NEWSನಮ್ಮಜಿಲ್ಲೆಸಂಸ್ಕೃತಿ

ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ನೆಲೆಯಲ್ಲಿ ಅದ್ದೂರಿ ಚಂದ್ರ ಮಂಡಲೋತ್ಸವ

ವಿಜಯಪಥ ಸಮಗ್ರ ಸುದ್ದಿ

ಕೊಳ್ಳೇಗಾಲ: ಪವಾಡ ಪುರುಷ ಶ್ರೀ ಸಿದ್ದಪ್ಪಾಜಿ ನೆಲೆಯಲ್ಲಿ ಅದ್ದೂರಿ ಚಂದ್ರಮಂಡಲೋತ್ಸವ ಶುಕ್ರವಾರ ಆರಂಭವಾಯಿತು. ಕೊಳ್ಳೇಗಾಲ ತಾಲೂಕಿನ ಹನೂರು ವಿಧಾನಸಭಾ ಕ್ಷೇತ್ರದ ಚಿಕ್ಕಲ್ಲೂರು ಜಾತ್ರೆಗೆ ವರ್ಷದ ಮೊದಲ ಹುಣ್ಣಿಮೆ ದಿನ ಅದ್ದೂರಿ ಚಾಲನೆ ದೊರೆಯಿತು.

ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ರಾತ್ರಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದ್ದು, ಅಗ್ನಿ ಜ್ವಾಲೆ ದಕ್ಷಿಣ ಮುಖವಾಗಿ ಉರಿದಿದ್ದು ಈ ಬಾರಿ ದಕ್ಷಿಣ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗಲಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

ಐದು ದಿನಗಳ ಕಾಲ ನಡೆಯುವ ತಾಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆ ಶುಕ್ರವಾರದಿಂದ ಆರಂಭವಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಸಿದ್ದಪ್ಪಾಜಿಯ ಭಕ್ತರು ಚಿಕ್ಕಲ್ಲೂರು ಕಡೆಗೆ ಧಾವಿಸಿದ್ದಾರೆ.

ಶುಕ್ರವಾರ ರಾತ್ರಿ 9 ಗಂಟೆಗೆ ಚಂದ್ರಮಂಡಲದ ಮೂಲಕ ಜಾತ್ರೆ ಆರಂಭಗೊಂಡಿರುವುದು ವಿಶೇಷ. ಸಿದ್ದಪ್ಪಾಜಿ ಒಕ್ಕಲಿನ ಏಳು ಗ್ರಾಮಗಳಾದ ಸುಂಡ್ರಳ್ಳಿ, ಬಾಣೂರು, ತೆಳ್ಳನೂರು, ಕೊತ್ತನೂರು, ಬಾಳಗುಣಸೆ, ಇರಿದಾಳು ಇಕ್ಕಡಹಳ್ಳಿಯ ಗ್ರಾಮಸ್ಥರು ಸುಗ್ಗಿಯ ನಂತರ ಹುಣ್ಣಿಮೆಯ ದಿನ ಕಿರಾಟಾಕಾರದ ಚಂದ್ರಮಂಡಲವನ್ನು ಬಿದಿರಿನಿಂದ ಕಟ್ಟಿ ಭಕ್ತರು ತರುವ ಎಣ್ಣೆ ಬತ್ತಿಯನ್ನು ಇದಕ್ಕೆ ಸುತ್ತಿ ಬೊಪ್ಪೇಗೌಡನ ಪುರದ ಮಠದ ಶ್ರೀಗಳು ಅಗ್ನಿ ಪ್ರವೇಶ ಮಾಡುವ ಸಂದರ್ಭಕ್ಕೆ ಲಕ್ಷಾಂತರ ಭಕ್ತರು ಕಾತುರುದಿಂದ ಕಾಯುತ್ತಾರೆ.

ಅಗ್ನಿಸ್ಪರ್ಶವಾಗುತ್ತಿದ್ದಂತೆ ಉಘೇ ಉಘೇ ಸಿದ್ದಪ್ಪಾಜಿ ಎಂದು ಘೋಷಣೆ ಕೂಗುತ್ತ ಧವಸ ಧಾನ್ಯವನ್ನು ಚಂದ್ರಮಂಡಲಕ್ಕೆ ಎರಚಿ ಭಕ್ತಿ ಸಮರ್ಪಣೆ ಮಾಡುತ್ತಾರೆ. ಚಂದ್ರ ಮಂಡಲದ ಜ್ವಾಲೆ ಯಾವ ದಿಕ್ಕಿಗೆ ಪಸರಿಸುವುದು ಆ ದಿಕ್ಕೆಗೆ ಮುಂದಿನ ವರ್ಷ ಮಳೆ ಬೆಳೆ ಸಮೃದ್ಧಿ ಎಂಬ ನಂಬಿಕೆ ಇದೆ.

ಸ್ವಾಮಿಗಳಿಗೆ ಸ್ವಾಗತ: ಬೊಪ್ಪೆಗೌಡನ ಪುರದಿಂದ ಚಂದ್ರಮಂಡಲಕ್ಕೆ ಆಗಮಿಸಿದ ಜ್ಞಾನಾನಂದ ಚೆನ್ನರಾಜೇ ಅರಸ್ ಅವರನ್ನು ಮಾರ್ಗದುದ್ದಕ್ಕೂ ನೀಲಗಾರರು ಹಾಗೂ ಸಿದ್ದಪ್ಪಾಜಿ ಭಕ್ತವೃಂದ ತಳಿರು ತೋಳರಣಗಳಿಂದ ಶೃಂಗರಿಸಿ ಮಠಪದಲ್ಲಿ ಕುಳ್ಳಿರಿಸಿ ಜಾತ್ರೆಗೆ ಬರಮಾಡಿಕೊಂಡರು. ಜಾತ್ರೆ ಪ್ರವೇಶಿಸುತ್ತಿದ್ದಂತೆ ಕಂಡಾಯಗಳು ಹಾಗೂ ಸಕಲ ಬಿರಿದು ಬಾವುಲಿಗಳೊಡನೆ ಮಂಗಳ ವಾದ್ಯ ಸಮೇತ ಮಠಕ್ಕೆ ಕರೆದೊಯ್ಯಲಾಯಿತು.

[wp-rss-aggregator limit=”4″ pagination=”on”]

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು