NEWSಕೃಷಿನಮ್ಮಜಿಲ್ಲೆ

ಸುಳ್ಳು‌ ದಾಖಲೆಗಳ ಸೃಷ್ಟಿಸಿ ಜಮೀನು ಮಾರಾಟ : ಐವರ ವಿರುದ್ಧ ಪ್ರಕರಣ‌ ದಾಖಲು

ವಿಜಯಪಥ ಸಮಗ್ರ ಸುದ್ದಿ

ಹನೂರು: ಪಟ್ಟಣದ ಹುಲ್ಲೆಪುರದ ಸ.ನಂ 632/2 ರ ಜಮೀನಿಗೆ ಸುಳ್ಳು‌ ದಾಖಲಾತಿ ಸೃಷ್ಟಿಸಿ ಮಾರಾಟ ಮಾಡಿರುವ ಆರೋಪದ ಮೇರೆಗೆ ಐವರ ವಿರುದ್ದ ಹನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಪಟ್ಟಣದ ಹೊರ ವಲಯದ ಹುಲ್ಲೆಪುರದ ಸರ್ವೆ ನಂಬರ್ 632.2ರ ಜಮೀನಿನ ಮಾಲೀಕ ಆಗಾಗ್ಗೆ ಬಂದು ವ್ಯವಸಾಯ ಮಾಡಿಸಿ ನಂತರ ತಮಿಳುನಾಡಿಗೆ ಹೊಗುತ್ತಿರುತ್ತಾರೆ. ಇದರ ದುರುಪಯೋಗ ಮಾಡಿಕೊಂಡು ಕೆಲ ಆರೋಪಿಗಳು ಸಮಾನ ಉದ್ದೇಶದಿಂದ ಮೋಸಮಾಡಬೇಕೆಂದು ಹನೂರು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಸುಳ್ಳು ಪತ್ರವನ್ನು ಸೃಷ್ಟಿಸಿಕೊಂಡು ನಂತರ ಮಾರಾಟ ಮಾಡಲು ಮುಂದಾಗಿದ್ದಾರೆ. ಈ ವಿಷಯ ತಿಳಿದ ಪಿರ್ಯಾದಿಯು ಕೊಳ್ಳೇಗಾಲ ನ್ಯಾಯಾಲಯಕ್ಕೆ ಧಾವೆ ಹೋಡಿದ್ದಾರೆ.

ಈ ಸಂಬಂಧ ಆರೋಪಿಗಳಿಗೆ ನೋಟಿಸ್ ಸಹ ಜಾರಿಮಾಡಿದ್ದು ಆರೋಪಿಗಳು ಯಾವುದೇ ಪ್ರತ್ಯುತ್ತರ ನೀಡಿಲ್ಲ. ಆರೋಪಿಗಳು ಕಾನೂನು ಬದ್ಧ ಹಕ್ಕಿಗೆ ಚ್ಯುತಿ ಉಂಟು ಮಾಡಿರುವುದಲ್ಲದೆ ಕಾನೂನು ಬಾಹಿರವಾಗಿ ಜಮೀನನ್ನು ಮಾರಾಟ ಮಾಡಿದ್ದಾರೆ ಎಂದು‌ 1 ರಿಂದ 5ರವರೆಗಿನ ಆರೋಪಿಗಳ ವಿರುದ್ದ ಹನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂತಹ ಪ್ರಕರಣಗಳು‌ ಈದೀಗ ತಾನೇ ಬೆಳಕಿಗೆ ಬಂದಿದೆ ಹನೂರಲ್ಲಿ ಈ ತರಹದ ಕರ್ಮಕಾಂಡ ಎಗ್ಗಿಲ್ಲದೆ ನಿತ್ಯ ನೆಡೆಯುತ್ತಿದೆ. ಜಮೀನುಗಳ ಮೂಲ ಮಾಲೀಕರು ಇಲ್ಲದೆ ಇರುವ ವಿಷಯವನ್ನು ತಿಳಿಯುವಂತಹ ಮಧ್ಯವರ್ತಿಗಳು‌ ಸಂಬಂಧ ಪಟ್ಟ ಕಚೇರಿಯಲ್ಲಿ‌ ಸಂಪರ್ಕ ಇಟ್ಟುಕೂಂಡು ತಮ್ಮ ಅಕ್ರಮಕೂಟದ ಮೂಲಕ ಕಾನೂನಿನ ವಿರುದ್ಧದ ಚಟುವಟಿಕೆ ಮುಂದಾಗುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪೊಲೀಸರು ಈ ಪ್ರಕರಣದ ಮೂಲಕ ಇದರ ಹಿಂದೆ ಇರುವ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ಯುವಕರು ಒತ್ತಾಯ ಮಾಡಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ