NEWSನಮ್ಮರಾಜ್ಯ

ಶೇ.45ರಷ್ಟು ವೇತನ ಹೆಚ್ಚಳ ಮಾಡಿಸಿ ಎಲ್ಲಿ ಇಟ್ಟುಕೊಳ್ಳುತ್ತೀರಿ ಎಂದವನ ಹೆಡೆಮುರಿಕಟ್ಟಿದ ಸಾರಿಗೆ ನೌಕರರು

ಓಟ್‌ ಮಾಡುವ ಮೂಲಕ ನಿನ್ನ ಸ್ಥಾನ ಇದೇ ಎಂದು ತೋರಿಸಿ ವಕೀಲರಿಗೆ ಜೈ ಎಂದರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರ ಪರವಾಗಿ ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂಬ ಬಗ್ಗೆ ಹೈ ಕೋರ್ಟ್‌ನಲ್ಲಿ ಅರ್ಜಿ ಹಾಕಿರುವ ವಕೀಲರ ನಡೆಯನ್ನು ಟೀಕಿಸಿರುವ ವ್ಯಕ್ತಿಯ ವಿರುದ್ಧ ನೌಕರರು A ಎಂದು ಕಮೆಂಟ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು.

ವಕೀಲರು ನಮ್ಮನ್ನು ಬೆಂಬಲಿಸಲು ನೀವು ಸಿದ್ಧರಿದ್ದರೆ A ಎಂದು ಮತ್ತು ಟೀಕಿಸಿರುವ ವ್ಯಕ್ತಿಯನ್ನು ಬೆಂಬಲಿಸುತ್ತೇವೆ ಎಂದಾದರೆ B ಎಂದು ಕಮೆಂಟ್‌ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.

ವಕೀಲರ ಮನವಿಗೆ 6 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿದ್ದು, ಅದರಲ್ಲಿ ಕೇವಲ 57ಮಂದಿಯಷ್ಟೇ B ಎಂದು ಕಮೆಂಟ್‌ ಮಾಡಿದ್ದರೆ ಉಳಿದ 5943 ಮಂದಿ A ಎಂದು ಕಮೆಂಟ್‌ ಮಾಡುವ ಮೂಲಕ ನೌಕರರ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಗೆ ಮುಖಭಂಗವಾಗುವಂತೆ ಮಾಡಿದ್ದಾರೆ.

 ಎಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ವ್ಯಂಗ್ಯ: ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಅವರು ಏನು ಕಳೆದ ಏಳೂವರೆ ವರ್ಷದಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡದಿರುವ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, (ಅದು ನಾಳೆ ಮಾ.21ರಂದು ವಿಚಾರಣೆಗೆ ಬರಲಿದೆ) ಆ ಅರ್ಜಿಯಲ್ಲಿ ನೌಕರರ ಮೂಲ ವೇತನದ ಜತೆಗೆ ಬಿಡಿಎ ಮರ್ಜ್‌ ಮಾಡಿ ಶೇ.45ರಷ್ಟು ವೇತನ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಶೇ.45ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ವಕೀಲ ಶಿವರಾಜು ಅವರು ಕೋರ್ಟ್‌ನಲ್ಲಿ ಅರ್ಜಿಸಲ್ಲಿಸಿರುವುದಕ್ಕೆ ಬೆಂಬಲ ನೀಡುವ ಬದಲಿಗೆ ನೌಕರರ ಪರ ಎಂದು ಹೇಳಿಕೊಳ್ಳುವ ಸಂಘಟನೆಯೊಂದರ ಹಿರಿಯ ಮುಖಂಡ, ಶೇ.45ರಷ್ಟು ವೇತನ ಹೆಚ್ಚಳ ಮಾಡಿದರೆ ಅದನ್ನು ವಕೀಲರು ಎಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದ.

ಇದರಿಂದ ಅಸಮಾಧಾನಗೊಂಡ ವಕೀಲ ಶಿವರಾಜು ಅವರು ಇದನ್ನು ಸಾಮಾಜಿಕ ತಾಲತಾಣದಲ್ಲಿ ಪ್ರಶ್ನಿಸುವ ಮೂಲಕ, ನೌಕರರಿಗೆ ಈ ವಿಷಯದ ಬಗ್ಗೆ ಸಮಗ್ರವಾಗಿ ತಿಳಿಸಿ, ಆ ನಿಮ್ಮ ವ್ಯಕ್ತಿ ನೀಡಿರುವ ಹೇಳಿಕೆಯನ್ನು ಬೆಂಬಲಿಸುತ್ತೀರಾ ಎಂದು ಕೇಳಿದ್ದರು. ಅದನ್ನು ಶೇ.97ರಷ್ಟು ನೌಕರರು ಒಪ್ಪುವುದಿಲ್ಲ ಎಂದು A ಕಮೆಂಟ್‌ ಮಾಡುವ ಮೂಲಕ ಹೇಳಿಕೆ ನೀಡಿದ್ದಾರೆ.

 ಕೀಳಾಗಿ ನೋಡುತ್ತಾ ದರ್ಪ ಮೆರೆಯುತ್ತಿರುವ : ಇನ್ನು ಕಳೆದ 40 ವರ್ಷದಿಂದಲೂ ನೌಕರರು ಮತ್ತು ಸಂಸ್ಥೆಯ ಅಧಿಕಾರಿಗಳನ್ನು ಕೀಳಾಗಿ ನೋಡುತ್ತಾ ದರ್ಪ ಮೆರೆಯುತ್ತಿರುವ ಅಲ್ಲದೆ, ಸರ್ಕಾರ ವೇತನ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಉತ್ತರನ ಪೌರುಷ ತೋರಿಸಿ ನಂತರ ಸುಮ್ಮನಾಗುವ ಮೂಲಕ ನೌಕರರಿಗೆ ಸರಿಯಾದ ವೇತನ ಇತರ ಸವಲತ್ತುಗಳನ್ನು ಕೊಡಿಸುವಲ್ಲಿ ಸೋತಿರುವ ಈತ ನೌಕರರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ವ್ಯಕ್ತಿ ಎಂದು ಕಿಡಿಕಾರಿದ್ದಾರೆ.

ಅಲ್ಲದೆ, 1/1/2020ರಿಂದ ಜಾರಿಗೆ ಬರುವಂತೆ ಶೇ.15ರಷ್ಟು ವೇತನ ಹೆಚ್ಚಳ ಮಾಡಿಸಿರುವುದರಿಂದ ಯಾರಿಗೆ ಲಾಭವಿದೆ. ನೌಕರರಿಗೆ ಇದರಿಂದ ಅನುಕೂಲ ವಾಗುತ್ತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಕೀಲರು, ನಿಮ್ಮ ಬಣ್ಣವನ್ನೆಲ್ಲ ಕಾನೂನಾತ್ಮಕವಾಗಿಯೇ ಬಯಲು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ವೇತನ ಹೆಚ್ಚಳ ಸಂಬಂಧ ಸಭೆ ಕರೆದೇ ಇಲ್ಲ:  ಇನ್ನು ನೌಕರರನ್ನಾಗಲಿ ಇಲ್ಲ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನಾಗಲಿ ವೇತನ ಹೆಚ್ಚಳ ಸಂಬಂಧ ಸಭೆ ಕರೆದು ಅವರ ಅನಿಸಿಕೆ, ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಸರ್ಕಾರ ಶೇ.25ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ತೀರ್ಮಾನಿಸಿ ಕೊನೆಗೆ ಶೇ.15ರಷ್ಟು ಮಾಡಿಸಿಕೊಂಡು ಬಂದ ಇಂಥ ಅವಿವೇಕಿಯಿಂದ ನಾವು ಉದ್ದಾರ ಅದಂತೆಯೇ ಎಂದು ನೌಕರರು ಮತ್ತು ಅಧಿಕಾರಿಗಳು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ನಡುವೆ ಇದೇ ಮಾ.21ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ನೌಕರರಾರು ಈತನ ಮಾತಿಗೆ ಬೆಲೆಕೊಡುವುದಿಲ್ಲ ಎಂದು ತಿಳಿದ ಕೂಡಲೇ ಮಾಜಿ ಐಪಿಎಸ್‌ ಅಧಿಕಾರಿಯ ಮೂಲಕ ಸಾರಿಗೆ ಎಂಡಿ ಅವರನ್ನು ತರಾತುರಿಯಲ್ಲಿ ಭೇಟಿ ಮಾಡಿ ನೀವು ಕೊಟ್ಟಿದ್ದೆ ಸಾಕು ಎಂದು ಕೈ ಮುಗಿದು ಹೊರಬಂದ ಇವನು ನೌಕರರ ಪಾಲಿನ ಉದ್ಧಾರಕನೆ ಎಂದು ಕಿಡಿಕಾರಿದ್ದಾರೆ.

ಇಷ್ಟಾದರೂ ಮಾನ ಮರ್ಯಾದೆ ಇಲ್ಲದವನಂತೆ ನಾವು ಏನು ಹೇಳದಿದ್ದರು ನಮ್ಮ ವೇತನ ಹೆಚ್ಚಳ ಮಾಡಿಸುವುದಕ್ಕೆ ಮುಂದಾಗಿ, ಅತಂತ್ರ ಮಾಡಿರುವ ಇವನನ್ನು ನಾವು ಕ್ಷೆಮಿಸಲು ಸಾಧ್ಯವೇ ಇಲ್ಲ ಎಂದು ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ ನೌಕರರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು