NEWSಕೃಷಿನಮ್ಮಜಿಲ್ಲೆ

54 ವಿತರಣಾ ನಾಲೆ ಕಾಮಗಾರಿ ಗುಣಮಟ್ಟ ಕಾಪಾಡಿ: ಇಂಜಿನಿಯರ್ ಆನಂದ್

ವಿಜಯಪಥ ಸಮಗ್ರ ಸುದ್ದಿ

ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ರೈತರ ಜೀವನಾಡಿಯಾಗಿರುವ ಹೇಮಾವತಿ ಜಲಾಶಯ ಯೋಜನೆಯ ನಂ.54 ವಿತರಣಾ ನಾಲೆಯ ಲೈನಿಂಗ್ ಮತ್ತು ಆಧುನಿಕರಣ ಕಾಮಗಾರಿಯು ಆರಂಭವಾಗಿದ್ದು, ಈ ಭಾಗದ ರೈತರ ಮೊಗದಲ್ಲಿ ಸಂತೋಷ ತಂದಿದೆ.

vijayapatha.in - ವಿಜಯಪಥ.ಇನ್‌ ನಿಮಗೆ ವಿಶ್ವಾಸನೀಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅನಿಸಿದರೆ ನಮಗೆ ಆರ್ಥಕವಾಗಿ ಬಲ ನೀಡಿ. ಇನ್ನಷ್ಟು ಸತ್ಯನಿಷ್ಠ ವರದಿಗಳನ್ನು ಮಾಡುವುದಕ್ಕೆ ಬೆಂಬಲ ನೀಡಿ.   ಕನಿಷ್ಠ 100 ರೂ. ಒಮ್ಮೆಗೆ ಹಾಕಿ. ನಮ್ಮನ್ನು ಪ್ರೋತ್ಸಾಹಿಸಿ. 

ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಡಾ.ನಾರಾಯಣಗೌಡ ಅವರು ಕಾವೇರಿ ನೀರಾವರಿ ನಿಗಮದಿಂದ 55 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ ಈ ಭಾಗದ ರೈತರ 40 ವರ್ಷಗಳ ಹೋರಾಟಕ್ಕೆ ಶಕ್ತಿ ತುಂಬಿ ಕಾಲುವೆಯಲ್ಲಿ ನೀರು ಸಾರಾಗವಾಗಿ ಹರಿದು ಕೊನೆಯ ಭಾಗದ ರೈತನ ಜಮೀನುಗಳಿಗೂ ನೀರು ಹರಿಯಬೇಕು ಎಂದು ಸಂಕಲ್ಪ ಮಾಡಿ ಭೂಮಿ ಪೂಜೆ ಮಾಡಿದ್ದರು.

ತಾಲೂಕಿನ ಪ್ರಥಮದರ್ಜೆ ಗುತ್ತಿಗೆದಾರ ಪಿ.ಕೆ.ಜಯಕೃಷ್ಣೆಗೌಡ ಅವರ ಮಾಲೀಕತ್ವದ ಆರ್.ಕೆ.ಬಿ ಕನ್ಸ್ಟ್ರಕ್ಷನ್ ಕಂಪನಿಯು ಗುತ್ತಿಗೆಯನ್ನು ಪಡೆದುಕೊಂಡು ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಕಾಲುವೆಯ ಎರಡೂ ಬದಿಗಳಲ್ಲಿ ರಸ್ತೆ ನಿರ್ಮಿಸಿ ಪೂರಕವಾಗಿ ಕಾಲುವೆಯ ಆಧುನಿಕರಣ ಕಾಮಗಾರಿ ಮಾಡುತ್ತಿದ್ದಾರೆ.

ಆದರೆ ಕೆಲವರು 54ನೇ ವಿತರಣಾ ನಾಲೆಯ ಅಭಿವೃದ್ಧಿಗೆ ದುರುದ್ಧೇಶದಿಂದ ವಿನಾಕಾರಣ ತೊಂದರೆ ನೀಡಿ ನಾಲಾ ಲೈನಿಂಗ್ ಕೆಲಸಕ್ಕೆ ತೊಂದರೆ ನೀಡುತ್ತಿರುವುದನ್ನು ಖಂಡಿಸಿರುವ ನಾಲೆಯ ಅಚ್ಚುಕಟ್ಟು ಭಾಗದ ತೇಗನಹಳ್ಳಿ, ಅಣ್ಣೆಚಾಕನಹಳ್ಳಿ, ಕುಂದೂರು, ಕೋಮನಹಳ್ಳಿ, ಮಾಕವಳ್ಳಿ, ಹಿರಿಕಳಲೆ, ಲಿಂಗಾಪುರ, ಪುರ, ಗಾಂಧೀನಗರ, ಕಾಡುಮೆಣಸ, ಗಂಗನಹಳ್ಳಿ, ಹೆಗ್ಗಡಹಳ್ಳಿ, ಸಾಧುಗೋನಹಳ್ಳಿ ಗ್ರಾಮಗಳ ನೂರಾರು ರೈತರು ನಾಲಾ ಆಧುನಿಕರಣ ಕಾಮಗಾರಿ ನಡೆಯುತ್ತಿರುವ ತೇಗನಹಳ್ಳಿಯ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ವಿನಾಕಾರಣ ಕಾಲುವೆಯ ಲೈನಿಂಗ್ ಕೆಲಸಕ್ಕೆ ತೊಂದರೆ ನೀಡಿ ಅಡ್ಡಿಪಡಿಸಿದರೆ ಅಚ್ಚುಕಟ್ಟು ಭಾಗದ ಗ್ರಾಮಗಳ ರೈತರು ನಕಲಿ ಹೋರಾಟಗಾರರ ವಿರುದ್ಧ ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ನೀಡಿದರು.

ಕೋಮನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಮಂಜು ಮಾತನಾಡಿ ವಿತರಣಾ ನಾಲೆಯ ಅಭಿವೃದ್ಧಿಯಿಂದಾಗಿ ನೀರು ಹರಿಯದ ನಾಲೆಗಳಲ್ಲಿ ನೀರು ಹರಿಯಲಿದ್ದು ರೈತರು ನೆಮ್ಮದಿಯಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗಲಿದೆ. ಪ್ರಸ್ತುತ ಶೇ. 40ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು ಇನ್ನೂ ಶೇ.60 ರಷ್ಟು ಕಾಮಗಾರಿಯನ್ನು ಮಾಡಬೇಕಿದೆ.

ಕಾಮಗಾರಿಯ ಗುಣಮಟ್ಟದ ಬಗ್ಗೆ ಈ ಭಾಗದ ರೈತರಾದ ನಾವು ಹಾಗೂ ನೀರಾವರಿ ಇಲಾಖೆಯ ಎಂಜಿನಿಯರುಗಳು ಕಾಳಜಿಯಿಂದ ಎಚ್ಚರ ವಹಿಸುತ್ತೇವೆ. 40 ವರ್ಷಗಳ ನಂತರ ನಡೆಯುತ್ತಿರುವ ನಾಲಾ ಆಧುನಿಕರಣ ಕೆಲಸಕ್ಕೆ ಯಾರೂ ತೊಂದರೆ ನೀಡಬಾರದು, ಪ್ರತಿಭಟನೆ, ಹೋರಾಟ ರೈತರಾದ ನಮ್ಮ ಆಜನ್ಮ ಸಿದ್ಧ ಹಕ್ಕಾಗಿದೆ. ವಿನಾಕಾರಣ ತೊಂದರೆ ನೀಡಿದರೆ ರೈತರು ಸಹಿಸಲ್ಲ ಎಂದು ಮಂಜು ಎಚ್ಚರಿಕೆ ನೀಡಿದರು.

ಕಾಮಗಾರಿ ಗುಣಮಟ್ಟ ಕಾಪಾಡಿ ಇಂಜಿನಿಯರ್ ಆನಂದ್: ಹೇಮಾವತಿ ಜಲಾಶಯ ಯೋಜನೆ ಕೆ.ಆರ್.ಪೇಟೆ ವ್ಯಾಪ್ತಿಯ ನಂ.54 ವಿತರಣಾ ನಾಲೆಯ ಲೈನಿಂಗ್ ಕಾಮಗಾರಿಯು ಭರದಿಂದ ನಡೆದಿದ್ದು ಸದ್ಯ ಕಾಲುವೆಯಲ್ಲಿ ನೀರು ಹರಿಸುತ್ತಿರುವುದರಿಂದಾಗಿ ಕಾಮಗಾರಿಯ ಕೆಲಸ ನಿಂತಿದೆ. ಮಳೆಯಿಂದ ಹಾನಿಯಾಗಿರುವ ಕಾಲುವೆಯ ಭಾಗದ ಕೆಲಸವನ್ನು ಮತ್ತೆ ಹೊಸದಾಗಿ ಮಾಡಿ, ಕಾಮಗಾರಿಯಲ್ಲಿ ಗುಣಮಟ್ಟ ಕಾದುಕೊಳ್ಳುವಂತೆ ಇಂಜಿನಿಯರ್ ಆನಂದ್ ಸೂಚನೆ ನೀಡಿದರು.
ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು!