NEWSಕ್ರೀಡೆವಿದೇಶ

ಒಲಂಪಿಕ್ಸ್ : ಬಿದ್ದರು ಧೃತಿಗೆಡದ ಸಿಫಾನ್ ಹಸನ್ ಎದ್ದು ಗುರಿ ಮುಟ್ಟಿದ ಕ್ಷಣ

ವಿಜಯಪಥ ಸಮಗ್ರ ಸುದ್ದಿ

ಟೋಕಿಯೋ: ಓಟದ ಸ್ಪರ್ಧೆ ವೇಳೆ ಆಯತಪ್ಪಿ ಬಿದ್ದ ನೆದರ್ಲೆಂಡ್ ಓಟಗಾರ್ತಿ ಸಿಫಾನ್ ಹಸನ್ ಕ್ಷಣ ಮಾತ್ರದಲ್ಲಿ ಚೇತರಿಸಿಕೊಂಡು ಮತ್ತೆ ಎದ್ದು ಓಡಿ ಗುರಿ ಮುಟ್ಟುವ ಮೂಲಕ ಮೊದಲಿಗರಾಗಿದ್ದಾರೆ.

ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ 32ನೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮವಾರ ನಡೆದ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಸಿಫಾನ್ ಹಸನ್ ಬಿದ್ದು ಎದ್ದಿ ಓಡಿ ಗುರಿ ಸಾಧಿಸಿದ್ದು ಅಭಿಮಾನಗಳ ಉತ್ಸಾಹವನ್ನು ಹೆಚ್ಚಿಸಿದೆ.

ಪಂದ್ಯದ ಕೊನೆಯ ಲ್ಯಾಪ್ ನಲ್ಲಿ ಓಡುವಾಗ ಸಿಫಾನ್ ಹಸನ್ ಮತ್ತು ಕೀನ್ಯಾದ ಓಟಗಾರ್ತಿ ಎಡಿನಾ ಜೆಬಿಟೋಕ್‌ ನಡುವೆ ಗೊಂದಲ ಉಂಟಾಗಿ ಇಬ್ಬರು ಪರಸ್ಪರ ಕಾಲಿಗೆ ಸಿಕ್ಕಿ ನೆಲಕ್ಕುರುಳಿದರು. ಆದರೆ ಕೂಡಲೇ ಸಿಫಾನ್ ಹಸನ್ ಚೇತರಿಸಿಕೊಂಡು ಮೇಲೆದ್ದು ತಮ್ಮ ಗುರಿಯತ್ತ ಮುನ್ನುಗ್ಗಿದರು.

ಅಷ್ಟು ಹೊತ್ತಿಗಾಗಲೇ ತಮ್ಮ ಹಿಂದಿದ್ದ ಎಲ್ಲ ಸ್ಪರ್ಧಿಗಳು ಮುಂದಕ್ಕೆ ಹೋಗಿದ್ದರು. ಈ ವೇಳೆ ಧೃತಿಗೆಡದ ಸಿಫಾನ್ ತಮ್ಮ ಓಟದ ವೇಗವನ್ನು ಹೆಚ್ಚಿಸಿ ಒಬ್ಬೊಬ್ಬರನ್ನಾಗಿ ಎಲ್ಲ ಅಥ್ಲೀಟ್ ಗಳನ್ನು ಹಿಂದಿಕ್ಕಿ ಕೇವಲ 4 ನಿಮಿಷ, 5.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಂಭ್ರಮಿಸಿದರು.

ಅಂತೆಯೇ ಈ ಗೆಲುವಿನ ಮೂಲಕ ಸಿಫಾನ್ ಹಸನ್ ಒಲಂಪಿಕ್ಸ್ ಕ್ರೀಡಾಕೂಟ 5000 ಮೀಟರ್ ಓಟದ ಸ್ಪರ್ಧೆಯ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಸಿಫಾನ್ ಫೈನಲ್ ನಲ್ಲಿ 2 ಬಾರಿ ವಿಶ್ವ ಚಾಂಪಿಯನ್ ಕೀನ್ಯಾದ ಹೆಲೆನ್ ಒಬಿರಿರೊಂದಿಗೆ ಚಿನ್ನದ ಪದಕಕ್ಕಾಗಿ ಓಡುವ ನಿರೀಕ್ಷೆ ಇದೆ.

2019 ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 1,500 ಮತ್ತು 10,000 ಮೀಟರ್ ಓಟದ ಸ್ಪರ್ಧೆ ಗೆದಿದ್ದ ಹಸನ್, ಟೋಕಿಯೊ ಗೇಮ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಭಾಗವಹಿಸಿ ಮೂರು ಪದಕಗಳಿಗಾಗಿ ಹೋರಾಡಲಿದ್ದಾರೆ.

ಈ ಪೈಕಿ ಇಂದೇ 2 ರೇಸ್ ಗಳಿದ್ದು, ಸಿಫಾನ್ ಸ್ಪರ್ಧೆ ನಡೆಸಲಿದ್ದು, ಮುಂದಿನ ಶುಕ್ರವಾರ ಮತ್ತು ಶನಿವಾರದಂದು 1,500 ಮತ್ತು 10,000 ಮೀಟರ್ ಸ್ಪರ್ಧೆಯ ಫೈನಲ್‌ ನಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಭಾರತ ವನಿತೆಯರ ಹಾಕಿ ತಂಡಕ್ಕೆ ಶುಭಾಶಯಗಳ ಮಹಾಪೂರ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು