಶಿಕ್ಷಕಿಯಾಗಿದ್ದು,...
ಲಾಲ್ಬಾಗ್ ಆವರಣದಲ್ಲಿ ಇಪಿಎಸ್ ಪಿಂಚಣಿದಾರರ 89ನೇ ಮಾಸಿಕ ಸಭೆ ಯಶಸ್ವಿ
ಬೆಂಗಳೂರು: ಇಪಿಎಸ್ ಪಿಂಚಣಿದಾರರ 89ನೇ ಮಾಸಿಕ ಸಭೆ ಲಾಲ್ಬಾಗ್ ಆವರಣದಲ್ಲಿ ಭಾನುವಾರ ಯಶಸ್ವಿಯಾಗಿ ಜರುಗಿತು. ಬೆಳಗಿನ ನಿರ್ಮಲ ವಾತಾವರಣದಲ್ಲಿ, ಲಾಲ್ಬಾಗ್ ನಡಿಗೆದಾರರ ಜತೆ ಹೆಜ್ಜೆ ಹಾಕುತ್ತಾ, ತನ್ನ...
ಹೆಂಡತಿ, ಮಕ್ಕಳಿದ್ದರೂ ಅಜ್ಜಿಯ ಮೊಮ್ಮಳ ಮೋಹಿಸಿ ಮನೆ ಬಿಟ್ಟು ಬಂದ- ಜೈಲು ಸೇರಿದ ಪ್ರೇಮಿಗಳು
ಚಿಕ್ಕಬಳ್ಳಾಪುರ: ಮದುವೆಯಾಗಿ ಮಕ್ಕಳಿದ್ದರೂ ಮತ್ತೊಬ್ಬ ಯುವತಿ ಜೊತೆ ರಹಸ್ಯವಾಗಿ ಲೈಂಗಿಕ ಕ್ರಿಯೆ ನಡೆಸಿ ಆಕೆಯ ಗರ್ಭಿಣಿ ಮಾಡಿದ ಗೃಹಸ್ಥನ ವಿಷಯ ಊರಿಗೆ ಜನರಿಗೆ ಗೊತ್ತಾದ ಮೇಲೆ ಆಕೆಯೊಂದಿಗೆ...