NEWS

ಬೇರೆಡೆಗೆ ವರ್ಗಾವಣೆಗೊಂಡರೂ ಹೋಗದ ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕದ ಡಿಎಂ ಅಪ್ಪಿರೆಡ್ಡಿ: ಅಧಿಕಾರಿಗಳ ಜಾಣ ಮೌನ

ವಿಜಯಪಥ ಸಮಗ್ರ ಸುದ್ದಿ

ಚಿಂತಾಮಣಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ  ನಿಗಮದಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ  ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳ ಪೈಕಿ 28 ಅಧಿಕಾರಿಗಳನ್ನು ಜುಲೈ 26ರಂದು ವರ್ಗಾವಣೆ ಮಾಡಿ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆದರೆ ಆ ಆದೇಶವನ್ನು ಬದಿಗೆ ಸರಿಸಿ ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೌದು! ಕಳೆದ ಜುಲೈ 26ರಂದು ಕೆಎಸ್‌ಆರ್‌ಟಿಸಿಯ ವಿವಿಧ ಘಟಕಗಳಲ್ಲಿ ಕೆಲಸ ಮಾಡುತ್ತಿರುವ 28 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಚಿಂತಾಮಣಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಅಪ್ಪಿರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಅವರು ವರ್ಗಾವಣೆಗೊಂಡಿದ್ದರೂ ಅದೇ ಡಿಪೋನಲ್ಲೇ ಇನ್ನೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಗಮನಿಸಿದರೆ ಮುಷ್ಕರದ ವೇಳೆ ಏನು ತಪ್ಪು ಮಾಡದ ಸುಮಾರು 20 ಸಾವಿರ ನೌಕರರನ್ನು ವರ್ಗಾವಣೆ, ಅಮಾನತು, ವಜಾ ಮಾಡಿ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ಜತೆಗೆ ಆದೇಶ ಹೊರಡುಸಿದ್ದ ದಿನಾಂಕದಿಂದ ಆಯಾಯ ಡಿಪೋಗಳಲ್ಲಿ ವರ್ಗಾವಣೆಗೊಂಡ ನೌಕರರಿಗೆ ಕರ್ತವ್ಯ ಕೊಡದೆ ನೀವು ವರ್ಗಾವಣೆ ಗೊಂಡಿರುವ ಡಿಪೋಗಳಲ್ಲೇ ಹೋಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದರು.

ಆದರೆ, ಚಿಂತಾಮಣಿ ಘಟಕದ ವ್ಯವಸ್ಥಾಪಕರನ್ನು ಜುಲೈ 26 ರಂದೇ ವರ್ಗಾವಣೆ ಮಾಡಿದ್ದರೂ ಅವರು ಇನ್ನೂ ಅಲ್ಲೇ ಡ್ಯೂಟಿ ಮಾಡುತ್ತಿದ್ದಾರೆ. ಅಂದರೆ ನಿಗಮದಲ್ಲಿ ಅಧಿಕಾರಿಗಳಿಗೊಂದು ಕಾನೂನು ನೌಕರರಿಗೊಂದು ಕಾನೂನು ಇದೆಯೇ ಎಂದು ಸಾರಿಗೆ ನೌಕರರು ಕೇಳುತ್ತಿದ್ದಾರೆ. ಜತೆಗೆ ನಮ್ಮನ್ನು ವರ್ಗಾಣೆ ಮಾಡಿದ ಕೂಡಲೇ ಹೇಗೆ ವರ್ಗಾವಣೆಯಾಗಿರುವ ಡಿಪೋಗಳಗೆ ಹೋಗಿ ರಿಪೋರ್ಟ್‌ ಮಾಡಿಕೊಳ್ಳಿ ಎಂದು ಹೇಳಿದರೋ ಅದೇ ರೀತಿ ಅಧಿಕಾರಿಗಳು ಹೋಗಬೇಕಲ್ಲವೇ ಎಂದು ಹೇಳುತ್ತಿದ್ದಾರೆ.

ಇನ್ನು ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು ಕಾನೂನನ್ನು ಗಾಳಿ ತೂರಿ ತಮಗಿಷ್ಟ ಬಂದರೀತಿ ವರ್ತಿಸಬಹುದು. ಅದನ್ನು ಕೇಳುವುದಕ್ಕೆ ಯಾವು ಉನ್ನತ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?

ಅದೇ ಒಬ್ಬ ಚಾಲಕ ಇಲ್ಲ ನಿರ್ವಾಹಕ ವರ್ಗಾವಣೆಗೊಂಡ ಸ್ಥಳಕ್ಕೆ ಹೋಗುವುದಿಲ್ಲ ನಾವು ಇಲ್ಲೇ ಕೆಲಸ ಮಾಡುತ್ತೇವೆ ಎಂದು ಹೇಳಿದರೆ, ಅಧಿಕಾರಿಗಳು ಒಪ್ಪಿಕೊಳ್ಳುತ್ತಿದ್ದರಾ? ಸಾರಿಗೆ ನಿಗಮಗಳಲ್ಲಿ ಏಕೆ ಅಧಿಕಾರಿಗಳಿಗೊಂದು ನ್ಯಾಯ ಸಿಬ್ಬಂದಿಗಳಿಗೊಂದು ನ್ಯಾಯ. ಕಾನೂನು ಇಲ್ಲಿ ಸಂವಿಧಾನತ್ಮಕವಾಗಿ ಇಲ್ಲವೇ ಎಂಬ ಅನುಮಾನ ಮೂಡುತ್ತಿದೆ. ಅಂದರೆ ಇಲ್ಲಿ ಸಂವಿಧಾನಾತ್ಮಕ ಕಾನೂನುಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತಿದೆ.

ಇನ್ನು ಪ್ರಸ್ತುತ ಸದ್ಯದ ಮಾಹಿತಿ ಪ್ರಕಾರ ನಮಗೆ ಚಿಂತಾಮಣಿ ಡಿಪೋ ಡಿಎಂ ಮಾತ್ರ ವರ್ಗಾವಣೆಗೊಂಡರೂ ಆ ಸ್ಥಳಕ್ಕೆ ಹೋಗದೆ ಇದ್ದಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂಬುವುದು ತಿಳಿದು ಬಂದಿದೆ. ಇವರಂತೆ ಇನ್ನೂ ಎಷ್ಟು ಜನ ಅಧಿಕಾರಿಗಳು ಹೀಗೆ ವರ್ಗಾವಣೆಗೊಂಡಿರುವುದನ್ನು ಬದಿಗೆ ಸರಿಸಿ ಇದ್ದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುವುದರ ಬಗ್ಗೆ ಮುಂದಿನ ದಿನಗಳಲ್ಲಿ ವಿಜಯಪಥ ಬಯಲಿಗೆಳೆಯಲಿದೆ.

 ನಾವು ತುಮಕೂರು ವಿಭಾಗದ ತುರುವೇಕೆರೆ ಕೆಎಸ್‌ಆರ್‌ಟಿಸಿ ಘಟಕಕ್ಕೆ ವರ್ಗಾವಣೆ ಅಗಿರುವುದು ನಿಜ. ಆದರೆ, ಚಿಂತಾಮಣಿ ಡಿಪೋ ತುಂಬ ದೊಡ್ಡದಿದ್ದು, ಇಲ್ಲಿಗೆ ಬರಬೇಕಿರುವ ಡಿಪೋ ವ್ಯವಸ್ಥಾಪಕರು ಬಂದು ಅಧಿಕಾರ ವಹಿಸಿಕೊಳ್ಳದಿರುವುದರಿಂದ ನಾವು ಇನ್ನು ಇಲ್ಲೇ ಕೆಲಸ ಮಾಡುತ್ತಿದ್ದೇವೆ. ಆ ಅಧಿಕಾರಿ ಬಂದ ಕೂಡಲೇ ನಮಗೆ ನಿಯೋಜಿಸಿರುವ ಡಿಪೋಗೆ ಹೋಗಿ ಕೆಲಸ ಮಾಡುತ್ತೇವೆ.

l ಅಪ್ಪಿರೆಡ್ಡಿ, ಚಿಂತಾಮಣಿ ಕೆಎಸ್‌ಆರ್‌ಟಿಸಿ ಡಿಎಂ (ವರ್ಗಾವಣೆಗೊಂಡಿರುವವರು)

1 Comment

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು