NEWSನಮ್ಮಜಿಲ್ಲೆನಮ್ಮರಾಜ್ಯ

ಸರ್ಕಾರಕ್ಕೆ ಸವಾಲೊಡ್ಡಲು ಸಾರಿಗೆ ನೌಕರರ ನಿಗೂಢ ನಡೆ – ನಿವೃತ್ತ ಐಪಿಎಸ್‌, ಐಎಎಸ್‌, ನುರಿತ ವಕೀಲರಿಂದಲೂ ಬೆಂಬಲ ..!

ವಿಜಯಪಥ ಸಮಗ್ರ ಸುದ್ದಿ
  • 27ಕ್ಕೂ ಹೆಚ್ಚು ಸಂಘಟನೆಗಳಿದ್ದರೂ ಅವುಗಳನ್ನು ಪಕ್ಕಕ್ಕೆ ಸರಿಸಿ ತಮ್ಮ ಸಮಸ್ಯೆಗೆ ಸ್ಪಂದಿಸುವ ಸಂಘಟನೆಗಷ್ಟೇ  ಬೆನ್ನೆಲುಬಾಗಿ ನಿಲ್ಲಲು ಒಳಗೊಳಗೆ ತಯಾರಿ

  • ಸರ್ಕಾರಕ್ಕೆ ಬಿಸಿ ಮುಟ್ಟಿಸಿಯೇ ತೀರುತ್ತೇವೆ ಎಂಬ ಅಚಲ ನಂಬಿಕೆಯೊಂದಿಗೆ ಮುಂದಡಿ ಇಡಲು ಸಜ್ಜಾಗುತ್ತಿದೆ ನೌಕರರ ಪಡೆ

ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟವು ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿ ಕಳೆದ ಅಕ್ಟೋಬರ್‌ 10ರಂದು ಬಳ್ಳಾರಿಯಿಂದ ಬೃಹತ್‌ ಸೈಕಲ್‌ ಜಾಥಾ ಆರಂಭಿಸಿದ್ದು ಇಂದಿಗೆ 29ದಿನಗಳಾಗಿದೆ. ಆದರೂ ಸರ್ಕಾರವಾಗಲಿ ಅಥವಾ ನಿಗಮಗಳ ಉನ್ನತ ಅಧಿಕಾರಿಗಳಾಗಲೀ ಭೇಟಿ ಮಾಡಿ ನೌಕರರ ಅಹವಾಲು ಆಲಿಸುವ ಸೌಜನ್ಯ ತೋರಿಲ್ಲ.

ಎಮ್ಮೆ ಚರ್ಮದ ಸರ್ಕಾರಕ್ಕೆ ಇಡೀ ದೇಶದಲ್ಲೇ ಅಷ್ಟೇ ಏಕೆ ಏಷ್ಯಾ ಖಂಡದಲ್ಲೇ ನಂ.ಸಾರಿಗೆ ಎನಿಸಿಕೊಂಡು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಸಾರಿಗೆ ನಿಗಮದ ನೌಕರರು ಇಂದು ವೇತನ ಸಾಲುತ್ತಿಲ್ಲ. ನಾವು ಹಲವಾರು ಸಮಸ್ಯೆಗೆ ಸಿಲುಕಿದ್ದೇವೆ ಅದನ್ನು ಪರಿಹರಿಸಿ ಎಂದು ಕಳೆದ 18 ತಿಂಗಳಿಂದಲೂ ಪರಿಪರಿಯಾಗಿ ಕೇಳಿಕೊಂಡರು ಕ್ಯಾರೆ ಎನ್ನುತ್ತಿಲ್ಲ.

ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಸರ್ಕಾರ ತನ್ನ ಅಧೀನದ ನೌಕರರ ಸಮಸ್ಯೆಯನ್ನೇ ಆಲಿಸುವಲ್ಲಿಯೇ ವಿಫಲವಾಗಿದೆ. ಅಂದ ಮೇಲೆ ಇನ್ನು ಜನ ಸಾಮಾನ್ಯರ ಸಮಸ್ಯೆ ಕೇಳುತ್ತದೆಯೇ ಈ ಸರ್ಕಾರ ಎಂದು ಜನರಿಂದಲೂ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಕಳೆದ ಅ.10ರಿಂದ ಈವರೆಗೂ ವಿವಿಧ ಜಿಲ್ಲೆಗಳನ್ನು ಸಾರಿಗೆ ನೌಕರರು ಸುತ್ತುತ್ತಿದ್ದು, ಈ ಸೈಕಲ್‌ ಜಾಥಾಗೆ ನೌಕರರು ಅಭೂತಪೂರ್ವ ಬೆಂಬಲವನ್ನು ನೀಡುತ್ತಿದ್ದಾರೆ. ಆದರೂ ಸರ್ಕಾರವಾಗಲಿ ಇಲ್ಲ ನಿಗಮಗಳ ಆಡಳಿತ ಮಂಡಳಿಗಳಾಗಲಿ ಎಚ್ಚೆತ್ತುಕೊಳ್ಳದಿರುವುದು ಇವರ ಉದಾಸೀನತೆಗೆ ಮತ್ತು ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

ಇದು ಹೀಗೆಯೇ ಮುಂದುವರಿದರೆ ಮತ್ತೊಂದು ಬಾರಿ ಇಡೀ ರಾಜ್ಯದಲ್ಲಿ ಸಾರಿಗೆ ಬಸ್‌ಗಳು ಸ್ತಬ್ಧವಾಗುವುದು ಪಕ್ಕ ಎಂದು ನೌಕರರೇ ಹೇಳಿಕೆ ನೀಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಮತ್ತು ಆಡಳಿತ ಮಂಡಳಿ ಸೈಕಲ್‌ ಜಾಥಾ ನಡೆಸುತ್ತಿರುವ ನೌಕರರ ಸಮಸ್ಯೆ ಏನು? ಅವುಗಳನ್ನು ಹೇಗೆ ಪರಿಹಾರ ಮಾಡಬೇಕು ಎಂಬುದರ ಬಗ್ಗೆ ಶೀಘ್ರದಲ್ಲೇ ತೀರ್ಮಾನ ತೆಗೆದಕೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ದಂಡ ತೆರಬೇಕಾಗುತ್ತದೆ.

ಇನ್ನು ನಿನ್ನೆ (ನ.6) ಕೆಕೆಆರ್‌ಟಿಸಿ ಸಾರಿಗೆ ನಿಗಮದ ಹಳಿಯಾಳ ಘಟಕ ಮತ್ತು ದಾಂಡೇಲಿ ಘಟಕದಲ್ಲಿ ದ್ವಾರ ಸಭೆಯನ್ನು ರಾತ್ರಿ 9.15 ಮತ್ತು 10.50ರಲ್ಲಿ ಮಾಡಲಾಯಿತು. ಈ ವೇಳೆ ತಮ್ಮ ಕುಟುಂಬ ಸಹಿತ ಮಕ್ಕಳೊಂದಿಗೆ ನೂರಾರು ನೌಕರರು ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಮತ್ತೊಂದು ಹೋರಾಟ ಮಾಡಲು ಸಿದ್ಧ ಎಂಬ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದಂತಿತ್ತು.

ಹೌದು! ಸಾರಿಗೆ ನೌಕರರು ಕಳೆದ 19 ತಿಂಗಳಿನಿಂದಲೂ ಅಂದರೆ ಏಪ್ರಿಲ್‌ 2021ರಿಂದ ಇಲ್ಲಿಯವರೆಗೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತದೆ ಎಂಬ ಆಶಾ ಭಾವನೆಯಿಂದಲೇ ಕರ್ತವ್ಯ ಮಾಡುತ್ತಿದ್ದಾರೆ. ಆದರೂ ಸರ್ಕಾರ ಈ ಬಗ್ಗೆ ಸೂಕ್ತ ಗಮನ ನೀಡಿಲ್ಲ ಹೀಗಾಗಿ ಮತ್ತೆ ನೌಕರರು ತಾಳ್ಮೆ ಕಳೆದುಕೊಳ್ಳುತ್ತಿದ್ದು, ಮತ್ತೊಂದು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

ಕಳೆದ ಬಾರಿ ಕೊರೊನಾ ಎಂಬ ಮಹಾಮಾರಿ ಅಡ್ಡ ಬಂದಿದ್ದರಿಂದ ನಮ್ಮ ಹೋರಾಟ ಮಣ್ಣು ಪಾಲಾಯಿತು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ನಾವು ಹೋರಾಟಕ್ಕೆ ದುಮುಕಿದ ಮೇಲೆ ಹಿಂದೆ ಸರಿಯುವ ಮಾತೆ ಇಲ್ಲ ಎಂದು ಹೇಳುತ್ತಿದ್ದಾರೆ.

ಇನ್ನು ಡಿಸೆಂಬರ್‌ನಲ್ಲಿ ಅಧಿವೇಶನ ನಡೆಯಲಿದ್ದು, ಅಷ್ಟರೊಳಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಒಂದು ತೀರ್ಮಾನ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಇದರ ಪರಿಣಾಮ ಏನು ಎಂಬುದನ್ನು ನಾವು ಮುಂದಿನ ದಿನಗಳಲ್ಲಿ ತೋರಿಸಲಿದ್ದೇವೆ ಎಂದು ಸರ್ಕಾರಕ್ಕೆ ಮತ್ತು ಆಡಳಿತ ಮಂಡಳಿಗಳಿಗೂ ಎಚ್ಚರಿಕೆ ರವಾನಿಸಿದ್ದಾರೆ ಸಾರಿಗೆ ನೌಕರರು.

ಸಾರಿಗೆ ನೌಕರರ ಮುಂದಿನ ಹೋರಾಟಕ್ಕೆ ಹಲವು ನಿವೃತ್ತ ಐಎಎಸ್‌, ಐಪಿಎಸ್‌ ಮತ್ತು ನುರಿತ ವಕೀಲರು ಬೆಂಬಲ ನೀಡುವುದಾಗಿ ಈಗಾಗಲೇ ತಿಳಿಸಿದ್ದು, ನೌಕರರಿಗೆ ನ್ಯಾಯ ನ್ಯಾಯ ಸಿಗುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ತಿಳಿದು ಬಂದಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು