Vijayapatha - ವಿಜಯಪಥ > ವಿಜಯಪಥ > NEWS > ವಿಡಿಯೋ > ಕೊರೊನಾ ತಡೆಗೆ ಸರ್ಕಾದೊಂದಿಗೆ ಕೈ ಜೋಡಿಸಿ: ಶ್ರೀ ಗುರುಸಿದ್ಧರಾಜಯೋಗೇಂದ್ರ ಸ್ವಾಮೀಜಿ
ಕೊರೊನಾ ತಡೆಗೆ ಸರ್ಕಾದೊಂದಿಗೆ ಕೈ ಜೋಡಿಸಿ: ಶ್ರೀ ಗುರುಸಿದ್ಧರಾಜಯೋಗೇಂದ್ರ ಸ್ವಾಮೀಜಿ
Editordev29/03/2020
ಹುಬ್ಬಳ್ಳಿ: ಜಗತ್ತನ್ನು ತಲ್ಲಣಗೊಳಿಸಿರುವ ಕೊರೊನಾ ಭಯಾನಕವಾದ ಸಾಂಕ್ರಾಮಿಕ ರೋಗವಾಗಿದೆ. ಮನುಕುಲಕ್ಕೆ ಆಪತ್ತನ್ನು ತಂದಿದೆ. ಇಡೀ ಜಗತ್ತಿನ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ. ವೈರಾಣು ಹರಡದಂತೆ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
ಭಾರತದ ಪ್ರಧಾನ ಮಂತ್ರಿಗಳು ನೀಡಿರುವ ಕರೆಯಂತೆ ಎಲ್ಲರೂ ಮನೆಯಲ್ಲಿ ಇದ್ದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ವೈರಾಣು ಹರದಂತೆ ತಡೆಗಟ್ಟಲು ಸಂಕಲ್ಪ ಮಾಡಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿರುವ ಎಲ್ಲಾ ಆದೇಶಗಳನ್ನು ಪಾಲಿಸುವುದರ ಮೂಲಕ ಜನರು ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ನೆರವಾಗಬೇಕು ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೇಂದ್ರ ಸ್ವಾಮೀಜಿ ಸಂದೇಶ ನೀಡಿದ್ದಾರೆ.
![](https://vijayapatha.in/wp-content/uploads/2024/02/QR-Code-VP-1-1-300x62.png)
Editordev
Leave a reply