NEWSನಮ್ಮಜಿಲ್ಲೆನಮ್ಮರಾಜ್ಯ

ವಿಜಯಪುರ: ಬಸ್‌ನಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಚಾಲಕ, ನಿರ್ವಾಹಕರು

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ 40 ಸಾವಿರ ರೂ.ಗೂ ಹೆಚ್ಚಿನ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಮರಳಿ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.

ನಗರ ಸಾರಿಗೆ ಅನುಸೂಚಿ ಸಂಖ್ಯೆ 57 ರಲ್ಲಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮುದ್ದೆಬಿಹಾಳದ ಮಹಿಳೆ ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಎಂಬುವರು ಭಾನುವಾರ ಮಧ್ಯಾಹ್ನ ಪ್ರಯಾಣ ಬೆಳೆಸಿದ್ದಾರೆ ಆದರೆ ಇಳಿಯುವಾಗ ತಾವು ತಂದಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳಿದ್ದ ಪರ್ಸ್‌ ಮರೆತು ಬಿಟ್ಟು ಹೋಗಿದ್ದರು.

ಸೀಟ್‌ನಲ್ಲಿ ಪರ್ಸ್‌ ಇರುವುದನ್ನು ಗಮನಿಸಿದ ನಿರ್ವಾಹಕ ಐ.ಎ. ಮನಿಯಾರ ಅವರು ಪರ್ಸ್‌ ತೆಗೆದುಕೊಂಡು ಚಾಲಕ ಎ. ಐ. ಅಮರಣವರ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಆ ಪರ್ಸ್‌ ಯಾರದಿರಬಹುದೆಂದು ಯೋಚಿಸಿ, ಪತ್ತೆ ಹಚ್ಚಲು ಮುಂದಾದರು.

ಆಗ ಪರ್ಸ್‌ ಓಪನ್‌ ಮಾಡಿ ನೋಡಿದಾಗ ಅದರಲ್ಲಿ ಬ್ಯಾಂಕ್‌ ಪಾಸ್‌ಪುಸ್ತಕ ಇತ್ತು. ಅದರಲ್ಲಿ ಒಂದು ಪೋನ್‌ ನಂಬರ್‌ ಬರೆಯಲಾಗಿತ್ತು. ಆ ಫೋನ್‌ ನಂಬರ್‌ಗೆ ಕರೆ ಮಾಡಿ ವಿಷಯ ತಿಳಿಸಿ ಬರಹೇಳಿದ್ದಾರೆ. ಬಳಿಕ ಆ ಪರ್ಸ್‌ಅನ್ನು ವಿಭಾಗದ ಭದ್ರತಾ ಅಧಿಕಾರಿ ಸಂಜೀವ್‌ ಕುಮಾರ್‌ ಅವರ ಸಮ್ಮುಖದಲ್ಲಿ ವಾರಸುದಾರ ಮಹಿಳೆ ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಅವರಿಗೆ ಹಸ್ತಂತರಿಸಿದರು.

ಶಾಂತಾಬಾಯಿ ಲಕ್ಷ್ಮಣ ಉಳ್ಳಾಗಡ್ಡಿ ಈ ವೇಳೆ ಮಾತನಾಡಿ, ನಾನು 40 ಸಾವಿರ ರೂಪಾಯಿಗೂ ಹೆಚ್ಚು ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಎಲ್ಲಿ ಕಳೆದುಕೊಂಡೆ ಎಂಬ ಚಿಂತೆಯಲ್ಲಿದ್ದೆ ಆ ವೇಳೆ ನನಗೆ ಫೋನ್‌ ಬಂದಿದ್ದು ನೀವು ಕಳೆದುಕೊಂಡಿರುವ ಬಂಗಾರವಿದ್ದ ಪರ್ಸ್‌ ಸಿಕ್ಕಿದೆ ತೆಗೆದುಕೊಂಡು ಹೋಗಬನ್ನಿ ಎಂದು ಹೇಳಿದರು.

ಆಗ ನನಗೆ ಹೋದ ಜೀವ ಮತ್ತೆ ಬಂದಂತಾಯಿತು. ನಾವು ಕಷ್ಟಪಟ್ಟು ದುಡಿದು ತೆಗೆದುಕೊಂಡಿದ್ದ ವಸ್ತುಗಳು ಕಳೆದುಕೊಂಡೆ ಎಂದು ದುಃಖಿತಳಾಗಿದ್ದೆ. ಆದರೆ ಅದನ್ನು ಮರಳಿ ನಮಗೆ ಒಪ್ಪಿಸಿದ ಚಾಲಕ ಎ.ಐ. ಅಮರಣವರ ಹಾಗೂ ನಿರ್ವಾಹಕ ಐ.ಎ. ಮನಿಯಾರ ಅಣ್ಣಾವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇನ್ನು ಚಾಲನಾ ಸಿಬ್ಬಂದಿಗೆ ಘಟಕದ ಪರವಾಗಿ ವಿಭಾಗದ ಭದ್ರತಾ ಅಧಿಕಾರಿ ಸಂಜೀವ್‌ ಕುಮಾರ್‌ ಸೇರಿ ಅಧಿಕಾರಿಗಳು ಮತ್ತು ನೌಕರರು ಅಭಿನಂದನೆ ಸಲ್ಲಿಸಿದರೆ, ಇತ್ತ ಚಾಲಕ ಹಾಗೂ ನಿರ್ವಾಹಕರ ಕಾರ್ಯಕ್ಕೆ ಸ್ಥಳೀಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ