NEWSನಮ್ಮಜಿಲ್ಲೆವಿಡಿಯೋ

ಸಾರಿಗೆ ನೌಕರರಿಗೆ ಡಿಪೋಗಳಲ್ಲಿ ಹೆಚ್ಚಿದ ಕಿರುಕುಳ: ನೊಂದ ನೌಕರರಿಂದ ಇಂದು ಕೆಕೆಆರ್‌ಟಿಸಿ ಎಂಡಿಗೆ ರಾಜೀನಾಮೆ

ಔರಾದ ಘಟಕದಲ್ಲಿ ತಪ್ಪಿದ ನಿಯಂತ್ರಣ l ಭ್ರಷ್ಟಾಚಾರ ಹೆಚ್ಚಳಕ್ಕೆ ಬೆಸತ್ತು ಕೆಲಸಕ್ಕೆ ರಾಜೀನಾಮೆ ಕೊಟ್ಟ ನೌಕರ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೀದರ್‌ ವಿಭಾಗದ ಔರಾದ ಘಟಕದಲ್ಲಿ ಘಟಕ ವ್ಯವಸ್ಥಾಪಕ ಮತ್ತು ಎಟಿಎಸ್‌ ಕಿರುಕುಳ ನೀಡುತ್ತಿರುವುದರಿಂದ ಮನನೊಂದ ಚಾಲಕ ಕಂ ನಿರ್ವಾಹಕರೊಬ್ಬರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಔರಾದ ಘಟಕದ ವ್ಯವಸ್ಥಾಪಕ ನಯೀಮ್ ಮತ್ತು ಸಂಚಾರ ಶಾಖೆ ಸಿಬ್ಬಂದಿ ಸಂಚಾರಿ ನಿಯಂತ್ರಕ ಸೂರ್ಯಕಾಂತ ಅವರು ಕರ್ತವ್ಯಕ್ಕೆ ನಿಯೋಜನೆ ಮಾಡುವ ವಿಷಯದಲ್ಲಿ ದುರಾಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಚಾಕಂನಿ (1317) ಪ್ರಕಾಶ ಎಂಬುವರು ವ್ಯವಸ್ಥಾಪಕ ನಿರ್ದೇಶಕರಿಗೆ ರಾಜೀನಾಮೆ ಪತ್ರವನ್ನು ಇಂದು (ಸೆ.2) ಸಲ್ಲಿಸಿದ್ದಾರೆ.

ಚಾಕಂನಿ ಪ್ರಕಾಶ್‌ ಅವರನ್ನು ಘಟಕದ ಅಧಿಕಾರಿ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಈ ಚಾಲಕನಿಗೆ ಸರಿಯಾಗಿ ಕರ್ತವ್ಯಕ್ಕೆ ನಿಯೋಜನೆ ಮಾಡದೆ ಅತ್ಯಂತ ಕೆಟ್ಟ ಪದಗಳಿಂದ ಬೈಯ್ದಿದ್ದಾರೆ.

ಮೊನ್ನೆ ತಾನೆ ಅಲ್ಲಿಯ ಡ್ಯೂಟಿ ಕೊಡುವ ಅಧಿಕಾರಿ ಚಾಲನಾ ಸಿಬ್ಬಂದಿಗೆ ಅವಾಚ್ಯ ಪದಗಳಲ್ಲಿ ಬೈದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ಹರಿದಾಡಿದೆ. ಈಗ ಕಾರ್ಮಿಕನ ಈ ನಡೆ ಔರಾದ್‌ ಘಟಕದಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದನ್ನು ಸೂಚಿಸುತ್ತಿದೆ. ಅಧಿಕಾರಿಗಳು ಏಕೆ ಈರೀತಿ ತಾಳ್ಮೆ ಕಳೆದುಕೊಂಡು ನೌಕರರನ್ನು ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬುವುದು ಇನ್ನೂ ತಿಳಿಯದಾಗಿದೆ.

ಅದೇ ರೀತಿ ರಾಮನಗರ ಜಿಲ್ಲೆಯ ಚನ್ನಪಟ್ಟದ ಡಿಪೋ ಬಸ್‌ ಎರಡು ಬಾರಿ ಕೆಟ್ಟುಹೋಗಿದೆ (ಬಿಡಿ) ಈ ವೇಳೆ ನಿರ್ವಾಹಕ ಘಟಕ ವ್ಯವಸ್ಥಾಪಕರಿಗೆ (ಡಿಎಂ) ಫೋನ್‌  ಕರೆ ಮಾಡಿದರೆ  ಅವರು ಅವಾಚ್ಯವಾಗಿ ಬೈದು ಡಿಪೋಗೆ ಬಾ ಎಂದು ಹೇಳುತ್ತಿರುವ ಆಡಿಯೋ ಕೂಡ ತುಂಬಾ ಸದ್ದು ಮಾಡಿತು. ಆದರೆ ಈವರೆಗೂ ಆ ಅಧಿಕಾರಿಯ ವಿರುದ್ಧವೂ ಯಾವುದೇ ಕ್ರಮ ಜರುಗಿಸಿಲ್ಲ.

ದಯಾಮರಣ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ: ನಿತ್ಯ ಇದೇ ರೀತಿ ಡಿಪೋಗಳಲ್ಲಿ ನೌಕರರಿಗೆ ಕಿರುಕುಳ ಹೆಚ್ಚಾಗುತ್ತಿದ್ದರೆ ಎಲ್ಲ ನೌಕರರು ಡಿಪೋಗಳಲ್ಲೇ ಕುಟುಂಬ ಸಮೇತರಾಗಿ  ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ವಜಾಗೊಂಡಿರುವ ಎಲ್ಲ ನೌಕರರು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದು, ಎಲ್ಲ ನೌಕರರ ಸಹಿ ಪಡೆಯುವ ನಿಟ್ಟಿನಲ್ಲಿ ಸದ್ದಿಲ್ಲದೆ ಅಭಿಯಾನ ಆರಂಭಿಸಿದ್ದಾರೆ.

ಡಿಪೋಗಳಲ್ಲಿ ಅನಾಹುತಗಳು ಅಂದರೆ ನೌಕರರ ಕುಟುಂಬಗಳು ಸಾಮೂಹಿಕವಾಗಿ ಜೀವ ಕಳೆದುಕೊಳ್ಳಲು ಮುಂದಾಗುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲ ಉದಾಸೀನತೆ ತೋರಿದರೆ ಮುಂದೆ ನಡೆಯುವ ಅನಾಹುತಗಳ ಹೊಣೆಯನ್ನು ನೀವೆ ಹೊರಬೇಕಾಗುತ್ತದೆ ಎಂದು ಕೂಡ ನೌಕರರು ಎಚ್ಚರಿಕೆ ನೀಡಿದ್ದಾರೆ.

ಹೌದು ! ಸಾರಿಗೆ ನೌಕರರು ಪ್ರಮುಖವಾಗಿ ಡಿಪೋಗಳಲ್ಲಿ ಕೊಡುತ್ತಿರುವ ಕಿರುಕುಳ ತಪ್ಪಿಸಬೇಕು ಮತ್ತು ವೇತನ ಹೆಚ್ಚಳ ಮಾಡಬೇಕೆಂದು ಕಳೆದ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದ್ದರು. ಆದರೆ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಲಿಲ್ಲ, ಜತೆಗೆ ಕೊರೊನಾದಿಂದ ಅವರ ಮುಷ್ಕರ ವಿಫಲವಾಯಿತು.

ತದ ನಂತದ ಹೈ ಕೋರ್ಟ್‌ ಅದೇಶದ ಮೇರೆಗೆ ಎಲ್ಲ ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದರು. ಆದರೆ ಇತ್ತ ಸಾರಿಗೆ ಅಧಿಕಾರಿಗಳು ಮುಷ್ಕರದ ವೇಳೆ 8 ಸಾವಿರಕ್ಕೂ ಹೆಚ್ಚು ನೌಕರರ ವಿರುದ್ಧ ಏಕಾಏಕಿ ಯಾವುದೇ ಕಾರಣವಿಲ್ಲದಿದ್ದರೂ ಶಿಸ್ತು ಕ್ರಮದ ಹೆಸರಿನಲ್ಲಿ ವಜಾ, ಅಮಾನತು, ವರ್ಗಾವಣೆಯಂತಹ ಶಿಕ್ಷೆ ಕೊಟ್ಟಿದ್ದಾರೆ.

ಇದು ಸಾಲದು ಎಂಬಂತೆ ಮುಷ್ಕರದ ಬಳಿಕ ಕರ್ತವ್ಯಕ್ಕೆ ಹಾಜರಾಗಿರುವ ಹಲವು ನೌಕರರಿಗೆ ಸರಿಯಾಗಿ ಡ್ಯೂಟಿ ಕೊಡುತ್ತಿಲ್ಲ. ಜತೆಗೆ ತಮಗೆ ಇಷ್ಟ ಬಂದಂತೆ ಕೆಲ ಡಿಪೋಗಳ ವ್ಯವಸ್ಥಾಪಕರು ನಡೆದುಕೊಳ್ಳುತ್ತಿದ್ದು, ನೌಕರರಿಗೆ ಇನ್ನಿಲ್ಲದ ಕಿರುಕುಳಗಳನ್ನು ನೀಡುತ್ತದ್ದಾರೆ. ಇಷ್ಟಾದರೂ ಸಾರಿಗೆ ಸಚಿವರಾಗಲಿ ಅಥವಾ ಉನ್ನತ ಅಧಿಕಾರಿಗಳಾಗಲಿ ನೌಕರರ ಸಮಸ್ಯೆ ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇದರಿಂದ ಬಹುತೇಕ ಡಿಪೋಗಳಲ್ಲಿ ನೌಕರರಿಗೆ ಏ.6ರ ಹಿಂದೆ ಇದ್ದ ಕಿರುಕುಳಕ್ಕಿಂತಲೂ ಈಗ ಹೆಚ್ಚಾಗಿದ್ದು, ನೌಕರರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕೆಲ ಡಿಪೋಗಳಲ್ಲಿ ಕೊಡುತ್ತಿರುವ ಕಿರುಕುಳಕ್ಕೆ ನೌಕರರು ಮನನೊಂದು ತಮ್ಮ ವೃತ್ತಿಗೆ ರಾಜೀನಾಮೆ ಕೊಡುತ್ತಿದ್ದಾರೆ.

ಕೆಕೆಆರ್‌ಟಿಸಿ ಎಂಡಿಗೆ ರಾಜೀನಾಮೆ ನೀಡಿದ ಚಾಕಂನಿ.

 

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು