NEWSನಮ್ಮಜಿಲ್ಲೆನಮ್ಮರಾಜ್ಯ

ದಾವಣಗೆರೆ: KSRTC ನೌಕರರ ಮಹಾ ಸಮ್ಮೇಳನ- ಮತ್ತೊಮ್ಮೆ ಹುಸಿ ಭರವಸೆ ನೀಡುತ್ತಾರೆ ಎನ್ನುವುದನ್ನು ಸುಳ್ಳು ಮಾಡಿದಕ್ಕೆ ಸಾರಿಗೆ ಸಚಿವರಿಗೆ ಧನ್ಯವಾದ

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಅಖಿಲ ಕರ್ನಾಟಕ ಸಾರಿಗೆ ನೌಕರರ ಮಹಾ ಸಮ್ಮೇಳನಕ್ಕೆ ಆಹ್ವಾನಿತರಾದ ಯಾವೊಬ್ಬ ಆಡಳಿತಾರೂಢ ರಾಜಕಾರಣಿಗಳು ಆಗಮಿಸದೇ ಇದ್ದದ್ದು ನಿರೀಕ್ಷಿತವೇ ಆಗಿದ್ದರೂ ಕೊನೇ ಪಕ್ಷ ಸಾರಿಗೆ ಸಚಿವರಾದರೂ ಬಂದು ಮತ್ತೊಮ್ಮೆ ಹುಸಿ ಭರವಸೆ ನೀಡುತ್ತಾರೆ ಎನ್ನುವುದನ್ನು ಸುಳ್ಳು ಮಾಡಿದಕ್ಕೆ ಸಾರಿಗೆ ಸಚಿವರಿಗೆ ಸದಾ ಸಾರಿಗೆ ನೌಕರರ ಹಿತ ಬಯಸುವ ಮೃತ್ಯುಂಜಯ ಹಿರೇಮಠ ಧನ್ಯವಾದ ತಿಳಿಸಿದ್ದಾರೆ.

ಆಡಳಿತ ಮಂಡಳಿಯಿಂದ ಆಹ್ವಾನಿತರಾಗಿ ಸಮಾವೇಶಕ್ಕೆ  ಅಧಿಕಾರಿಗಳು ಬಾರದೇ ಮಗದೊಮ್ಮೆ ನೌಕರರು ತಮಗೆ ನಗಣ್ಯ ಎಂದು ತೋರಿಸಿಕೊದುವುದಕ್ಕೋ ಅಥವಾ ತಾವು ಏನಿದ್ದರೂ ನೌಕರರಿಗೆ ಕಿರುಕುಳ ನೀಡುವುದೇ ನಮ್ಮ ಉದ್ದೇಶ ತಮಗೆ ಹಿತವಚನ ಎಂಬ ಪದದ ಅರ್ಥ ಗೊತ್ತೇ ಇಲ್ಲ ಎನ್ನುವ ಧೋರಣೆಯನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ ಎಂಬ ಕಾರಣಕ್ಕೆ ಭಾಗವಹಿಸದೇ ಇರುವುದಕ್ಕೆ ಅವರಿಗೂ ಧನ್ಯವಾದಗಳು.

ಯಾವುದೇ ಸಂಘಟನೆ ಕಳೆದ 15 ತಿಂಗಳಿನಿಂದ ಅಂದರೆ ಮುಷ್ಕರದ ನಂತರ ನೌಕರರ ಬಗ್ಗೆ ಕ್ಯಾರೇ ಎನ್ನದವರು ಮೊನ್ನೆ ಜುಲೈ 12 ರಂದು ಜಂಟಿ ಸಂಘಟನೆಗಳ ಸಭೆ ಕರೆದದ್ದನ್ನು ನೋಡಿದರೆ ಅವರಿಗೆ ಈಗ ಜ್ಞಾನೋದಯ ಆಗಿದೆ ಎಂದು ಭಾವಿಸೋಣ. ಆದರೂ ಸಹ ಅಂದಿನ ಜಂಟಿ ಸಭೆಯಲ್ಲಿ ಕೂಟದ ಸಮಾವೇಶದ ಬಗ್ಗೆ ಕೊಂಕು ಮಾತನಾಡಿದವರಿಗೆ ಈ ಸಮ್ಮೇಳನ ಎಚ್ಚರಿಕೆ ಘಂಟೆ ನೀಡಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಈ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು ಎಚ್ಚರಿಕೆ ಮಿಶ್ರಿತ ಆಶೀರ್ವಚನ ನೀಡಿದಕ್ಕಾಗಿ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ ಹಾಗೂ ಸ್ವಾಮೀಜಿಗಳು ಹೇಳಿದಂತೆ ನೌಕರರೂ ಮತ್ತು ಸಂಘಟನೆಗಳು ಬುಸುಗುಡುತ್ತಲೇ ಇರಬೇಕು. ಈ ಕೆಲಸ ಮಾಡುತ್ತಾ ಇರುವುದು ಕೇವಲ ಕೂಟ ಮಾತ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗಂತ ಕಚ್ಚಲೇಬಾರದು ಎಂದು ಅಲ್ಲ. ಕಚ್ಚುವ ಸಮಯ ಸಹ ದೂರ ಇಲ್ಲ. ಮುಂದಿನ ಚುನಾವಣೆಯಲ್ಲಿ ಸರಿಯಾಗಿ ಕಚ್ಚಿ ಸಾರಿಗೆ ನೌಕರರ ವಿಷ ಏನು ಎನ್ನುವುದನ್ನು ತೋರಿಸೋಣ ಈಗಾಗಲೇ ಇದರ ಅನುಭವ ಕೆಲವರು ಅನುಭವಿಸಿ ಆಗಿದೆ ಎಂದು ತಿಳಿಸಿದ್ದಾರೆ.

ಈಗಲಾದರೂ ಉಳಿದ ಸಂಘಟನೆಗಳು ಇದೇ ಜುಲೈ 21 ರಂದು ಸೇರುವ ಜಂಟಿ ಸಂಘಟನೆಯ ಸಭೆಯಲ್ಲಿ ತಮ್ಮ ತಮ್ಮ ವೈಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಸಮಾವೇಶದಲ್ಲಿ ಇಟ್ಟ ಬೇಡಿಕೆಗಳ ಬಗ್ಗೆ ಒಕ್ಕೊರಲಿನ ಅಭಿಪ್ರಾಯಗಳನ್ನು ಸರಕಾರ/ ಆಡಳಿತ ಮಂಡಳಿ ಮುಂದೆ ಮಂಡಿಸಲಿ ಎಂದು ಬಯಸುತ್ತಿರುವುದಾಗಿ ಹೇಳಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ