NEWSನಮ್ಮರಾಜ್ಯಸಂಸ್ಕೃತಿ

ಸಿದ್ದೇಶ್ವರ ಶ್ರೀಗಳಿಗೆ ಮನಃಪೂರ್ವಕವಾಗಿ ನಮಿಸುತ್ತ…

ವಿಜಯಪಥ ಸಮಗ್ರ ಸುದ್ದಿ

ಸಾವಿರ ಲಕ್ಷ ಸಂತರಲ್ಲಿ ದಿವ್ಯ ಬೆಳಕು ಮಿಂಚುತಿತ್ತು ವಿಜಯಪುರದ ಆಶ್ರಮದಲಿ ಜ್ಞಾನ ಮೊಳಕೆ ಒಡೆಯುತಿತ್ತು…..

ಜಾತಿ ಮಥ ಪಂಥ ಮರೆತ ದಿವ್ಯ ಜ್ಯೋತಿ ಬೆಳಕದು..
ಕತ್ತಲಿಂದ ಬೆಳಕಿನೆಡೆಗೆ ಕರೆದೊಯ್ಯುವ ಹೊಳಪದು….

ತತ್ವಶಾಸ್ತ್ರ ಕಲಿತ
ಲೋಕಜ್ಞಾನಿ ಲೋಕ ತಿದ್ದಿ ಹೊರಟರು
ಬರಿ ತತ್ವಗಳನ್ನೆ ಸಾರಲಿಲ್ಲ ನುಡಿದಂತೆ ನಡೆದರು…

ಬಿಳಿಯ ಅಂಗಿ ಬಿಳಿಯ ಲುಂಗಿ ಸಾಧಾರಣ ಚಪ್ಪಲಿ ಕಣ್ಣಿಗೊಂದು ಚಾಳಿಸು ಇಷ್ಟೇ ಅವರು ಮಾಡಿದ ಆಸ್ತಿಯು… ನೋಡಿದೊಡನೆ ಮೂಡುತಿತ್ತು ಎಲ್ಲರಲ್ಲಿ ಭಕ್ತಿಯು….

ಅವರು ಬರುವ ಸುದ್ದಿ ಕೇಳಿ ಅಲ್ಲಿ ನೆರೆಯುತಿತ್ತು ಜನರ ದಂಡು ಕುಣಿಯುತಿತ್ತು
ಕಲ್ಲು ಮುಳ್ಳು ಬೆಟ್ಟ ಗುಡ್ಡ ಮಣ್ಣುಗಳಿಗೂ
ಜೀವ ಬಂದು ಪುಟಿವ ಚೆಂಡು…

ಸುದ್ದಿಯಾಗ ಬಯಸಲಿಲ್ಲ ಸದ್ದು ಮಾಡಿ ಹೊರಡಲಿಲ್ಲ ಪದ್ಮಶ್ರೀಯನು ಗೌರವದಿ ಮರಳಿ ಕೊಟ್ಟ ಸಂತರವರು..

ನಸು‌ ನಕ್ಕು ನುಡಿದರು
ಬೇಡ ನನಗೆ ಸನ್ಮಾನ
ಹೂವು ಹಾರ ಶಾಲುಗಳು.
ಬಯಸಲಿಲ್ಲ ಯಾರಿಂದಲೂ ಏನನ್ನು ಇರುವಾಗ
ಹಾಸಿಗೆಯ ಹಿಡಿದರುನೂ ನಿರಾಕರಿಸಿ ಚಿಕಿತ್ಸೆಯನ್ನು ಉಳಿಯಲಿಲ್ಲ ಮತ್ತ್ಯಾರ ಹಂಗಿನಲ್ಲೂ ದೇವರು….

ಸರ್ವ ಜಾತಿ ಧರ್ಮಗಳಿಗೆ ಜ್ಞಾನ ಬಯಸಿ ಬಂದವರಿಗೆ ಮುಕ್ತ ಅವರ ಆಶ್ರಮ
ಇದ್ದಷ್ಟು ದಿನವೇ ಬದುಕಿದರೂ ಸಾರ್ಥಕವಾಯಿತವರ ಬದುಕು. ಹುಡುಕಲಿಲ್ಲ ಇರುವಾಗ ಅದಕು ಇದಕು ಎದಕು

ಅವರು ಇನ್ನು ಇಲ್ಲ ಎಂದ ಕ್ಷಣ
ನೆರೆಯಿತಿಂದು ಭಕ್ತಗಣ
ಹರಿದು ಬಂದ ಗಣ್ಯರು
ತೋಯುತಿಹವು ಕಣ್ಣೆಲ್ಲ ಬಿಕ್ಕುತ್ತಿರುವ ಧ್ವನಿಗಳು..

ಬರಿ ಸಂತರಷ್ಟೇ ಅಲ್ಲ ಅವರು ಜ್ಞಾನ ಕೊಟ್ಟ ಶ್ರೀಗಳು
ಜೇಬಿರದ ಸಂತರಲ್ಲ
ನಡೆದಾಡುವ ದೇವರು
ನಡೆದಾಡುವ ದೇವರು….

l ದೀಪಕ ಶಿಂಧೇ ಚಿಕ್ಕೋಡಿ – 9482766018

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು