NEWSಕೃಷಿದೇಶ-ವಿದೇಶ

ಕೆಂಪುಸುಂದರಿಯ ಕಾಟ ಪೊಲೀಸರಿಗೂ ಪೀಕಲಾಟ: ಪತಿ -ಪತ್ನಿ ನಡುವೆಯೇ ಜಗಳ ತಂದಿಟ್ಟ ಎರಡೇ ಎರಡು ಟೊಮ್ಯಾಟೋ.. !

ವಿಜಯಪಥ ಸಮಗ್ರ ಸುದ್ದಿ

ಶಹದೊಲ್: ಅಡುಗೆಗೆ ಗಂಡ ಎರಡು ಟೊಮ್ಯಾಟೋ ಬಳಸಿದ್ದಕ್ಕೆ ಸಿಟ್ಟು ಮಾಡಿಕೊಂಡಿರುವ ಪತ್ನಿ ಮನೆ ಬಿಟ್ಟು ಹೋಗಿರುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಅಂತು ದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಕ್ಕೇರಿರುವುದರಿಂದ ಬೆಳಗಾರರಿಗೆ ಸಂತಸ ತಂದಿದ್ದರೂ ಅದನ್ನು ಕೊಂಡು ಅಡುವೆ ಮಾಡುವ ಬಡವರ್ಗದ ಕುಟುಂಬಗಳ ಕೆಲ ಮನೆಗಳಲ್ಲಿ ನೆಮ್ಮದಿ ಇಲ್ಲದಾಗುತ್ತಿರುವುದು ಸುಳ್ಳಲ್ಲ.

ಈಗ ಟೊಮ್ಯಾಟೋ ಪತಿ-ಪತ್ನಿ ಮಧ್ಯೆಯೇ ಜಗಳ ತಂದಿಡುತ್ತಿದೆ ಎಂದರೆ ನಂಬಲೇ ಬೇಕಾಗಿದೆ. ಹೌದು! ಇತ್ತ ಬೆಲೆ ಏರಿಕೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆ ಆಗ್ತಿರೋದು ಕೆಂಪು ಸುಂದರಿ ಟೊಮ್ಯಾಟೋ ಬಗ್ಗೆಯೇ.

ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಏರಿಕೆಯತ್ತ ಸಾಗುತ್ತಲೇ ಇದೆ. ಇದರಿಂದ ಬಡ ಕುಟುಂಬಗಳು ಜೀವನ ಸಾಗಿಸುವುದಕ್ಕೆ ಆಗದೆ ಒಂದು ರೀತಿ ಕಷ್ಟಕ್ಕೆ ಸಿಲುಕಿ ಕಂಗಾಲಾಗಿ ಹೋಗುತ್ತಿದ್ದಾರೆ. ‘ಬಡವರ ಬಂಧು’ ಎಂಬಂತೆ ಇದ್ದ ಟೊಮ್ಯಾಟೋಗೆ ಈಗ ರೇಟ್ ಹೆಚ್ಚಾಗ್ತಿದ್ದಂತೆಯೇ, ಹಲವು ಕಡೆಗಳಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಅಂತೆಯೇ ಮಧ್ಯಪ್ರದೇಶದ ಶಹದೊಲ್​​ ಜಿಲ್ಲೆಯಲ್ಲಿ ಪತಿರಾಯನೊಬ್ಬ, ಅಡುಗೆಗೆ ಒಂದರ ಬದಲು ಎರಡು ಟೊಮ್ಯಾಟೋ ಬಳಸಿದ್ದಕ್ಕೆ ಮುನಿಸಿಕೊಂಡ ಪತ್ನಿ ಮನೆಬಿಟ್ಟು ಪರಾರಿಯಾಗಿದ್ದಾಳೆ. ವಿಚಿತ್ರ ಎನಿಸಿದರೂ ಈ ಘಟನೆ ನಡೆದಿರೋದು ಸತ್ಯ. ಮಾತ್ರವಲ್ಲ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದೆ.

ಏನಿದು ಘಟನೆ: ಸಂಜೀವ್ ಬುರ್ಮನ್ ಎಂಬಾತ ಟಿಫಿನ್ ಸೆಂಟರ್​ ನಡೆಸುತ್ತಿದ್ದಾನೆ. ಇತ್ತೀಚೆಗೆ ಆತ ಅಡುಗೆಗೆ ಎರಡು ಟೊಮ್ಯಾಟೋ ಬಳಸಿದ್ದ. ಇದು ಆತನ ಪತ್ನಿಯ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆ ನನ್ನನ್ನು ಕೇಳದೇ ಟೊಮ್ಯಾಟೋ ಬಳಸಿದ್ದು ಅಂತಾ ದೊಡ್ಡ ಜಗಳವನ್ನೇ ಮಾಡಿದ್ದಾಳೆ.

ಜಗಳ ಮಾಡಿದ ಮೇಲು ಸಮ್ಮನಾಗದ ಆಕೆ ಬೇಸರಿಸಿಕೊಂಡು ತನ್ನ ಮಗಳ ಜತೆ ಮನೆಯನ್ನೇ ಬಿಟ್ಟು ಹೋಗಿದ್ದಾಳಂತೆ. ಪತ್ನಿ ಮತ್ತು ಮಗಳು ಮನೆ ಬಿಟ್ಟು ಹೋದ ಬೆನ್ನಲ್ಲೇ ಗಂಡ ಸಂಜೀವ್ ಬುರ್ಮನ್ ಕಂಗಾಲ್ ಆಗಿದ್ದಾನೆ. ಮಾತ್ರವಲ್ಲ, ಗಂಡ-ಹೆಂಡತಿ ಮಧ್ಯೆ ನಡೆದ ಸಣ್ಣ ಗಲಾಟೆಯ ಮಾಹಿತಿಯನ್ನು ಪೊಲೀಸರಿಗೆ ನೀಡಿ, ದಯವಿಟ್ಟು ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲು ಸಹಾಯ ಮಾಡಿ ಎಂದು ಕಣ್ಣೀರಿಟ್ಟಿದ್ದಾನಂತೆ.

ಇನ್ನು ಇತ್ತ ದೂರು ದಾಖಲಿಸಿಕೊಂಡಿರುವ ಪೊಲೀಸ್‌ ಅಧಿಕಾರಿ ಸಂಜೀವ್ ಈ ಬಗ್ಗೆ ಮಾತನಾಡಿ, ಗಂಡ-ಹೆಂಡತಿ ಮಧ್ಯೆ ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಗಲಾಟೆ ಶುರುವಾಗಿದೆ. ಅಷ್ಟಕ್ಕೂ ಪತ್ನಿಯ ಕೋಪಕ್ಕೆ ಕಾರಣ, ಟೊಮ್ಯಾಟೋ ಬಳಸುವ ಮೊದಲು ಯಾಕೆ ತನ್ನನ್ನು ಕೇಳಲಿಲ್ಲ ಎಂಬುವುದು. ವಿಚಾರಣೆ ನಡೆಯುತ್ತಿದೆ, ಶೀಘ್ರದಲ್ಲೇ ಬೇರೆಯಾಗಿರುವ ಜೋಡಿಯನ್ನು ಒಂದು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು