NEWSದೇಶ-ವಿದೇಶನಮ್ಮರಾಜ್ಯ

ರಾಜಸ್ಥಾನ ಸಾರಿಗೆ ನೌಕರರಿಗೆ 56 ಸಾವಿರ ವೇತನ – ಕೆಎಸ್‌ಆರ್‌ಟಿಸಿ ನೌಕರರಿಗೆ ಕೇವಲ 27 ಸಾವಿರ ರೂ. ವೇತನ

ವಿಜಯಪಥ ಸಮಗ್ರ ಸುದ್ದಿ

ಜೈಪುರ್‌: ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ನೌಕರರು 7ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ಪಡೆಯುತ್ತಿದ್ದಾರೆ ಅಂದರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಪಡೆಯುತ್ತಿರುವ ವೇತನಕ್ಕಿಂತ ಶೇ.50 ರಿಂದ ಶೇ.53 ಹೆಚ್ಚಿಗೆ ವೇತನ ಪಡೆಯುತ್ತಿದ್ದಾರೆ.

ಇದನ್ನು ಕೆಲವರು ನಂಬಲು ಅಸಾಧ್ಯ ಎನ್ನಬಹುದು ಆದರೆ, ಅದನ್ನು ನಂಬಲೇ ಬೇಕು. ಕಾರಣ ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( RSRTC)ಯ ಒಬ್ಬ ತಾಂತ್ರಿಕ ಸಿಬ್ಬಂದಿ (ಮೆಕ್ಯಾನಿಕ್) 56243 ರೂಪಾಯಿ ವೇತನ ಪಡೆಯುತ್ತಿದ್ದಾರೆ.

ಅದೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಮೆಕ್ಯಾನಿಕ್ ಸೇರಿದಂತೆ ಚಾಲನಾ ಸಿಬ್ಬಂದಿಗೆ 27 ಸಾವಿರ ರೂ.ಗಳಿಂದ 28 ಸಾವಿರ ರೂಪಾಯಿ ವರೆಗೆ ವೇತನ ಸಿಗುತ್ತಿದೆ. ಅದೂ ಕೂಡ 15-16 ವರ್ಷದಿಂದಲೂ ಸೇವೆ ಸಲ್ಲಿಸುತ್ತಿರುವವರಿಗೆ ಕೊಡುತ್ತಿರುವ ಪ್ರಸ್ತುತ ವೇತನ. ಅಂದರೆ ಈ ಬಗ್ಗೆ ಇಲ್ಲೇ ಲೆಕ್ಕಾಚಾರ ಹಾಕಿದರೂ ಕೂಡ ಸಾಮಾನ್ಯರಿಗೂ ಇದು ಅರ್ಥವಾಗುತ್ತದೆ. ಬೇರೆ ರಾಜ್ಯದ ಸಾರಿಗೆ ಸಿಬ್ಬಂದಿಗೂ ಮತ್ತು ಕರ್ನಾಟಕ ರಾಜ್ಯದ ಸಾರಿಗೆ ಸಿಬ್ಬಂದಿಗೂ ಬರುತ್ತಿರುವ ವೇತನದಲ್ಲಿ ಎಷ್ಟು ವ್ಯತ್ಯಾಸ ಇದೇ ಎಂಬುವುದು.

ರಾಜಸ್ಥಾನ ಸಾರಿಗೆ ಮೆಕ್ಯಾನಿಕ್‌ ಪಡೆದಿರುವ ಸೆ.22ರ ವೇತನ ಚೀಟಿ.

ಇನ್ನು ರಾಜ್ಯದಲ್ಲಿ ಅತ್ಯಂತ ಕಡಿಮೆ ವೇತನ ಪಡೆಯುತ್ತಿರುವ ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರು ಇದ್ದಾರೆ ಎಂದರೆ ಅದು ಕೆಎಸ್‌ಆರ್‌ಟಿಸಿಯ ನಾಲ್ಕೂ ನಿಗಮಗಳ ಸಿಬ್ಬಂದಿ ಎಂದು ಪ್ರಸ್ತುತ ವೇತನ ಚೀಟಿ (Pay slip or Salary slip) ಸಹಿತ ಸಾಬೀತು ಮಾಡಬಹುದು.

ಇನ್ನು ನಮ್ಮ ರಾಜ್ಯದಲ್ಲೂ ಸಿಎಂ, ಸಚಿವರು ಇಲ್ಲ ಸರ್ಕಾರಿ ಅಧಿಕಾರಿಗಳ ಕಾರು ಚಾಲಕರು ತಿಂಗಳಿಗೆ 50ರಿಂದ 80 ಸಾವಿರ ರೂ.ವರೆಗೂ (ಅವರ ಸೇವಾವಧಿಗೆ ತಕ್ಕಂತೆ) ವೇತನ ಪಡೆಯುತ್ತಿದ್ದಾರೆ. ಅದರೆ, ಸಾರಿಗೆ ನಿಗಮದಿಂದ ಕಳಿಸಿರುವ ಚಾಲಕರಿಗೆ ನಿಗಮದಲ್ಲಿ ನೀಡುತ್ತಿರುವ ವೇತನವೇ ಬರುತ್ತಿದೆ. ಇಲ್ಲಿಯೂ ಕೂಡ ವೇತನ ವ್ಯತ್ಯಾಸ ಅಥವಾ ತಾರತಮ್ಯತೆಯನ್ನು ನಾವು ನೋಡಬಹುದು.

ಅಂದರೆ, ಸರ್ಕಾರ ವಾಹನ ಚಾಲಕನಾಗಿ ಕೆಲಸಕ್ಕೆ ಸೇರಿದ ವ್ಯಕ್ತಿಗೆ ಒಳ್ಳೆ ವೇತನ ಸಿಗುತ್ತಿದೆ. ಜತೆಗೆ ಅವರು ಭಾರಿ ವಾಹನ ಓಡಿಸುವುದಿಲ್ಲ ಲಘು ವಾಹನಗಳನ್ನಷ್ಟೇ ಓಡಿಸುತ್ತಾರೆ. ಅಲ್ಲದೆ ಅವರಿಗೆ ನಿರಂತವಾಗಿ 8 ರಿಂದ 12 ಗಂಟೆಗಳ ಕಾಲ ಚಾಲನೆ ಮಾಡುವುದಿಲ್ಲ. ಆದರೆ, ಭಾರಿ ಓಹನ ಓಡಿಸುವ ಅದರಲ್ಲೂ ನಿರಂತರವಾಗಿ 8ರಿಂದ12 ಗಂಟೆಗಳಕಾಲ ಚಾಲನೆ ಮಾಡುವ ಸಾರಿಗೆ ನೌಕರರಿಗೆ ವೇತನ ಕೊಡುವುದು ಮಾತ್ರ ತೀರ ಕಡಿಮೆ.

ಅಂದರೆ, ರಾಜ್ಯದ ಜನರಿಗೆ ಪ್ರಮುಖವಾಗಿ ಬೇಕಾಗಿರುವ ಸಾರಿಗೆ ಸಂಸ್ಥೆಯ ನೌಕರರಿಗೇ ಏಕೆ ಇಷ್ಟು ಕಡಿಮೆ ವೇತನ ಬರುತ್ತಿದೆ ಎಂದರೆ, ಆ ಬಗ್ಗೆ ಈಗಾಗಲೇ ಹಲವಾರು ಬಾರಿ ಹತ್ತಾರು ವರದಿಗಳನ್ನು ಮಾಡಿ ವಿವರಿಸಿದ್ದೇವೆ. ಕೆಲ ಸಂಘಟನೆಗಳ ಪದಾಧಿಕಾರಿಗಳು ಕೆಲ ಭ್ರಷ್ಟ ಅಧಿಕಾರಿಗಳ ಜತೆ ಕೈ ಜೋಡಿಸಿದ್ದು, ಸಾರಿಗೆ ನೌಕರರಿಗೆ ಕಾನೂನ ಅರಿವು ಇಲ್ಲದಿದ್ದದ್ದು ಪ್ರಮುಖ ಕಾರಣ.

ಇನ್ನು ಈ ಎಲ್ಲದರ ಬಗ್ಗೆ ಪ್ರಸ್ತುತ ತಮಗೂ ತಿಳಿಸಿದ್ದರೂ ಕೂಡ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ನೌಕರರಿಗೆ ಭರವಸೆ ಮಾತ್ರ ಈಗಲೂ ಕೊಡುತ್ತಲೇ ಕಾಲಕಳೆಯುತ್ತಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರಲು ಮೀನಮೇಷ ಎಣಿಸುತ್ತಿದ್ದಾರೆ. ಇದಕ್ಕೆ ಕಾರಣ ಮಾತ್ರ ನಿಗೂಢ.

ಹೀಗಾಗಿ ನೌಕರರು ನಮಗೆ ಸರ್ಕಾರಿಗೆ ನೌಕರರಿಗೆ ಇರುವಂತೆ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡಬೇಕು. ಈ ಮೂಲಕ ನಾಲ್ಕೂ ವರ್ಷಕ್ಕೊಮ್ಮೆ ನೌಕರರು ಅನುಭವಿಸುತ್ತಿರುವ ವಜಾ, ವರ್ಗಾವಣೆ, ಅಮಾನತು, ಪೊಲೀಸ್‌ ಕೇಸ್‌ ಹೀಗೆ ಹತ್ತಾರು ಕಿರುಕುಳಗಳಿಗೆ ಶಾಶ್ವತ ಪರಿಹಾರ ಬೇಕು ಎಂದು ಕಳೆದ 2 ವರ್ಷದಿದ್ದಲೂ ಒತ್ತಾಯಿಸುತ್ತಿದ್ದಾರೆ. ಆದರೆ, ಈವರೆಗೂ ಆ ಬಗ್ಗೆ ಸರ್ಕಾರ ಮಾತ್ರ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ದಿವ್ಯ ಮೌನತಾಳಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ