NEWSನಮ್ಮಜಿಲ್ಲೆಲೇಖನಗಳು

ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ಭವಿಷ್ಯ ಶೂನ್ಯ!

ವಿಜಯಪಥ ಸಮಗ್ರ ಸುದ್ದಿ

ಬೀದಿಯಲ್ಲಿ ನಿಂತು ನಮ್ಮೆಲ್ಲರ ಹಕ್ಕಿಗಾಗಿ, ಸಾರಿಗೆ ಸಂಸ್ಥೆಯ ಉಳಿವಿಗಾಗಿ ಒಬ್ಬ ನಾಯಕ ಗುಡುಗುತ್ತಿರುವಾಗ, ಹಗಲು-ರಾತ್ರಿ ಎನ್ನದೆ ಸಂಕೋಲೆಗಳನ್ನು ಕಡಿದು ಹಾಕಲು ಹೋರಾಡುತ್ತಿರುವಾಗ… ಬದಿಯಲ್ಲಿ ನಿಂತು ತಮಾಷೆ ನೋಡುತ್ತಾ, ಕರ್ತವ್ಯದ ನೆಪದಲ್ಲಿ ಪಲಾಯನ ಮಾಡುತ್ತಿರುವ ನೀವು ನಿಜಕ್ಕೂ ಬದುಕಿದ್ದೀರಾ?

ಅನ್ಯಾಯದ ವಿರುದ್ಧ ಹೋರಾಡುವ ಸಹೋದ್ಯೋಗಿಯ ಜತೆ ನಿಲ್ಲದ ನೀವು, ಕೇವಲ ಸಮವಸ್ತ್ರ ಧರಿಸಿದ ‘ಜೀವಂತ ಶವಗಳು’.

ಕೆಲವೇ ಕೆಲವು ವೀರ ನೌಕರರು ವ್ಯವಸ್ಥೆಯ ಅನ್ಯಾಯದ ವಿರುದ್ಧ ಎದೆಯೊಡ್ಡಿ ನಿಂತಾಗ, ಅವರಿಗೆ ಹೆಗಲು ಕೊಡಬೇಕಾದ ಸಾವಿರಾರು ನೌಕರರು ಬೆನ್ನು ತೋರಿಸಿ ಓಡುತ್ತಿರುವುದು ಈ ಕಾಲದ ದೊಡ್ಡ ದುರಂತ.

ನೆನಪಿಡಿ-​”ಹೋರಾಟಗಾರ ಸೋತರೆ ಕೇವಲ ಒಬ್ಬ ವ್ಯಕ್ತಿ ಸೋಲಲ್ಲ, ಇಡೀ ಸಾರಿಗೆ ನೌಕರರ ಸಂಕುಲದ ಭವಿಷ್ಯವೇ ಸಮಾಧಿಯಾಗುತ್ತದೆ.”

ಹೋರಾಟಗಾರರು ಬೀದಿಗೆ ಇಳಿದಿರುವುದು ಅವರ ವೈಯಕ್ತಿಕ ಲಾಭಕ್ಕಲ್ಲ, ನಿಮ್ಮ ಮನೆಯ ಮಕ್ಕಳ ಜ್ಞಾನದ, ತುತ್ತಿನ ಚೀಲ ತುಂಬಿಸುವುದಕ್ಕಾಗಿ ಮತ್ತು ನಿಮ್ಮ ನಿವೃತ್ತ ಜೀವನದ ಭದ್ರತೆಗಾಗಿ.

ನಾವು ಸಂಸ್ಥೆಯ ಸರ್ವಾಧಿಕಾರಿಗಳು ಎಂಬಂತೆ ಕೆಲ ಅಧಿಕಾರಿಗಳು ನಮಗೂ ವೇತನ ತಾರತಮ್ಯವುದೆ ಅದನ್ನು ಸರಿಪರಿಸುವುದಕ್ಕೆ ನಾವು ಮುಂದಾಗಬೇಕು ಎಂಬ ಅರಿವಿಲ್ಲದೆ ಅಜ್ಞಾನಿಗಳಂತೆ ತೋರಿಸುವ ದಬ್ಬಾಳಿಕೆ ಮತ್ತು ಅಹಂಕಾರದ ಮುಂದೆ ತಲೆಬಾಗಿ ನಡೆಯುವುದು ಬದುಕಲ್ಲ, ಅದು ಬಣ್ಣ ಹಚ್ಚಿದ ಗುಲಾಮಗಿರಿ.

ಇಂದು ಒಬ್ಬ ಹೋರಾಟಗಾರನನ್ನು ಏಕಾಂಗಿಯನ್ನಾಗಿ ಮಾಡಿದರೆ, ನಾಳೆ ನಿಮ್ಮ ಮೇಲೆ ಅನ್ಯಾಯದ ತೂಗುಗತ್ತಿ ಬಂದಾಗ ನಿಮಗಾಗಿ ಧ್ವನಿ ಎತ್ತಲು ಯಾರೂ ಇರುವುದಿಲ್ಲ. ಹೀಗಾಗಿ….!

ಸಾರಿಗೆ ಬಂಧುಗಳೇ… ಎದ್ದೇಳಿ!:
​ಕೈಕಟ್ಟಿ ನಿಂತು ನೋಡುವ ‘ಹೇಡಿ’ಗಳಾಗಬೇಡಿ. ಅಧಿಕಾರದ ಮದವೇರಿದ ವ್ಯವಸ್ಥೆಗೆ ನಿಮ್ಮ ಸಂಘಟಿತ ಶಕ್ತಿಯ ದರ್ಶನ ತೋರಿಸಿ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ನಿಮ್ಮ ಸಹೋದರನಿಗೆ ಸಾವಿರ ಕೈಗಳ ಬಲ ತುಂಬಿ. ಪಲಾಯನ ಮಾಡುವುದು ಹೇಡಿಗಳ ಲಕ್ಷಣ, ಎದುರಿಸಿ ನಿಲ್ಲುವುದು ಸ್ವಾಭಿಮಾನಿ ನೌಕರನ ಲಕ್ಷಣ!
​ಹೋರಾಟಕ್ಕೆ ಸಾಥ್ ನೀಡದ ನೌಕರನನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.
​ಎದ್ದೇಳಿ! ಗುಡುಗಿ! ಒಂದಾಗಿ! ನಮ್ಮ ಹಕ್ಕು – ನಮ್ಮ ಹೋರಾಟ! ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರಿಗೆ ನೌಕರರು ತಮಗಾಗುತ್ತಿರುವ ವೇತನ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ ನೀಡುತ್ತಿದ್ದಾರೆ.

Megha
the authorMegha

Leave a Reply

error: Content is protected !!
Latest news
KSRTC: ನಾಳೆ ನೌಕರರ ಕೂಟದ ಸರ್ವ ಸದಸ್ಯರ, ಪದಾಧಿಕಾರಿಗಳು, ನಿವೃತ್ತರ ಸಭೆ KSRTC: ನೌಕರರಿಗೆ ವೇತನ ಬಡ್ತಿ ನೀಡಿದ ಆಯಾ ತಿಂಗಳಲ್ಲಿಯೇ HRMSನಲ್ಲಿ ಜಾರಿ ಮಾಡಿ, ಇಲ್ಲದಿದ್ದರೆ ಕ್ರಮ- ಸಿಪಿಎಂ ಎಚ್ಚರ... ನಾಲ್ಕೂ ಸಾರಿಗೆ ನಿಗಮಗಳಿಗೆ "ಶಕ್ತಿ" ಮುಂಗಡವಾಗಿ 500 ಕೋಟಿ ರೂ. ಬಿಡುಗಡೆ ಮಾಡಿ ಸರ್ಕಾರ ಆದೇಶ ಸಾರಿಗೆ ನೌಕರರೇ.. ಎಚ್ಚರ! ಕೈಕಟ್ಟಿ ಕುಳಿತರೆ ಭವಿಷ್ಯ ಶೂನ್ಯ! ಗ್ಯಾಸ್ ಸಿಲಿಂಡ‌ರ್ ಡೆಲಿವರಿ ಬಾಯ್‌ಗೆ ಸಿಗುವ ಕಮಿಷನ್ ಎಷ್ಟು ಗೊತ್ತ? KSRTC: ಕರ್ತವ್ಯ ಮುಗಿಸಿ ಪ್ರಯಾಣಿಸುವ ಸಂಸ್ಥೆ ಸಿಬ್ಬಂದಿ ಕಡ್ಡಾಯವಾಗಿ ID Card ಪ್ರದರ್ಶಿಸಿ- ಇಂಥ ಚೋರರ ಪತ್ತೆಗೆ ಸಹಕ... ಗುಡ್‌ ನ್ಯೂಸ್‌: ಪೆಟ್ರೋಲ್ -ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತ KSRTC: ಮೆಜೆಸ್ಟಿಕ್‌ನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬಸ್‌ ಭಸ್ಮ- ಅದೃಷ್ವಶಾತ್‌ ಕೂದಲೆಳೆ ಅಂತರದಲ್ಲೇ ಪ್ರಯಾಣಿಕರು ಪಾರ... ಬೆಳ್ಳಂಬೆಳಗ್ಗೆ ಬಸ್- ಟಿಪ್ಪರ್ ನಡುವೆ ಭೀಕರ ಅಪಾಘತ: 10ಮಂದಿ ಸಜೀವದಹನ, 18 ಜನರಿಗೆ ಗಂಭೀರಗಾಯ ಏ.6ರಂದು KSRTC ಎಂಡಿ ಜತೆ ಸಾರಿಗೆ ನೌಕರರ ಸಂಘಟನೆಗಳ ಸಭೆ- 2024 ರಿಂದ ವೇತನ ಹೆಚ್ಚಳ ಮಾಡದಿದ್ದರೆ ಹೋರಾಟ ಅನಿವಾರ್ಯ