NEWSದೇಶ-ವಿದೇಶವಿದೇಶ

ಅಂದು ಮಾಹಿತಿ ತಂತ್ರಜ್ಞಾನ ಸಚಿವ ಇಂದು ಆಹಾರ ಡೆಲಿವರಿ ಬಾಯ್‌

ವಿಜಯಪಥ ಸಮಗ್ರ ಸುದ್ದಿ

ಬರ್ಲಿನ್: ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ತಾಲಿಬಾನಿ ಉಗ್ರರ ದರ್ಬಾರ್‌ ನಡೆಯುತ್ತಿದ್ದು ಅಲ್ಲೆ ಅಶಾಂತಿಯ ವಾತಾವರಣ  ನಿರ್ಮಾಣವಾಗಿದೆ. ಇದನ್ನು ಒಂದು ವರ್ಷದ ಹಿಂದೆಯೇ ಅರಿತ ಅಫ್ಘಾನಿಸ್ತಾನದ ಸಚಿವರೊಬ್ಬರು ಅಫ್ಘಾನಿಸ್ತಾನ ತೊರೆದು ಪ್ರಸ್ತುತ ಜರ್ಮನಿಯ ಲೀಪ್ಜಿಗ್‌ನಲ್ಲಿ ಆಹಾರ ಡೆಲಿವರಿ ಕೆಲಸ ಮಾಡುತ್ತಿದ್ದಾರೆ.

ಹೌದು! ಅಫ್ಘಾನಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವರಾಗಿದ್ದ ಸಯ್ಯದ್ ಅಹ್ಮದ್ ಶಾ ಸಾದತ್, ಪ್ರಸ್ತುತ ಜರ್ಮನಿಯ ಲೀಪ್ಜಿಗ್‌ನಲ್ಲಿ ಆಹಾರ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದಾರೆ. ಜರ್ಮನಿಯ ಬೀದಿಗಳಲ್ಲಿ ಪಿಜ್ಜಾ ಡೆಲಿವರಿ ಮಾಡುವಾಗ ಅವರನ್ನು ಕೆಲವರು ಗುರುತಿಸಿದ್ದಾರೆ.

ಅಂದು ಅಫ್ಘಾನಿಸ್ತಾನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಜತೆಗಿನ ಮನಸ್ತಾಪದ ಬಳಿಕ ಸಾದತ್ ಅವರು ವರ್ಷದ ಹಿಂದೆ ದೇಶವನ್ನು ತೊರೆದಿದ್ದರು. ತಾಲಿಬಾನ್ ಮರು ಸ್ಥಾಪನೆಯ ಸುಳಿವು ಇದ್ದಿದ್ದರಿಂದ ಅವರು ಮುನ್ನೆಚ್ಚರಿಕೆಯಿಂದ ದೇಶದಿಂದ ಹೊರ ಹೋಗಿ ಜರ್ಮನಿಯಲ್ಲಿ ಆಶ್ರಯ ಪಡೆದಿದ್ದಾರೆ.

ಇನ್ನು ನಿತ್ಯದ ಜೀವನ ಸಾಗಿಸಲು ಅವರು ಪಿಜ್ಜಾ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇನ್ನು ಅಲ್ಲಿ ಪಿಜ್ಜಾ ಡೆಲಿವರಿ ಮಾಡುವಾಗ ಜರ್ಮನಿಯ ಪತ್ರಕರ್ತರೊಬ್ಬರ ಕಣ್ಣಿಗೆ ಬಿದ್ದಿದ್ದಾರೆ.

ಈ ವೇಳೆ ಆ ಪತ್ರಕರ್ತರು ಸಾದತ್ ಅವರನ್ನು ವಿಚಾರಿಸಿದಾಗ ಹೌದು ನಾವು ಒಬ್ಬ ಸಚಿವರಾಗಿದ್ದವರು ಎಂದು ಹೇಳಿಕೊಂಡಿದ್ದಾರೆ. ಜತೆಗೆ ಈಗ ಮಾಡುತ್ತಿರುವ ಕೆಲಸದ ಬಗ್ಗೆಯೂ ನನಗೆ ತುಂಬ ಗೌರವವಿದೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ಈಗ ನಾನು ಬಹಳ ಸರಳವಾದ ಜೀವನ ನಡೆಸುತ್ತಿದ್ದೇನೆ. ಜರ್ಮನಿಯಲ್ಲಿ ಸುರಕ್ಷಿತವಾಗಿರುವ ಅನುಭವವಾಗುತ್ತಿದೆ. ಲೀಪ್ಜಿಗ್‌ನಲ್ಲಿ ಕುಟುಂಬದೊಂದಿಗೆ ಸಂತೋಷವಾಗಿದ್ದೇನೆ.

ಜರ್ಮನ್ ಕೋರ್ಸ್ ಮಾಡಲು ಹಾಗೂ ಮತ್ತಷ್ಟು ಓದಲು ಹಣ ಉಳಿಸಲು ಬಯಸಿದ್ದೇನೆ. ನಾನು ಅನೇಕ ಕೆಲಸಗಳಿಗೆ ಅರ್ಜಿ ಸಲ್ಲಿಸಿದ್ದೇನೆ, ಆದರೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಜರ್ಮನಿಯ ದೂರಸಂಪರ್ಕ ಕಂಪೆನಿಯಲ್ಲಿ ಕೆಲಸ ಮಾಡುವುದು ನನ್ನ ಕನಸು’ ಎಂದು ಅವರು ಹೇಳಿಕೊಂಡಿದ್ದಾರೆ.

ಸುಶಿಕ್ಷಿತರಾಗಿರುವ ಸಾದತ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸಂವಹನಗಳು ಮತ್ತು ಸಾಫ್ಟ್‌ವೇರ್ ಇಂಜಿನಿಯರಿಂಗ್‌ನ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಈ ಮೊದಲು ಅವರು ಅರಾಮ್ಕೋ ಮತ್ತು ಸೌದಿ ದೂರಸಂಪರ್ಕ ಕಂಪನಿಯಲ್ಲಿ ಸಹ ಕೆಲಸ ಮಾಡಿದ್ದರು.

2018ರಲ್ಲಿ ಅಶ್ರಫ್ ಘನಿ ನೇತೃತ್ವದ ಅಫ್ಘನ್ ಸರ್ಕಾರದಲ್ಲಿ ಸಚಿವರಾಗಿ ಸೇರಿಕೊಂಡಿದ್ದ ಅವರು, 2020ರಲ್ಲಿ ರಾಜೀನಾಮೆ ನೀಡಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಜರ್ಮನಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಗೆ ಸ್ಥಳಾಂತರಗೊಂಡ ಕೆಲವೇ ಸಮಯದಲ್ಲಿ ಹಣಕಾಸಿನ ಕೊರತೆ ಉಂಟಾಯಿತು. ಹೀಗಾಗಿ ದೈನಂದಿನ ಜೀವನಕ್ಕಾಗಿ ಆಹಾರ ಪೂರೈಕೆ ಕೆಲಸಕ್ಕೆ ಸೇರಿಕೊಂಡರು.

ನಿತ್ಯವೂ ಸೈಕಲ್ ಏರಿ ಮನೆಯಿಂದ ಮನೆಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಒಂದು ದೇಶದ ಸಚಿವನಾಗಿ ಉನ್ನತ ಹುದ್ದೆಯಲ್ಲಿದ್ದವರು ಪಿಜ್ಜಾ ಡೆಲಿವರಿ ಮಾಡುವ ಸ್ಥಿತಿಗೆ ಬಂದಿದ್ದು ಬೇಸರ ಉಂಟುಮಾಡುತ್ತಿಲ್ಲವೇ? ಎಂದು ಕೇಳಿದರೆ, ತಮಗೆ ಕಾರ್ಮಿಕನ ಘನತೆ ತಿಳಿದಿದೆ. ಈ ಕೆಲಸ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳುತ್ತಾರೆ.

ಒಂದು ದೇಶದಲ್ಲಿ ಗೌರವಯುತ ಹುದ್ದೆ ಅಲಂಕರಿಸಿ ಈಗ ಆ ಹುದ್ದೆಗೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಸರಳ ಜೀವನ ನಡೆಸಲು ಹೊರಟಿರುವ ಅಫ್ಘಾನಿಸ್ತಾನದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವರಾಗಿದ್ದ ಸಯ್ಯದ್ ಅಹ್ಮದ್ ಶಾ ಸಾದತ್ ಅವರ ನಡೆಗೆ ಎಲ್ಲೆಡೆ ಪ್ರಸಂಶೆಯ ಮಹಪೂರವೇ ಹರಿದು ಬರುತ್ತಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು