NEWSನಮ್ಮರಾಜ್ಯಸಿನಿಪಥ

ರಂಗಭೂಮಿ ಸೇರಿ ಕಲೆಗಾಗಿ ಶ್ರಮಿಸುತ್ತಿರುವವರ ಸಂಕಷ್ಟ ನೀಗಿಸಿ

 ಸಿಎಂ ಯಡಿಯೂರಪ್ಪರಿಗೆ  ರಂಗನಟದ ಮಾಜಿ ಸದಸ್ಯ ವೆಂಕಟರಾಜು ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಂಗಭೂಮಿ ಸೇರಿದಂತೆ ಕಲೆಗಾಗಿ ದುಡಿಯುವ ಕಲಾವಿದರು ಕೊರೊನಾದಂತದ ವಿಷಮ ಪರಿಸ್ಥಿಯಿಂದ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸರ್ಕಾರ ನೆರವಾಗಬೇಕು ಎಂದು ರಂಗನಟದ ಮಾಜಿ ಸದಸ್ಯ ಆರ್. ವೆಂಕಟರಾಜು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದಾರೆ.

ಕಲೆಗಾಗಿ ದುಡಿಯುವ ಜನ ಹವ್ಯಾಸಿ, ವೃತ್ತಿ-ಅರೆ ವೃತ್ತಿ, ಪೌರಾಣಿಕ, ಸೇರಿದಂತೆ ಚಲನಚಿತ್ರಗಳಲ್ಲಿನ ಪೋಷಕ ಕಲಾವಿದ, ಬರಹಗಾರ ಇವರೆಲ್ಲರೂ ಒಂದೇ ರಂಗ ಬಳ್ಳಿಯ ಹೂಗಳು. ಈ ಜನರ ಸಾಂಸ್ಕೃತಿಕ ಸಂಪನ್ನತೆ ನಾಡಿಗೆ ದೇಶಕ್ಕೆ ಗುರುತರ ಕೊಡುಗೆ ನೀಡಿದೆ. ಆದರೆ ಈಗ ಕರೋನವೈರಸ್ ಭೀಕರ ಮಾರಿಯ ಕಾರಣಕ್ಕೆ ಕಲಾವಿದರು ತಮ್ಮ ಕುತ್ತಿಗೆ, ಕಾಲುಗಳಿಗೆ, ಸರಪಳಿ ಕಟ್ಟಿಸಿಕೊಂಡು ಗೃಹ ಬಂಧಿಯಾಗಿದ್ದಾರೆ.

ಬೆಂಕಿಯ ಕುಲುಮೆಯಲ್ಲಿ ಬೆಂದು ಹೋಗುವ ಹೇಳಿಕೊಳ್ಳಲಾರದ ಸ್ವಾಭಿಮಾನಿಗಳು ಅವರು . ಇಂತಹ ವಿಷಮ ಪರಿಸ್ಥಿತಿಯಲ್ಲಿ ಅವರ ಕುಟುಂಬಗಳಿಗೆ ಆಹಾರ ಪೂರೈಕೆಯ ಜೊತೆಗೆ, ಒಂದಿಷ್ಟು ಹಣಕಾಸಿನ ನೆರವು ಬೇಕು ಎಂದು ಕೋರಿದ್ದಾರೆ.

ಕಲಾವಿದರ ಅಗತ್ಯ ಮಾಹಿತಿಯನ್ನು ಪಡೆದು, ದಿನವೊಂದಕ್ಕೆ ಕನಿಷ್ಠ 500ರೂಪಾಯಿಯ ಗರಿಷ್ಠ ಸರ್ಕಾರದ ವಿವೇಚನೆಗೆ ಸಂಬಂಧಿಸಿದ ಹಾಗೆ, “ಜೀವನಭತ್ಯೆ” ನೀಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದು ಅವರ ಕುಟುಂಬಕ್ಕೆ ಸಹಕಾರಿ ಆಗುವುದರ ಜೊತೆಗೆ ಮುಂದಿನ ಕಲಾಸೇವೆಗೆ ಮನೋಬಲ ದೊರಕಿಸಿ ಕೊಟ್ಟಂತಾಗುತ್ತದೆ. ಕೃಷಿಕರ ಜೀವನವನ್ನು ಸುಭದ್ರಗೊಳಿಸಲು ತಾವು ಮಾಡಿದ ನಿರಂತರ ಹೋರಾಟವನ್ನು ಸ್ಮರಿಸುತ್ತಾ, ಕಲೆಗಾಗಿ ದುಡಿಯುವವರ ಕೈಯನ್ನು ಬಲಪಡಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ