NEWSನಮ್ಮಜಿಲ್ಲೆನಮ್ಮರಾಜ್ಯಸಿನಿಪಥ

ಬಿಗ್​ಬಾಸ್​ನಲ್ಲಿ ನನಗೂ ಅವಕಾಶ ಕೊಡಿ ಎಂದು ಸುದೀಪ್‌ ಮನೆ ಬಳಿ ಧರಣಿ ಕುಳಿತ ತಿ.ನರಸೀಪುರ ರೈತನಿಗೆ ಅವಾಜ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬಿಳಿಗೆರೆಹುಂಡಿ ಗ್ರಾಮದ ರೈತ ಮಂಜು ಏಳು ಮಲೈ, ಬಿಗ್​ಬಾಸ್​ನಲ್ಲಿ ನನಗೂ ಅವಕಾಶ ಕೊಡಿ ಎಂದು ನಟ ಸುದೀಪ್‌ ಮನೆಮುಂದೆ ಧರಣಿ ಕುಳಿತಿದ್ದಾರೆ.

ಬಿಗ್​ಬಾಸ್​ ಮನೆಗೆ ಹೋಗಲು ತನ್ನ ಊರಿನಿಂದಲೇ ಎತ್ತಿನ ಗಾಡಿ ಒಡೆದುಕೊಂಡು ಬಂದಿರುವ ರೈತ ಮಂಜು ನೇರ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಕಿಚ್ಚ ಸುದೀಪ್ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ಎತ್ತಿನ ಗಾಡಿ ಮೇಲೆಯೇ ಕುಳಿತು ನನಗೂ ಬಿಗ್​ಬಾಸ್​ನಲ್ಲಿ ಅವಕಾಶ ಕೊಡಿಯೆಂದು ಧರಣಿ ನಡೆಸುತ್ತಿದ್ದಾರೆ. ನಾನು ಅವಿದ್ಯಾವಂತ, ಅವಕಾಶ ಮಾಡಿ ಕೊಡಿ ಎಂದು ರಾತ್ರಿಯಿಂದಲೂ ಕಾಯುತ್ತಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮಂಜು, ಮುಂದಿನ ಬಾರಿ ನನಗೂ ಒಂದು ಅವಕಾಶ ಕೊಡಲಿ ಎಂದು ಸುದೀಪ್ ಅಣ್ಣನ ಭೇಟಿ ಮಾಡಲು ನನ್ನ ಎತ್ತಿನ ಗಾಡಿಯನ್ನು ಊರಿನಿಂದ ಹೊಡೆದುಕೊಂಡು ಬಂದಿದ್ದೇನೆ. ಆದರೆ, ಸುದೀಪ್ ಮನೆಯಿಂದ ಬಂದ ಮೂವರು ನೀನು ಬೆಂಗಳೂರಲ್ಲಿ ಎಲ್ಲೇ ಕಾಣಿಸಿದರೂ ನನ್ನನ್ನು ಮತ್ತು ನಿನ್ನ ಗಾಡಿಯನ್ನು ಸುಟ್ಟು ಹಾಕುತ್ತೇವೆ ಎಂದು ಅವಾಜ್ ಹಾಕಿದರು ಎಂದು ಹೇಳಿದರು.

ನಾನು ಬಿಗ್​ಬಾಸ್​ನಲ್ಲಿ ಅವಕಾಶಕೊಡಿ ಎಂದು ಕೇಳುವುದರ ಜತೆಗೆ ಸುದೀಪ್ ಅಣ್ಣನ ನೋಡೋಕೆ ಅಂತ ಬಂದಿದ್ದು, ನಮ್ಮಂತೆ ಓದದೇ ಇರುವವರು ರಾಜ್ಯದಲ್ಲಿ ತುಂಬಾ ಜನ ಇದ್ದಾರೆ. ಮುಂದೆ ನಮಗೆ ಒಂದು ಬಿಗ್​​ಬಾಸ್​ನಲ್ಲಿ ಅವಕಾಶ ಮಾಡಿಕೊಡಿ ಎಂದಿದ್ದೇನೆ. ಆದರೆ ಇದುವರೆಗೂ ಸುದೀಪ್ ಅಣ್ಣ ಕಾಣಿಸಿಲ್ಲ.

ಸುದೀಪ್ ಅಣ್ಣ ಮನೆಯಿಂದ ಹೊರ ಬಂದ ಮೂವರು ನನ್ನ ಎದೆ ಮೇಲಿನ ಶರ್ಟ್​ ಹಿಡಿದು ನನ್ನನ್ನು ತಳ್ಳಿದರು. ನಿನ್ನೆ ಬೆಳಗ್ಗೆ 6 ಗಂಟೆಗೆ ಬಂದು ರಾತ್ರಿ 11 ಗಂಟೆವರೆಗೆ ಸುದೀಪ್ ಮನೆ ಮುಂದೆ ಇದ್ದೆ. ಅವರು ಮನೆಯಲ್ಲಿ ಇದ್ರೋ, ಇಲ್ವೋ ಗೊತ್ತಿಲ್ಲ. ಆದರೆ ಅಲ್ಲಿದ್ದವರು ಸುದೀಪ್ ಇಲ್ಲ ನೀನು ಇಲ್ಲಿಂದ ಜಾಗ ಖಾಲಿ ಮಾಡು ಎಂದು ಗದರಿದರು ಎಂದು ಮಂಜು ಹೇಳಿದ್ದಾರೆ.

ಸುದೀಪ್‌ ಅವರ ಮನೆಯಿಂದ ಬಂದ ಮೂವರು ಮದ್ಯಪಾನ  ಮಾಡಿದ್ದು ನನ್ನ ಕಪಾಲಕ್ಕೂ ಹೊಡೆದರು, ಅಲ್ಲದೆ ಸುದೀಪ್‌ ಅವರ ಮನೆಯ ಮುಂದೆ ಡಿಸಿ ಮನೆಯಿದೆ ಇಲ್ಲಿ ನಿನ್ನ ಹಸುಗಳನ್ನು ಕಟ್ಟುವುದಕ್ಕೆ ಯಾರು ಹೇಳಿದರು ಎಂದು ಅವಾಜ್‌ ಹಾಕಿ ಬದರಿಸಿದರು ಎಂದು ಹೇಳಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು