ಪ್ರಯಾಣಿಕರಿಗೆ ವಿತರಿಸದ ಟಿಕೆಟ್ ಮೌಲ್ಯ ಶೂನ್ಯ: ಆದರೂ ನಿರ್ವಾಹಕರು ದಂಡಕಟ್ಟಬೇಕೆಂಬ ಅಸಂಬದ್ಧ ಸುತ್ತೋಲೆ!!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳ ನಿರ್ವಾಹಕರ ಪಾಲಿಗೆ ಮುಳ್ಳಾಗುವ ಒಂದು ನಿರ್ಧಾರವನ್ನು 2024ರ ಮೇ 3ರಂದು ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ತೆಗೆದುಕೊಂಡಿದ್ದರು. ಈಗ ಆ ರೀತಿಯ ಟಿಕೆಟ್ ಇಲ್ಲ ಬಿಡಿ. ಆದರೆ ಅಧಿಕಾರಿಗಳು ತೆಗೆದುಕೊಳ್ಳುವ ಸಣ್ಣತನದ ನಿರ್ಧಾರದಿಂದ ನೌಕರರು ಎಷ್ಟೆಲ್ಲ ಸಮಸ್ಯೆ ಅನುಭವಸಬೇಕಾಗುತ್ತದೆ ಅನ್ನೋದು ಗೊತ್ತಾಗಬೇಕಲ್ಲ, ಅದಕ್ಕಾಗಿ.
ಅಂದಿನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಶಾಂತಿ ನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ಕುಳಿತು ಒಂದು ಸಹಿ ಮಾಡಿ ಆದೇಶ ಮಾಡಿಬಿಟ್ಟರು. ಆದರೆ ಅವರಿಗೇನುಗೊತ್ತು ಕಳೆದುಕೊಂಡ ಟಿಕೆಟ್ಗೆ ಮೌಲ್ಯವೇ ಇಲ್ಲದಾಗ ನಿರ್ವಾಹಕರಿಂದ ಪ್ರತಿ ಶೂನ್ಯ ಟಿಕೆಟ್ 10 ರೂಪಾಯಿ ವಸೂಲಿ ಮಾಡಿ ಎಂಬ ಆದೇಶದಿಂದ ನೌಕರರಿಗೆ ಲಾಸ್ ಆಗುತ್ತದೆ ಎಂದು.
ಈ ರೀತಿ ಆದೇಶ ಹೊರಡಿಸುವ ಮುನ್ನ ಮುಖ್ಯ ಸಂಚಾರಿ ವ್ಯವಸ್ಥಾಪಕರು ಸ್ವಲ್ಪ ತಾಳ್ಮೆಯಿಂದ ಯೋಚಿಸಬೇಕಾಗುತ್ತದೆ. ಟಿಕೆಟ್ಅನ್ನು ನಿರ್ವಾಹಕರು ಕಳೆದುಕೊಂಡಿದ್ದಾರೆ ಎಂದ ಮೇಲೆ ಆ ಟಿಕೆಟ್ನಿಂದ ಸಂಸ್ಥೆಗೆ ಯಾವುದೇ ನಷ್ಟವಾಗುವುದಿಲ್ಲ. ಅಂದ ಮೇಲೆ ನಿರ್ವಾಹಕರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬೇಕು ಅವರಿಂದ ಟಿಕೆಟ್ ಹೇಗೆ ಕಳೆದುಕೊಂಡಿರಿ ಎಂಬ ಬಗ್ಗೆ ವಿವರಣೆ ಬರದುಕೊಡಿ ಎಂದು ಹೇಳಿ ಬರೆಸಿಕೊಂಡು ಆ ಬಳಿಕ ನಿಜವಾಗಲು ಟಿಕೆಟ್ ಕೆಳೆದುಹೋಗಿವೆ ಎಂದು ಖಚಿತವಾದ ಮೇಲೆ ಆ ಪ್ರಕರಣವನ್ನು ಕೈ ಬಿಟ್ಟರಾಯಿತಲ್ಲವೇ?
ಅದನ್ನು ಬಿಟ್ಟು ನಿರ್ವಾಹಕರೆ ಏನೋ ಆ ಟಿಕೆಟ್ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ರೀತಿಯಲ್ಲಿ ಅವರಿಂದ ಪ್ರತಿ ಟಿಕೆಟ್ಗೆ 10 ರೂಪಾಯಿ ವಸೂಲಿ ಮಾಡಿ ಎಂಬ ಸುತ್ತೋಲೆ ಹೊರಡಿಸಿರುವುದು ಒಂದು ರೀತಿ ಹಾಸ್ಯಸ್ಪದವಾಗಿ ಕಾಣುತ್ತಿದೆ. ಅಲ್ಲದೆ ಆ ಅಧಿಕಾರಿಯ ಮನಸ್ಥಿತಿ ಏನಾಗಿದೆ ಎಂಬುದರ ಬಗ್ಗೆಯೂ ಯೋಚಿಸಬೇಕಿದೆ ಎಂಬ ಅನುಮಾನ ಮೂಡುವಂತಿದೆ.
ಆ ಮುಖ್ಯ ಸಂಚಾರಿ ವ್ಯವಸ್ಥಾಪಕರು ಹೊರಟಿಸಿರುವ ಸುತ್ತೋಲೆ? ಸುತ್ತೋಲೆ ಸಂಖ್ಯೆ: 1796/2024 (ಸಂಚಾರ ಇಲಾಖೆಯಿಂದ ಹೊರಡಿಸಲಾಗಿದೆ) ವಿಷಯ: “ಶಕ್ತಿ ಯೋಜನೆ’ಯಲ್ಲಿ ನಿರ್ವಾಹಕರು ಮಹಿಳಾ ಪ್ರಯಾಣಿಕರುಗಳಿಗೆ ವಿತರಿಸಲು ನೀಡಿರುವ ಪಿಂಕ್ ಟಿಕೆಟ್ಗಳನ್ನು ಕಳೆದುಕೊಂಡಾಗ ಕೈಗೊಳ್ಳಬೇಕಾದ ಕ್ರಮದ ಕುರಿತು.
ಉಲ್ಲೇಖ:ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ: 818/2023, ದಿನಾಂಕ: 07-06.2023.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 818/2023 ರನ್ವಯ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಸಂಬಂಧ ಇ.ಟಿ.ಎಂ. ಕಾರ್ಯ ನಿರ್ವಹಿಸದ ಸ್ಪಂದರ್ಭದಲ್ಲಿ ಪಿಂಕ್ ಟಿಕೆಟ್ ವಿತರಿಸಲು (ಲಗ್ಗೇಜ್ ಟಿಕೆಟ್ ರೀತಿಯಲ್ಲಿ) ತಿಳಿಸಲಾಗಿರುತ್ತದೆ. ಅದೇ ರೀತಿ ಎಲ್ಲ
ನಿರ್ವಾಹಕರಿಗೂ ಪಿಂಕ್ ಟಿಕೆಟ್ನ್ನು ವಿತರಿಸಲಾಗಿರುತ್ತದೆ. ಈ ರೀತಿ ನಿರ್ವಾಹಕರಿಗೆ ವಿತರಿಸಿರುವ ಪಿಂಕ್ ಟಿಕೆಟ್ ಕಳೆದುಹೋದ ಪಕ್ಷದಲ್ಲಿ ನಿರ್ವಾಹಕರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಯಾವುದೇ ಮಾರ್ಗದರ್ಶನ ನೀಡಿರುವುದಿಲ್ಲವೆಂದು ತಿಳಿಸಿ, ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾರ್ಗದರ್ಶನವನ್ನು ಕೋರಿ ವಿಭಾಗಗಳಿಂದ ಪತ್ರಗಳನ್ನು ಸ್ವೀಕರಿಸಲಾಗುತ್ತಿರುತ್ತದೆ.
ಈ ಸಂಬಂಧ ನಿರ್ವಾಹಕರಿಗೆ ಪಿಂಕ್ ಟಿಕೆಟ್ನ್ನು ಲಗ್ಗೇಜು ಟಿಕೆಟ್ ಮಾದರಿಯಲ್ಲಿ ವಿತರಿಸುತ್ತಿದ್ದು, ಸದರಿ ಟಿಕೆಟ್ಗಳಿಗೆ ಮುಖ ಬೆಲೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ಕಳೆದುಹೋದ ಪ್ರತಿ ಟಿಕೆಟ್ಗೆ ರೂ. 10/- (ರೂ.ಹತ್ತು)ರಂತೆ ನಿಗದಿ ಮಾಡಿ, ಸದರಿ ಮೊತ್ತವನ್ನು ಸಂಬಂಧಿಸಿದ ನಿರ್ವಾಹಕರಿಂದ ಭರಿಸಿಕೊಳ್ಳುವಂತೆ ಹಾಗೂ ಸದರಿ ಟಿಕೆಟ್ ಕಳೆದ ಕಾರಣ ಅವರ ನಿರ್ಲಕ್ಷತೆಗೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.
ಇನ್ನು ಈ ಸುತ್ತೋಲೆಯನ್ನು ಸ್ವೀಕರಿಸಿದ ಬಗ್ಗೆ ಸ್ವೀಕೃತಿಯನ್ನು ಹಾಗೂ ಕೈಗೊಂಡ ಕ್ರಮದ ಬಗ್ಗೆ ಅನುಸರಣಾ – ವರದಿಯನ್ನು ನೀಡುವುದು ಎಂದು ಮುಖ್ಯ ಸಂಚಾರಿ ವ್ಯವಸ್ಥಾಪಕರು ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ನಿರ್ವಾಹಕರಿಗೆ ಎಷ್ಟು ಕಿರಿಕಿರಿಯಾಗುತ್ತೆ ಎಂಬ ತಿಳಿವಳಿಕೆಯೂ ಇಲ್ಲದೆ ಈ ರೀತಿ ಸುತ್ತೋಲೆ ಹೊರಡಿಸುವುದು ಎಷ್ಟೆ ಮಟ್ಟಿಗೆ ಸರಿ ಇರುತ್ತದೆ. ಈ ಬಗ್ಗೆ ಏಕೆ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುವುದಿಲ್ಲ ಎಂಬುವುದೇ ಯಕ್ಷಪ್ರಶ್ನೆಯಾಗಿದೆ.
Related

You Might Also Like
KSRTC ಕೋಲಾರ: ನೌಕರರ ದುಡಿಮೆಗೆ ತಕ್ಕ ವೇತನಕೊಡದೆ ಕಾಡುತ್ತಿರುವ ಡಿಸಿ, ಡಿಟಿಒಗಳ ಅಮಾನತು ಮಾಡಿ- ಸಾರಿಗೆ ಸಚಿವರಿಗೆ ಸೈಕಲ್ ರೆಡ್ಡಿ ಪತ್ರ
ಕೋಲಾರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೋಲಾರ ವಿಭಾಗದ ನಿಯಂತ್ರಣಾಧಿಕಾರಿಗಳ ಅಧಿಕಾರ ದುರ್ಬಳಕೆ, ನೌಕರರಿಗೆ ಕಿರುಕುಳ ಮತ್ತು ಲಂಚಾವತಾರ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು...
KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕನಿಗೆ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ನೌಕರ ಸುರೇಶ್ ಬಾಬು, ಮತ್ತೊಬ್ಬ ಸಿಬ್ಬಂದಿ ಕಿರುಕುಳ: ಆರೋಪ
ದೊಡ್ಡಬಳ್ಳಾಪುರ: KSRTC ದೊಡ್ಡಬಳ್ಳಾಪುರ ಘಟಕದ ಚಾಲಕ ಕಂ ನಿರ್ವಾಹಕ ಹನುಮಂತರಾಯ ಜಳಕಿ ಎಂಬುವರಿಗೆ ಡೀಸೆಲ್ ವಿಭಾಗದ ನೌಕರ ಸುರೇಶ್ ಬಾಬು ಮತ್ತು ಇನ್ನೊಬ್ಬ ಸಿಬ್ಬಂದಿ ಲಂಚಕ್ಕೆ ಬೇಡಿಕೆ...
ನಿವೃತ್ತಿಗೆ ಮುನ್ನವೇ ನೌಕರರ ವಿಚಾರಣೆ ಮುಗಿದಿರಬೇಕು ಇಲ್ಲದಿದ್ದಲ್ಲಿ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮದ ಖಡಕ್ ಎಚ್ಚರಿಕೆ
ಬೆಂಗಳೂರು: ವೃತ್ತಿಯಲ್ಲಿರುವ ಸಂದರ್ಭದಲ್ಲಿ ದುರ್ನಡತೆ, ಕರ್ತವ್ಯಲೋಪದಂತಹ ಆರೋಪಗಳನ್ನು ಎದುರಿಸುವ ಸರ್ಕಾರಿ ನೌಕರರು, ಅವರು ನಿವೃತ್ತರಾಗುವ ಮುನ್ನವೇ ಅವರ ವಿರುದ್ಧದ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ...
KSRTC ನೌಕರರ ವೇತನ ಹೆಚ್ಚಳಕ್ಕೆ ಜೆಡಿಎಸ್ ಮುಖಂಡ, ವಕೀಲ ಶಂಕರೇಗೌಡ ಆಗ್ರಹ
ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಹಾಗೂ 38 ತಿಂಗಳ ಹಿಂಬಾಕಿ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು ಎಂದು ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ....
ಮೈಸೂರು: ಶೀಘ್ರದಲ್ಲೇ ಕಬಿನಿ ನೀರು ಹೊರ ವಲಯ ಬಡಾವಣೆಗಳಿಗೆ ಪೂರೈಕೆ: ಶಾಸಕ ಜಿಟಿಡಿ
ಮೈಸೂರು: ಶೀಘ್ರದಲ್ಲೇ ಕಬಿನಿ ನದಿಯಿಂದ ನಗರದ ಹೊರ ವಲಯ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ರೂಪಾ ನಗರದಲ್ಲಿ ಸ್ಥಳೀಯ...
ಜಮೀರ್ ರಾಜೀನಾಮೆಗೆ ಸಾಗರ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯ
ಶಿವಮೊಗ್ಗ: ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು ಎಂಬ ಶಾಸಕ ಬಿ. ಆರ್. ಪಾಟೀಲ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ...
ಸರ್ಕಾರದ ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ- 2-3 ದಿನದಲ್ಲಿ ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ ಎಂದ NWKRTC ಅಧ್ಯಕ್ಷ ರಾಜುಕಾಗೆ
ಕಾಗವಾಡ: ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ಪಕ್ಷದಲ್ಲೇ ಒಬ್ಬರಾದ ಮೇಲೆ ಒಬ್ಬ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿದ್ದು, ಸರ್ಕಾರಕ್ಕೆ ತೀವ್ರ ಮುಜುಗರ ತಂದಿಡುತ್ತಿದ್ದಾರೆ. ಜತೆಗೆ ಸರ್ಕಾರ...
KSRTC ಮೈಸೂರು: ಸರಿಸಮಾನ ವೇತನ ಕೊಡಿ- ಎಂಡಿಗೆ ಮನವಿ ಮಾಡಿದ ಸಂಸ್ಥೆಯ ಅಧಿಕಾರಿಗಳು, ಒಕ್ಕೂಟದ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳಿಂದ ಸನ್ಮಾನ ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ಪಾಷ ಅವರನ್ನು ಕರ್ನಾಟಕ...
ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ್ರು
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ‘ಶ್ರೀ ಗಂಗ ಸಾಮ್ರಾಟ ಶ್ರೀ ಪುರುಷ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ನಗರದಲ್ಲಿ ಇಂದು ದೇವೇಗೌಡ ಅಭಿನಂದನಾ ಸಮಿತಿ...