NEWSದೇಶ-ವಿದೇಶಮೈಸೂರು

ಕೈಯಲ್ಲಿ ಸಿನಿಮಾಗಳು ಇಲ್ಲದ ಕಾರಣ ಅಭಿಮಾನಿಗಳಿಗೇ ಬಿಗ್‌ ಆಫರ್‌ ನೀಡಿದ ಬಹುಭಾಷ ನಟಿ ಕಿರಣ್‌ ರಾಥೋಡ್‌

ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಸಿನಿಮಾಗಳಲ್ಲಿ ಆಫರ್‌ ಕಡಿಮೆಯಾಗುತ್ತಿದ್ದಂತೆ ಅಭಿಮಾನಿಗಳನ್ನು ತನ್ನತ ಸೆಳೆಯಲು ಬಹುಭಾಷ ನಟಿ ಕಿರಣ್‌ ರಾಥೋಡ್‌ ಅಭಿಮಾನಿಗಳಿಗೆ ಆಫರ್ ನೀಡಿದ್ದಾರೆ. ಅದು ಕೂಡ ಅಂತಿಂತ ಆಫರ್‌ ಅಲ್ಲ ಬಿಗ್‌ ಆಫರ್‌.

ಹೌದು! ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಕಿರಣ್‌ ರಾಥೋಡ್‌ ಸದ್ಯ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳಿಎಯುತ್ತಿದ್ದಾರೆ. ಹೀಗಾಗಿ ತಮ್ಮ ಅಭಿಮಾನಿಗಳ ಜತೆ ಸಂಪರ್ಕ ಸಾಧಿಸಲು ಒಂದು ಆಪ್‌ ಸಿದ್ಧಪಡಿಸಿದ್ದಾರೆ.

ಇನ್ನು ಆಪ್‌ಅನ್ನು ಅಭಿಮಾನಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ, ಅದನ್ನು ಸುಮ್ಮನೆ ಡೌನ್‌ಲೋಡ್‌ ಮಾಡಿಕೊಳ್ಳುವಂತಿಲ್ಲ. ಅದಕ್ಕೆ 49 ರೂಪಾಯಿ ಪಾವತಿಸಬೇಕು. ಆ ಬಳಿಕ ನೀವು ಡೌನ್‌ಲೋಡ್‌ ಮಾಡಿಕೊಂಡು ಅವರೊಂದಿಗೆ ಹರಟೆ ಹೊಡೆಯಬಹುದು. ಆದರೆ, ಅದಕ್ಕೂ ಇಂತಿಷ್ಟು ಎಂದು ಪಾವತಿಸಬೇಕು.

ಸದ್ಯ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲದ ಕಾರಣ ತಮ್ಮದೇ ಆಪ್‌ಅನ್ನು ಸಿದ್ಧಪಡಿಸಿರುವ ಕಿರಣ್, ಆ ಮೂಲಕ ಅವರನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ. ಆದರೆ, ಕೆಲವು ಷರತ್ತುಗಳನ್ನು ಹಾಕಿದ್ದು, ಆಪ್‌ ಮೂಲಕವೇ ನನ್ನನ್ನು ಸಂಪರ್ಕಿಸಬೇಕು. ಹಾಗಂತ ಅದು ಕೂಡ ಉಚಿತವಲ್ಲ, ನನ್ನೊಂದಿಗೆ ಮಾತನಾಡುವುದಕ್ಕೆ ಹತ್ತು ಸಾವಿರ ರೂಪಾಯಿ ಕೊಡಬೇಕು ಎಂದು ತಿಳಿಸಿದ್ದಾರೆ.

ಇನ್ನು ಹತ್ತು ಸಾವಿರ ರೂಪಾಯಿ ಪಾವತಿಸಿದರೆ ಅವರ ಜತೆ ಐದು ನಿಮಿಷ ಮಾತನಾಡಬಹುದಂತೆ. ಇಷ್ಟೇ ಅಲ್ಲ ಒಂದು ಸಾವಿರ ರೂಪಾಯಿ ಪಾವತಿ ಮಾಡಿದರೆ ಅವರು ಎರಡು ಹಾಟ್ ಫೋಟೋಗಳನ್ನು ಕಳುಹಿಸುತ್ತಾರಂತೆ. ಅಷ್ಟೇ ಅಲ್ಲದೇ ಅವರೊಂದಿಗೆ ಡಿನ್ನರ್ ಕೂಡ ಮಾಡಬಹುದಂತೆ.

ಇನ್ನು ಊಟ ಮಾಡಲು ಕೂಡ ಇಂತಿಷ್ಟು ಹಣವನ್ನು ಪಾವತಿಸಬೇಕು. ಅದು ಎಷ್ಟುಗೊತ್ತಾ ಡಿನ್ನರ್‌ಗೆ ಹೋಗಲು ಬರೋಬರಿ ಒಂದೂವರೆ ಲಕ್ಷ ರೂಪಾಯಿಯನ್ನು ಪಾವತಿಸಬೇಕಂತೆ. ಇನ್ನು ವಿಡಿಯೋ ಕಾಲ್ (Video Call) ಕೂಡ ಮಾಡಬಹುದಾಗಿದ್ದು, ಅದಕ್ಕೂ ಇಂತಿಷ್ಟು ಸಮಯಕ್ಕೆ ಇಂತಿಷ್ಟು ರೂಪಾಯಿಯಂತೆ ನೀಡಬೇಕು ಎಂದು ತಿಳಿಸಿದ್ದಾರೆ.

ವಿಡಿಯೋ ಕಾಲ್‌ಗೆ ಹನ್ನೆರಡು ಸಾವಿರ ರೂಪಾಯಿಯಿಂದ ಆರಂಭವಾಗಲಿದ್ದು ಈ ರೇಟು ಐವತ್ತು ಸಾವಿರ ರೂಪಾಯಿವರೆಗೂ ಇರಲಿದೆಯಂತೆ. ಇದನ್ನು ಕೇಳಿದ ಕೆಲ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ಕಿರಣ್ ರಾಥೋಡ್ ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು