NEWSನಮ್ಮರಾಜ್ಯರಾಜಕೀಯ

ಸಾರಿಗೆ ನೌಕರರಿಗೆ ಇಲ್ಲ ಸ್ವಾತಂತ್ರ್ಯೋತ್ಸವದ ಸಂಭ್ರಮ : ಸಚಿವ ಶ್ರೀರಾಮುಲುಗೊಂದು ನೋವಿನ, ದುಃಖ ಮನಸ್ಸುಗಳ ಮನವಿ

ವಿಜಯಪಥ ಸಮಗ್ರ ಸುದ್ದಿ

2021 ಆಗಸ್ಟ್‌ 15 ರಂದು ನನ್ನ ಹೆಮ್ಮೆಯ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ರ ಸಂಭ್ರಮವನ್ನು ಆಚರಿಸುತ್ತೇವೆ. ಎಲ್ಲೆಡೆ ದೇಶಪ್ರೇಮ ದೇಶಭಕ್ತಿ ವ್ಯಕ್ತವಾಗುತ್ತದೆ. ಬ್ರಿಟಿಷರ ಕಪಿಮುಷ್ಟಿಯಿಂದ ದೌರ್ಜನ್ಯದಿಂದ ದಾಸ್ಯದಿಂದ ಮುಕ್ತಿ ದೊರಕಿದ ಅಭೂತಪೂರ್ವ ದಿನ ಇದಾಗಿದೆ.

ಆದರೆ, ಈ ಸ್ವಾತಂತ್ರ್ಯ ನಮಗೆ ನಿಜವಾಗಿಯೂ ದೊರಕಿದೆಯೆ? ಅದನ್ನು ನಾವು ಉಳಿಸಿಕೊಂಡಿದ್ದೆವೆಯೆ? ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?

ನಮ್ಮ ಕ.ರಾ.ರ.ಸಾ.ನಿಗಮದ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕೂ ಸಿಗದಂತಾಗಿದೆ. ಯಾಕೆಂದರೆ ಸಂಸ್ಥೆಯ ಕಾರ್ಮಿಕರಿಗೆ ಇನ್ನೂ ಕೆಲಸಕ್ಕೆ ತಕ್ಕ ಕೂಲಿ ಸಿಗುತ್ತಿಲ್ಲ. ಅವರ ಮೇಲಿನ ದೌರ್ಜನ್ಯ ಕಿರುಕುಳ ದಬ್ಬಾಳಿಕೆಗಳಿಗೆ ನಿಯಂತ್ರಣ ಇಲ್ಲ.

ಹಗಲಿರುಳು ದುಡಿಯುವ ಜನಸೇವೆಯೇ ಜನಾರ್ದನ ಸೇವೆ ಎಂದು ಸದಾ ಮನೆ ಮಠ ಕುಟುಂಬದಿಂದ ದೂರ ಇದ್ದು ಜೀವ ಕೈಯಲ್ಲಿ ಹಿಡಿದುಕೊಂಡು ಜನಸೇವೆಯಲ್ಲೇ ಜೀವನ ಸವೆಸುತ್ತಿರುವ ಇಲ್ಲಿನ ಕಾರ್ಮಿಕರಿಗೆ ದುಡಿಮೆಗೆ ತಕ್ಕ ಕೂಲಿಯೂ ಇಲ್ಲ. ಇನ್ನು ಸವಲತ್ತುಗಳು ಮರೀಚಿಕೆಯಾಗಿವೆ. ಬರುವುದು ಖಾಸಗಿಯವರಿಗಿಂತ ಅತಿ ಕಡಿಮೆ ಸಂಬಳ… ಅದು ಸಮಯಕ್ಕೆ ಸರಿಯಾಗಿ ಬರುವುದು ಅಪರೂಪವೇ ಸರಿ.

ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಜೀವನ ಸಾಗಿಸುವ ನಮ್ಮ ಗೋಳು ಕೇಳುವವರಾರು? ಇತ್ತೀಚೆಗೆ ನಮ್ಮ ಮೇಲಾಗುವ ಕಿರುಕುಳ, ವೇತನ ತಾರತಮ್ಯ ನಿವಾರಣೆ ಮಾಡುವಂತೆ ಒತ್ತಾಯಿಸಿ ಕಾನೂನಾತ್ಮಕವಾಗಿಯೇ ನ್ಯಾಯಯುತ ಬೇಡಿಕೆಗಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಪವಿತ್ರ ಸಂವಿಧಾನದ ಅಡಿಯಲ್ಲಿ ಹೋರಾಟ ಮಾಡಲಾಗಿ ನಮ್ಮ ಬೇಡಿಕೆಯ ಈಡೇರಿಕೆಯ ಬದಲಿಗೆ ಸಿಕ್ಕಿದ್ದು ಗಾಯದ ಮೇಲೆ ಬರೆ. ದೊಡ್ಡ ಹೊಡೆತ. ಎಲ್ಲಿದೆ ಸ್ವಾತಂತ್ರ್ಯ?

ನಮ್ಮ ಕಷ್ಟ ನಿವಾರಣೆ ಮಾಡುವ ರಾಜ್ಯದ ದೊರೆಗಳೇ ನಮ್ಮ ಮೇಲೆ ಗದಾಪ್ರಹಾರ ಮಾಡಿ, ಸಾವಿರಾರು ಅಮಾಯಕ ನೌಕರರ ಜೀವನವನ್ನೆ ಕತ್ತೆಲೆಗೆ ದೂಡಿದ್ದು ಸರಿನಾ? ಸರಕಾರ ಮುಷ್ಕರ ಸದೆಬಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೆ ತಡ ಅವರು ದ್ವೇಷದಿಂದ ಅಧಿಕಾರ ದುರುಪಯೋಗ ಮಾಡಿ ತಮ್ಮ ಸಂಸ್ಥೆಯ ನೌಕರರಿಗೇ ಮಾರಕರಾಗಿದ್ದು ಎಷ್ಟು ಸರಿ? ನಾವು ಕೇಳಿದ್ದು ಕಾರು ಬಂಗಲೆ ಅಲ್ಲ ಸ್ವಾಮಿ… ಬರಿ ನಮ್ಮ ದುಡಿಮೆಗೆ ತಕ್ಕ ಕೂಲಿ. ಕಿರುಕುಳ ಮುಕ್ತ ಜೀವನ ಅಷ್ಟೇ.

ಅಷ್ಟಕ್ಕೇ ಎಂತಹ ಕ್ರೂರ ಶಿಕ್ಷೆ? ಸಾವಿರಾರು ಅಮಾಯಕ ಕಾರ್ಮಿಕರಿಗೆ ವಜಾ, ವರ್ಗಾವಣೆ, ಅಮಾನತು ಶಿಕ್ಷೆ. ಇದು ಮಾನವಿಯ ಲಕ್ಷಣವೇ? ಇದನ್ನೆಲ್ಲ ಗಮನಿಸಿದರೆ ನಮಗೆ (ಸಾರಿಗೆ ನೌಕರರಿಗೆ) ಸ್ವಾತಂತ್ರ್ಯ ಸಿಕ್ಕಿದೆಯೇ? ಇದು ಪ್ರಜಾಪ್ರಭುತ್ವ ಕಗ್ಗೊಲೆ ಅಲ್ಲವೆ?

ಹಗಲಿರುಳು ದುಡಿದ ಚಾಲನಾ ಸಿಬ್ಬಂದಿ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟರು. ಆದರೆ ಅಧಿಕಾರಿಗಳಿಂದ ಅವರಿಗೆ ಕೊಟ್ಟ ಬಹುಮಾನ ಅಂದರೆ ಬರಿ ದಬ್ಬಾಳಿಕೆ, ದೌರ್ಜನ್ಯ, ಹಿಂಸೆ, ಏನ್ ಮಾಡ್ತಿರಾ? ಸಾರಿಗೆ ಸಂಸ್ಥೆ ವ್ಯವಸ್ಥೆ ಹೀಗೇ ಆಗಿದೆ!

ಬಡವನ ಕೋಪ ದವಡೆಗೆ ಮೂಲ ಎಂಬಂತೆ ನಮ್ಮ ಪಾಡು. ನಮ್ಮ ಗೋಳು ನೋವು ಕೇಳುವವರೆ ಇಲ್ಲವೇ? ಇನ್ನಾದರು ಸ್ವಾತಂತ್ರ್ಯದ ಸಂಭ್ರಮ ಸಿಗಬಹುದಾ?

ಮಾನ್ಯ ಲಕ್ಷ್ಮಣ ಸವದಿಯವರು ಬರಿ ಮಾತಲ್ಲೆ ಸಹೋದರರು ಮನೆ ಮಕ್ಕಳು ಅಂತ ಹೇಳಿ ನಮಗೆ ಮಾಡಿರುವ ಅನ್ಯಾಯವನ್ನು ಮಾನ್ಯ ನೂತನ ಸಾರಿಗೆ ಸಚಿವರಾದ ಶ್ರೀ ರಾಮುಲು ಅವರು ಸರಿಪಡಿಸಲು ಪ್ರಾರ್ಥನೆ…

l ಇಂತಿ
ನೊಂದ 1.30 ಲಕ್ಷ ಸಾರಿಗೆ ನೌಕರರು

4 Comments

  • Sariyagi duty sigthilla . Sariyagi sambala kodtlilla .. ooru bittu bere Yello duty madthidivi .. utakku hanavilla . Maneyalli hanada thondare en madbeku antha gothagthilla .. Nam kashta helkondre bageharisoru yaru illa.. 😭😭😭

  • Hwdu ಇದು ಸತ್ಯ ಮಾನ್ಯ ಶ್ರೀರಾಮುಲು ರವರು ಸಾರಿಗೆ Navkara ಸಮಸ್ಯೆ ಆಲಿಸಿ ಬಗೆಹರಿಸಲು ವಿನಂತಿ…..

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು