NEWSನಮ್ಮರಾಜ್ಯರಾಜಕೀಯ

ಬೊಮ್ಮಾಯಿ ಜೆಡಿಎಸ್‌ ಒದ್ದು ಹೊರಹೋಗಿದ್ದು ಏಕೆ: ಉತ್ತರಿಸುವಿರ ಎಚ್‌ಡಿಕೆ ಎಂದ ಈಶ್ವರಪ್ಪ

ವಿಜಯಪಥ ಸಮಗ್ರ ಸುದ್ದಿ

ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದು ಹೆಮ್ಮೆಯಿಂದ ಹೇಳುತ್ತೀರಲ್ಲ ಅವರು ಜನತಾದಳ ಒದ್ದುಹೋಗಿದ್ದೇಕೆ? ಇದಕ್ಕೆ ಉತ್ತರ ಕೊಡಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಬೊಮ್ಮಾಯಿ ನಮ್ಮ ಪ್ರಾಡಕ್ಟ್ ಎಂದಿದ್ದ ಕುಮಾರಸ್ವಾಮಿ ಹೇಳಿಕೆಗೆ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಜನತಾದಳವನ್ನು ಒದ್ದು ಬಿಜೆಪಿಗೆ ಬಂದರು, ಅದರ ಬಗ್ಗೆ ಹೇಳಿ ಕುಮಾರಸ್ವಾಮಿಯವರೇ. ಪಕ್ಷ ಸಂಘಟಿಸುವ ಯಾರಿಗಾದರೂ ಒಳ್ಳೆ ಸ್ಥಾನಮನ ಸಿಗುತ್ತದೆ ಎಂಬುದಕ್ಕೆ ಬೊಮ್ಮಾಯಿ ಅವರೇ ಸಾಕ್ಷಿ ಎಂದರು.

ಇಲ್ಲಿಗೆ ಬಂದಮೇಲೆ ತಲಹರಟೆ ಮಾಡಿದ್ರೆ ಚರಂಡಿಗೆ ಹೋಗಿ ವಾಂತಿ ಮಾಡುತ್ತೀವಿ. ಅಂದಹಾಗೆ ನಮಗೆ ಜೀರ್ಣ ಮಾಡಿಕೊಳ್ಳುವ ಶಕ್ತಿ ಜಾಸ್ತಿ ಇದೆ. ನಮ್ಮ ಕಡೆ ಬಂದಾಗ ಯಾವ ಕಾರ್ಯಕರ್ತರನ್ನು ತಿರಸ್ಕಾರ ಭಾವನೆಯಿಂದ ನೋಡಿಲ್ಲ ಕುಮಾರಸ್ವಾಮಿಯವರೇ ಎಂದು ಹೇಳಿದರು.

ನಿಮ್ಮಿಂದ ಇನ್ನು ಎಷ್ಟು ಜನ ಬರ್ತಾರೆ ಗೊತ್ತಿಲ್ಲ. ಜನತಾದಳ ಪಾರ್ಟಿ ಮುಚ್ಚುವ ಹಂತ ತಲುಪಿದೆ. ನೀವು ಅದನ್ನು ಮುಚ್ಚಿಕೊಂಡು ಬಿಜೆಪಿಯಲ್ಲೇ ನಮ್ಮವರಿಗೆ ಸಮಾನ ಸ್ಥಾನ ಸಿಗುತ್ತದೆ ಎಂದು ತೀರ್ಮಾನ ಮಾಡಿ, ಆನಂದ ಪಡಿ. ಆದರೆ ನಿಮ್ಮ ಶಾಸಕರನ್ನು ಉಳಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇಂದಿನಿಂದ ರಜಾದಿನಗಳಲ್ಲೂ ನೌಕರರ ಬ್ಯಾಂಕ್‌ ಖಾತೆಗೆ ಬರಲಿದೆ ವೇತನ

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು