NEWSನಮ್ಮಜಿಲ್ಲೆಸಿನಿಪಥ

ನಿರೂಪಕಿ ಅಪರ್ಣಾಗೆ ಇನ್ನಷ್ಟು ಖ್ಯಾತಿ ಹೆಚ್ಚಿಸಿದ್ದ ಮಜಾ ಟಾಕೀಸ್​..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಜಾ ಟಾಕೀಸ್​ ಮೂಲಕವೂ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಿರೂಪಕಿ ಅಪರ್ಣಾ ಅವರು ತಮ್ಮ ಮಾಧುರ್ಯದ ಧ್ವನಿಪಟಲದಿಂದ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದರಲ್ಲೇ ಖ್ಯಾತಿ ಗಳಿಸಿದ್ದ ನಿರೂಪಕಿ. ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರಂತೆ. ಅದು ಅಭಿಮಾನಿಗಳಿಗೆ ಗೊತ್ತಿರಲಿಲ್ಲ. ಆದರೆ, ಆ ಸುದ್ದಿ ಕೇಳಿ ಅಭಿಮಾನಿಗಳು ಶಾಕ್​ಗೆ ಒಳಗಾಗಿದ್ದಾರೆ.

ಹೌದು, ಕನ್ನಡವನ್ನು ಸ್ಪಷ್ಟವಾಗಿ ಮಾತಾಡುತ್ತಿದ್ದ ಚಲುವೆ ಅಪರ್ಣಾ ಅವರು ನೋಡುವುದಕ್ಕೂ ಅಷ್ಟೇ ಸುಂದರವಾಗಿದ್ದರು. ಇನ್ನು ಬಿಗ್​ಬಾಸ್​ ಸೀಸನ್​ 1ಕ್ಕೆ ಎಂಟ್ರಿ ಕೊಟ್ಟಿ ಅದರಲ್ಲೂ ಮಿಂಚಿದ್ದರು. ಆ ಬಳಿಕವೂ ಹಲವು ಕಾರ್ಯಕ್ರಮಳಲ್ಲಿ ಅವರು ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ನಟ ಸೃಜನ್ ಲೋಕೇಶ್ ಬ್ಯಾನರ್‌ನಡಿ ಮೂಡಿಬಂದ ‘ಮಜಾ ಟಾಕೀಸ್’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು.

ಅದರಲ್ಲೂ ಕೂಡ ನಿರೂಪಕಿ ಅಪರ್ಣಾ ಅವರು ಅತಿ ಹೆಚ್ಚು ಖ್ಯಾತಿ ಪಡೆದುಕೊಂಡರು. ಇನ್ನು ವಿಶೇಷ ಎಂದರೆ ನಿರೂಪಕಿ ಅಪರ್ಣಾ ಅವರನ್ನು ಖುದ್ದು ನಟ ಸೃಜನ್ ಲೋಕೇಶ್ ಅವರೇ ಈ ಶೋಗೆ ಬರುವಂತೆ ಒತ್ತಾಯ ಮಾಡಿದ್ದರು. ಇದಾದ ಬಳಿಕ ಮಜಾ ಟಾಕೀಸ್​ನಲ್ಲಿ ವರಲಕ್ಷ್ಮೀ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದರು.

ಇನ್ನು ವರಲಕ್ಷ್ಮೀ ಪಾತ್ರದಲ್ಲಿ ನಟಿಸಿದ್ದ ಅಪರ್ಣಾ ಅವರ ಸಲ್ಲು, ಒಬಾಮಾ ಕಾಲ್ ಮಾಡೋದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಮೂಲಕ ಕೂಡ ಅಭಿಮಾನಿ ಬಳಗವನ್ನು ಇನ್ನಷ್ಟು ಗಳಿಸಿಕೊಂಡಿದ್ದರು. ವರಲಕ್ಷ್ಮೀ ಪಾತ್ರ ಮಾಡಿದ ಮೇಲೆ ಅವರ ನಿಜ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಕೂಡ ಆಗಿದ್ದವು. ಈ ಮಜಾ ಟಾಕೀಸ್​ ಮಾಡಿದ ಮೇಲೆ ಕಾಮಿಡಿ ಸಿನಿಮಾಕ್ಕೆ ಆಫರ್ ಬಂದಿತಂತೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!