NEWSನಮ್ಮಜಿಲ್ಲೆಸಂಸ್ಕೃತಿ

ಬನ್ನೂರು: ಜೋಡೆತ್ತುಗಳ ಬಂಡಿ ಓಟ – ಹೇಮಾದ್ರಾಂಬಾ ದೇವಿಗೆ ಹರಿಜನರಿಂದ ಅನ್ನನೈವೇದ್ಯ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಪುರಾಣ ಪ್ರಸಿದ್ಧ ಶ್ರೀ ಹೇಮಾದ್ರಾಂಬಾ ಜಾತ್ರಾ ಮಹೋತ್ಸದ ಪಟ್ಟಣದಲ್ಲಿ ಕಳೆಗಟ್ಟಿದ್ದು, ಜಾತ್ರೆ ಅಂಗವಾಗಿ ಜೋಡೆತ್ತಿನ ಬಂಡಿಗಳನ್ನು ಪಟ್ಟಣದ ರಾಜ ಬೀದಿಗಳಲ್ಲಿ ಇಂದು ಓಡಿಸುವ ಮೂಲಕ ಪಟ್ಟಣದಲ್ಲಿ ಸಂಭ್ರಮ ಮನೆಮಾಡಿತ್ತು.

ಇನ್ನು ನಾಳೆ (ಸೋಮವಾರ) ಅಲಂಕರಿಸಿದ ತೇರನ್ನು ರಾಜಬೀದಿಗಳಲ್ಲಿ ಎಳೆಯುವ ಮೂಲಕ ಭಕ್ತರು ಸಂಭ್ರಮಿಸಲಿದ್ದಾರೆ. ಹೌದು! ಅಲಂಕೃತಗೊಂಡ ತೇರನ್ನು ಫೆ.6ರಂದು ಬೆಳಗ್ಗೆ 8.30ಕ್ಕೆ ಎಳೆಯುವ ಮೂಲಕ ಗ್ರಾಮದ ಮುಖಂಡರು ಚಾಲನೆ ನೀಡಿಲಿದ್ದಾರೆ. ನಂತರ ತೇರಿನಬೀದಿ ಮೂಲಕ ಸಾಗುವ ರಥವು ದೊಡ್ಡಂಗಡಿ ಬೀದಿ ಮೂಲಕ ಸಾಗಿ ಮತ್ತೆ ದೇವಾಲಯದ ಆವರಣವನ್ನು ಬೆಳಗ್ಗೆ 11.30ಕ್ಕೆ ತಲುಪಲಿದೆ.

ಇನ್ನು ಇಂದು ಜೋಡೆತ್ತಿನ ಬಂಡಿಗಳನ್ನು ಪಟ್ಟಣದ ರಾಜ ಬೀದಿಗಳಲ್ಲಿ ಓಡಿಸಲಾಯಿತು. ಇದಕ್ಕೂ ಮುನ್ನಾ ಬೆಳಗ್ಗೆ ಪ್ರಾತಃಕಾಲದಲ್ಲಿ ವಿವಿಧ ಹೂಗಳಿಂದ ಅಲಂಕರಿಸಿದ ಹೇಮಾದ್ರಾಂಬಾ ದೇವಿಗೆ ಅಭಿಷೇಕ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿ ದರ್ಶನ ಪಡೆದರು.

ವಿಶೇಷ ಪೂಜಾ ಕಾರ್ಯಕ್ರಮ ಅಂಗವಾಗಿ ಮಾಕನಹಳ್ಳಿಯ ದೇವಿ ತೋಪಿಗೆ ಹೇಮಾದ್ರಾಂಬಾ ಉತ್ಸವ ಮೂರ್ತಿಯನ್ನು ಫಲ್ಲಕ್ಕಿಮೇಲೆ ಕೂರಿಸಿ ಕರೆದೊಯ್ಯಲಾಯಿತು. ದೇವಿ ತೋಪಿನಲ್ಲಿ ದೇವಿಗೆ ಅವಭೃತಸ್ನಾನ ಮತ್ತು ಅನ್ನನೈವೇದ್ಯ ನೆರವೇರಿಸಲಾಯಿತು.

ಅವಭೃತಸ್ನಾನ ಮತ್ತು ಅನ್ನನೈವೇದ್ಯಕ್ಕಾಗಿ ಬನ್ನೂರಿನಿಂದ ಮಾಕನಹಳ್ಳಿಯ ದೇವಿ ತೋಪಿಗೆ ದೇವಿಯನ್ನು ಫಲ್ಲಕ್ಕಿ ಮೇಲೆ ಕೂರಿಸಿಕೊಂಡು ಮೆರವಣಿಗೆ ಮೂಲಕ ಪಟ್ಟಣದ ರಾಜ ಬೀಗಳಲ್ಲಿ, ಅಂದರೆ ದೇವಾಲಯದಿಂದ ರತ್ನಮಹಲ್ ಚಿತ್ರಮಂದಿ, ಚಾಮುಂಡಿ ದೇವಾಲಯ ರಸ್ತೆ ಮಾರ್ಗವಾಗಿ ದೇವಿ ತೋಪಿನವರೆಗೆ ಕರೆತರಲಾಯಿತು.

ಈ ವೇಳೆ ರಸ್ತೆಯುದ್ದಕ್ಕೂ ನೆರೆದಿದ್ದ ಭಕ್ತರು ದೇವಿ ದರ್ಶನ ಪಡೆದರು. ದೇವಿ ತೋಪಿನಲ್ಲಿ ಅವಭೃತ ಸ್ನಾತ ನೆರೆವೇರಿದ ಬಳಿಕ ಹರಿಜನರಿಂದ ನೈವೇದ್ಯ ನೀಡಲಾಯಿತು. ಈ ವೈಭವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು