NEWSನಮ್ಮರಾಜ್ಯಸಿನಿಪಥ

ಹೆಸರು ಬದಲಿಸಿಕೊಳ್ಳಲು ಮುಂದಾದ ಕ್ರೇಜಿಸ್ಟಾರ್‌ ರವಿಚಂದ್ರನ್​

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹುಟ್ಟಿದಾಗಿನಿಂದ ಬಂದಿರುವ ಹೆಸರನ್ನು ಈಗ ಬದಲಿಸಿಕೊಳ್ಳಲು ವಿ.ರವಿಚಂದ್ರನ್​ ನಿರ್ಧಾರ ಮಾಡಿದ್ದಾರೆ.

ಚಿತ್ರರಂಗಕ್ಕೆ ಹೊಸದಾಗಿ ಬರುವವರು ಹೆಸರು ಬದಲಾವಣೆ ಮಾಡಿಕೊಳ್ಳುವುದು ಸಹಜ. ಆದರೆ ಇಷ್ಟು ವರ್ಷಗಳ ಬಳಿಕ ಈಗ ರವಿಚಂದ್ರನ್​ ಯಾಕೆ ಹೆಸರು ಬದಲಾಯಿಸಿಕೊಳ್ಳುತ್ತಾರೆ? ಆ ಪ್ರಶ್ನೆಗೆ ಉತ್ತರವೂ ಇಲ್ಲಿದೆ..

ರವಿಚಂದ್ರನ್​ ಎಂಬ ಒಂದೇ ಒಂದು ಹೆಸರಿಗೆ ದೊಡ್ಡ ಶಕ್ತಿ ಇದೆ. ಚಿತ್ರರಂಗದಲ್ಲಿ ಹಲವು ದಶಕಗಳಿಂದ ಪಟ್ಟ ಶ್ರಮದಿಂದಾಗಿ ಅವರ ಹೆಸರಿಗೆ ಶಕ್ತಿ ಬಂದಿದೆ. ಆದರೆ ಈಗ ಅವರು ಆ ಹೆಸರನ್ನೇ ಬದಲಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಇದು ಗಾಸಿಪ್​ ಅಲ್ಲವೇ ಅಲ್ಲ. ಸ್ವತಃ ರವಿಚಂದ್ರನ್​ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್​ ಬದಲಿಗೆ ರವಿಚಂದ್ರ ವಿ. ಎಂದು ಬದಲಿಸಿಕೊಳ್ಳುವಂತೆ ಅವರಿಗೆ ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಹೆಸರನ್ನು ಬಲಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹೊಸದಾಗಿ ಒಬ್ಬರು ಜ್ಯೋತಿಷಿ ಬಂದರು. ಒಂದೇ ಒಂದು ಅಕ್ಷರವನ್ನು ಹಿಂದೆ-ಮುಂದೆ ಮಾಡಿಕೊಳ್ಳುತ್ತೀರಾ ಎಂದು ಕೇಳಿದರು. ಯಾಕೆ ಎಂದೆ. ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದರು. ಆದರೆ ಎಲ್ಲರೂ ನನ್ನನ್ನು ರವಿಚಂದ್ರನ್​ ಅಂತಾನೇ ಕರೆಯುವುದು. ಈಗ ಯಾರು ಹೊಸದಾಗಿ ರವಿಚಂದ್ರ ವಿ. ಅಂತ ಕರೀತಾರೆ?

ಯಾರೂ ಕರೆಯುವುದಿಲ್ಲ ಎಂದಮೇಲೆ ಏನು ಪ್ರಯೋಜನ? ಇತ್ಯಾದಿ ಪ್ರಶ್ನೆ ನನ್ನದು. ಅವರು ನನ್ನಿಂದ ಹಣ ನಿರೀಕ್ಷಿಸಿಲ್ಲ. ಪ್ರೀತಿಯಿಂದ ಬಂದು ಹೇಳಿದರು. ಸರಿ ಎಂದೆ. ಈಗ ಅವರು ರವಿಚಂದ್ರ ವಿ. ಅಂತ ಹೆಸರು ಬದಲಾಯಿಸಿದ್ದಾರೆ ಎಂದು ಕ್ರೇಜಿ ಸ್ಟಾರ್​ ಹೇಳಿದ್ದಾರೆ.

ಇನ್ನು ನಂತರದ ದಿನಗಳಲ್ಲಿ ರವಿಚಂದ್ರನ್​ ಬದಲಿಗೆ ರವಿಚಂದ್ರ ವಿ. ಎಂದೆ ಅಭಿಮಾನಗಳು ಕರೆಯಬೇಕಿದೆ. ಇದರಿಂದ ಅವರ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದರೆ  ಅಭಿಮಾನಿಗಳು ಖಷಿ ಪಡುತ್ತಾರೆ ಅಲ್ಲವೇ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು