NEWSಆರೋಗ್ಯಉದ್ಯೋಗ

ಮಾನಸಿಕ ಆರೋಗ್ಯ ಸಮಾಲೋಚಕರ  ಹುದ್ಧೆಗೆ ಅರ್ಜಿ ಆಹ್ವಾನ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ 2024-25ನೇ ಸಾಲಿನ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ (ಎನ್.ಎಂ.ಎಚ್.ಪಿ) ಅಡಿಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಾನಸಿಕ ಆರೋಗ್ಯ ಸಮಾಲೋಚಕರನ್ನು ಗೌರವಧನದ ಮೇರೆಗೆ ನಿಯೋಜಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: Clinical Psychologist/Master of arts in psychologist/Master of science in psychology ಕರ್ತವ್ಯ: ಸಮಾಲೋಚಕರಾಗಿ ಕಾಲೇಜು, ನಗರ ಕೋಳಗೇರಿಗಳಲ್ಲಿ ಮಾನಸಿಕ ಅಸ್ವಸ್ತರನ್ನು ಸಮಾಲೋಚನೆ ಮಾಡುವುದು.

ವಾರಕ್ಕೋಮ್ಮೆ ಪ್ರತಿವಾರ ತಿಂಗಳ ಒಟ್ಟು 2 ದಿನಗಳಲ್ಲಿ ಮತ್ತು ನಗರ ಕೋಳಗೇರಿಗಳಲ್ಲಿ ವಾರಕ್ಕೊಮ್ಮೆ ತಿಂಗಳ ಒಟ್ಟು 4 ದಿನಗಳಲ್ಲಿ ಇಡೀ ಒಂದು ಕೆಲಸದ ದಿನಕ್ಕೆ ರೂ.1000 (ಒಂದು ಸಾವಿರ ಮಾತ್ರ) ಕೆಳಗಿನ ಷರತ್ತುಗಳೊಂದಿಗೆ(ಎನ್.ಎಂ.ಎಚ್.ಪಿ)ಅಡಿಯಲ್ಲಿ ಸಮಾಲೋಚಕರಾಗಿ ಕೆಲಸ ಮಾಡಬೇಕು.

ಈ ಕೆಲಸವು ಎನ್.ಎಂ.ಎಚ್.ಪಿ ಅಡಿಯಲ್ಲಿ ನಿಗದಿತ ದಿನಗಳು ಮತ್ತು ನಿಗದಿತ ರೂ.1000 ಗೌರವಧನದೊಂದಿಗೆ ತಾತ್ಕಾಲಿಕ ನಿಯೋಜನೆಯಾಗಿರುತ್ತದೆ. ಈ ಹುದ್ದೆಯಲ್ಲಿ ಬಡ್ತಿ ಶಾಶ್ವತ ಕೆಲಸ ಬದಲಾವಣೆ ಹಕ್ಕು ಪಡೆದಿರುವುದಿಲ್ಲ. ಈ ಹುದ್ದೆಯು ಒಂದು ಹಣಕಾಸು ವರ್ಷಕ್ಕೆ ಮಾತ್ರ ಮಾನ್ಯವಾಗಿರುತ್ತದೆ. ಶಾಶ್ವತ ಹುದ್ದೆಯನ್ನಾಗಿ ಮಾಡಲು ಯಾವುದೇ ಹಕ್ಕು ಪಡೆದಿರುವುದಿಲ್ಲ.

ಎನ್.ಎಂ.ಎಚ್.ಪಿ ಕೌನ್ಸಿಲಿಂಗ್ ಕೆಲಸ ಮಾಡುವ ದಿನಗಳಂದು ಬೇರೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಿಲ್ಲ. ಈ ಹುದ್ದೆಯು ತಾತ್ಕಾಲಿಕ ನಿಯೋಜನೆಯಾಗಿರುವುದರಿಂದ ಯಾವುದೇ ಟಿಎ ಮತ್ತು ಡಿಎಯನ್ನು ನೀಡುವುದಿಲ್ಲ. ಫಲಾನುಭವಿಯ ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿರುತ್ತದೆ.

ಕೆಲಸ ಮಾಡುವಾಗ ಯಾವುದೇ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಸರ್ಕಾರ ಜವಾಬ್ದಾರಿಯಾರುವುದಿಲ್ಲ. ಕೌನ್ಸಿಲಿಂಗ್ ಸಮಯದಲ್ಲಿ (Medical Ethics) ಕಟ್ಟುನಿಟ್ಟಾಗಿ ಅನುಸರಿಸಬೇಕು. ಪ್ರತಿ ತಿಂಗಳು ಕೆಲಸದ ಪ್ರಗತಿ ವರದಿಯನ್ನು ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಜಿಲ್ಲಾಡಳಿತ ಭವನ, ಬೀರಸಂದ್ರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿಗೆ ಸಲ್ಲಿಸಬಹುದು.

ಆಸಕ್ತಿಯುಳ್ಳವರು 2024 ಸೆಪ್ಟೆಂಬರ್ 25 ರಿಂದ 2024 ಆಕ್ಟೋಬರ್ 08ರ ವರೆಗೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಕೊಠಡಿ ಸಂಖ್ಯೆ: 207 2ನೇ ಮಹಡಿ ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಆರೋಗ್ಯಾಧಿಕಾರಿ ತಿಳಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಜೆಟ್‌ನಲ್ಲಿ ನಿಮಗೆ ಸಿಹಿ ಸುದ್ದಿ ಇದೆ: KSRTC ಅಧಿಕಾರಿಗಳಿಗೆ ಸಾರಿಗೆ ಸಚಿವರ ಭರವಸೆ KSRTC ಬಸ್‌-ಬೈಕ್ ನಡುವೆ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್...