NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆಯ ಕೆಲ ನೀಚ ಸಂಘಟನೆಗಳಿಂದ ಇಂದು ಬೀದಿಗೆ ಬಿದ್ದಿರುವ ನೌಕರರು.. ಎಚ್ಚೆತ್ತುಕೊಳ್ಳದಿದ್ದರೆ …!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರನ್ನು ಬಕ್ರಾಗಳಾಗಿ ಮಾಡಿಕೊಂಡಿರುವ ಕೆಲ ಸಂಘಟನೆಗಳು ನೌಕರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಅದಕ್ಕೆ ನಿಗಮಗಳ ಕೆಲ ಭ್ರಷ್ಟ ಅಧಿಕಾರಿಗಳು ಕೂಡ ಸಾಥ್‌ ನೀಡುತ್ತಿದ್ದಾರೆ.

ಹೌದು! ಈ ಹಿಂದೆ ಎಸ್‌ಎಸ್‌ಎಲ್‌ಸಿಯೂ ಇಲ್ಲದ ಅಂದರೆ ಕೇವಲ ಹೆಬ್ಬೆಟ್ಟಿನ ಮಂದಿ (ಓದಲು ಬರೆಯಲು ಬರದಿದ್ದರು ತಮ್ಮ ಹೆಸರು ಬರೆಯಲು ಕಲಿತ ಅಥವಾ 6-7ನೇ ತರಗತಿ ಓದಿಕೊಂಡಿದ್ದವರು) ಚಾಲಕರಾಗಿ ನಿಗಮಗಳಲ್ಲಿ ಸೇರಿಕೊಂಡಿದ್ದರು. ಹೀಗಾಗಿ ಅವರಿಗೆ ನಿಮ್ಮ ಪರ ಇದ್ದೇವೆ ಎಂದು ಹೇಳಿಕೊಂಡು ಅವರಿಂದ ತಿಂಗಳು ತಿಂಗಳು ಸಂಘಟನೆಯನ್ನು ಬೆಳೆಸಬೇಕಾದರೆ ಇಂತಿಷ್ಟು ನೀವು ಕೊಡಲೇ ಬೇಕು ಎಂದು ವೇತನದಲ್ಲೇ ಕಡಿತವಾಗುವಂತೆ ಮಾಡಿಕೊಂಡಿದ್ದರು (ಈಗ ಅದನ್ನು ಕೆಲವರು ಹಿಂಪಡೆದಿದ್ದಾರೆ).

ಆದರೆ, ನೌಕರರಿಗೆ ಸೌಲಭ್ಯ ಒದಗಿಸಿಕೊಡಬೇಕಾದ ಈ ಸಂಘಟನೆಗಳು ನೌಕರರನ್ನೇ ಸುಲಿಗೆ ಮಾಡುವ ಜತೆಗೆ ಕೆಲ ಭಂಡ, ಭ್ರಷ್ಟ ಅಧಿಕಾರಿಗಳ ಜತೆ ಶಾಮೀಲಾಗಿ ನೌಕರರಿಗೆ ವಂಚಿಸಿಕೊಂಡು ಈಗಲೂ ಬರುತ್ತಿದ್ದಾರೆ. ಅಂದರೆ ನೌಕರರಿಗೆ ಒಳ್ಳೆ ವೇತನ, ನಿವೃತ್ತರಾದವರೆಗೆ ಒಳ್ಳೆ ಪಿಂಚಣಿ ಕೊಡಿಸುವ ಬದಲು ತಮ್ಮ ಜೇಬು ತುಂಬಿಸಿಕೊಂಡು ವಂಚಿಸಿದ್ದಾರೆ. ಇದನ್ನು ಬಿಡಿಸಿ ಹೇಳಬೇಕಿಲ್ಲ. ಕಾರಣ ನಿವೃತ್ತ ನೌಕರರು ಮತ್ತು ಹಾಲಿ ದುಡಿಯುತ್ತಿರುವ ನೌಕರರ ಸ್ಥಿತಿ ನೋಡಿದರೆ ತಿಳಿಯುತ್ತದೆ.

ಇನ್ನು ಇಷ್ಟೆಲ್ಲ ನೌಕರರಿಗೆ ಉಂಡೆ ನಾಮ ಹಾಕಿಯೂ ನಾವು ಅವರಿಗೆ ಒಳ್ಳೆಯದನ್ನೇ ಮಾಡುತ್ತಿದ್ದೇವೆ ಎಂಬ ಹೇಳಿಕೆ, ಜತೆಗೆ ನಾವು ಅನುಕೂಲ ಮಾಡಿಕೊಡಬೇಕು ಎಂದೇ ಹೋರಾಟ ಮಾಡಿದ್ದೆವು ಆದರೆ ಸರ್ಕಾರ ನಮ್ಮ ಹೋರಾಟವನ್ನು ಕಡೆಗಣಿಸಿತು ಎಂದು ನಾಚಿಗೆ ಬಿಟ್ಟು ಹೇಳಿಕೆ ನೀಡುತ್ತಿದ್ದಾರೆ.

ಅಂದರೆ, ಇವರಿಗೆ ನೌಕರರ ಬಗೆಗಿನ ಕಾಳಜಿಗಿಂತ ತಮ್ಮ ಜೇಬು ತುಂಬಿಸಿಕೊಳ್ಳುವುದೇ ಮುಖ್ಯ ಎಂಬಂತಾಯಿತು. ಹೀಗಾದರೆ ಏಕೆ ತಿಂಗಳಿಗೆ ಇಂತಿಷ್ಟು ಎಂದು ಸಂಘಟನೆಗಳನ್ನು ಬೆಳೆಸಲು ದೇಣಿಗೆ ನೀಡಬೇಕು. ಇವರು ನೌಕರರ ಹಿತ ಕಾಯಲು ನಾಲಾಯಕ್‌ ಎಂದಮೇಲೆ ಇವರಿಂದ ಮೂರು ಕಾಸಿನ ಪ್ರಯೋಜನವೂ ನೌಕರರಿಗೆ ಇಲ್ಲ ಎಂದ ಮೇಲೆ ಇವರ ಹಿಂದೆ ಏಕೆ ಹೋಗಬೇಕು?

ಇನ್ನು ಈ ನಾಲಾಯಕ್‌ ಕೆಲ ಸಂಘಟನೆಳು ಮತ್ತು ಅವುಗಳು ಪದಾಧಿಕಾರಿಗಳು ದಾರಿ ತಪ್ಪಿಸುವ ಹೇಳಿಕೆ ನೀಡಿ, ಮಾಧ್ಯಮಗಳ ಕ್ಯಾಮರಾ ಮುಂದೆ ಮೊಸಳೆ ಕಣ್ಣೀರು ಸುರಿಸಿ ತಮ್ಮ ಜೇಬು ತುಂಬಿಸಿಕೊಂಡು ಸರ್ಕಾರ ಮತ್ತು ನಿಗಮಗಳ ಕೆಲ ಭ್ರಷ್ಟ ಅಧಿಕಾರಿಗಳ ಜತೆ ಕೈ ಜೋಡಿಸಿ ನೌಕರರು ಬೀದಿಗೆ ಬೀಳುವಂತೆ ಮಾಡಿರುವ ಇಂಥ ನೀಚ ಸಂಘಟನೆಗಳು ಬೇಕೆ?

ಹೀಗಾಗಿ ಈಗಲಾದರೂ ಇವುಗಳನ್ನು ದೂರವಿಟ್ಟು ನಿಮ್ಮ ಬೇಡಿಕೆಗಳನ್ನು ಈಡೇರಿಕೊಳ್ಳುವತ್ತ ಮನಸ್ಸು ಮಾಡಿ. ಇಲ್ಲವೆಂದರೆ ನೀವು ಈ ಸಂಘಟನೆಗಳನ್ನು ನಂಬಿಕೊಂಡರೆ ಇನ್ನಷ್ಟು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡಂತೆಯೇ…

.………..ಮುಂದುವರಿಯುವುದು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ