CrimeNEWSದೇಶ-ವಿದೇಶ

8 ವರ್ಷಗಳ ಕಾಲ ತನ್ನ ಮಗನನ್ನೇ ಕಾಮತೃಷೆಗೆ ಬಳಸಿಕೊಂಡ ತಾಯಿ

ವಿಜಯಪಥ ಸಮಗ್ರ ಸುದ್ದಿ

ಟೆಕ್ಸಾಸ್‌: ಗಂಡ ಮೃತಪಟ್ಟ ಬಳಿಕ 17 ವರ್ಷದ ಮಗನನ್ನೇ ಸುಮಾರು 8 ವರ್ಷಗಳ ಕಾಲ ತನ್ನ ಕಾಮ ತೃಷೆಗೆ ಬಳಸಿಕೊಂಡ ಘಟನೆ ವರದಿಯಾಗಿದೆ.

ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಈ ಕೃತ್ಯ ಎಸಗಿದ್ದು 8 ವರ್ಷದ ಬಳಿಕ ತಾಯಿ ಕಾಮ ತೃಷೆಗೆ ಬಲಿಯಾದ ಯುವಕನೇ ಪೊಲೀಸರ ಬಳಿ ತನ್ನ ದಯನೀಯ ಸ್ಥಿತಿಯನ್ನು ಹೇಳಿಕೊಂಡಿದ್ದಾನೆ.

ನಮ್ಮ ಭಾರತದಲ್ಲಿ ತಾಯಿ- ಮಕ್ಕಳ ಸಂಬಂಧವೆಂದರೆ ಅತ್ಯಂತ ಪವಿತ್ರವಾದುದು ಎಂದು ಹೇಳಲಾಗುತ್ತಿದೆ. ಇದು ಭಾರತಕ್ಕಷ್ಟೇ ಸೀಮಿತವಲ್ಲ ಪ್ರಪಂಚದ ಎಲ್ಲೆಡೆಯು ಇದೇ ಇರೋದು ಆದರೆ ಅಮೆರಿಕದ ಮಹಿಳೆಯೊಬ್ಬಳು ತನ್ನ ಮಗನನ್ನು ಕೂಡಿಟ್ಟು ಲೈಂಗಿಕ ದೌರ್ಜನ್ಯವೆಸಗಿದ್ದಾಳೆ ಎಂದರೆ ಅದನ್ನು ನಂಬಲಿಕ್ಕೂ ಅಸಾಧ್ಯ ಆದರು ಸತ್ಯ.

ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿರುವ ಮಹಿಳೆ 8 ವರ್ಷಗಳ ಹಿಂದೆಯೇ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದಳು. ಆತನ ಹೆಸರು ರೂಡಿ ಫರಿಯಾಸ್, 17 ವರ್ಷ ಎಂದು ಪೊಲೀಸ್‌ ಠಾಣೆಯಲ್ಲಿ ನೀಡಿದ್ದ ನಾಪತ್ತೆ ದೂರಿನಲ್ಲಿ ತಿಳಿಸಿದ್ದಳು.

ದೂರು ನೀಡಿದ ಸುಮಾರು 8 ವರ್ಷಗಳ ಬಳಿಕ ರೂಡಿ ಪತ್ತೆಯಾಗಿದ್ದಾನೆ. ಆತನಿಗೆ ಈಗ 25 ವರ್ಷ. ತನ್ನ ತಾಯಿಯೇ ಅವಳ ಕಾಮಾಸಕ್ತಿ ತೀರಿಸಿಕೊಳ್ಳಲು ನನ್ನನ್ನು ಬಂಧಿಸಿಟ್ಟಿದ್ದಳು ಎಂಬ ಸತ್ಯವನ್ನು ಬಯಲು ಮಾಡಿದ್ದಾನೆ.

ಚರ್ಚ್‌ನ ಹೊರಗೆ ಪತ್ತೆಯಾಗಿರುವ ರೂಡಿ, ಒಂದು ವಾರದ ನಂತರ ತನ್ನ ತಾಯಿಯ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾನೆ. ನನ್ನ ತಾಯಿ ಜೆನ್ನಿ ಸಂತಾನಾ ಸುಮಾರು 8 ವರ್ಷಗಳ ಕಾಲ ಲೈಂಗಿಕ ಗುಲಾಮನಾಗಿ ನನ್ನನ್ನು ಇಟ್ಟುಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾನೆ.

ರೂಡಿ ಪತ್ತೆಯಾದ ನಂತರ, ಅವನನ್ನು ವಿಚಾರಣೆಗೆ ಒಳಪಡಿಸಿದಾಗ, ಅಪ್ಪ ಮೃತಪಟ್ಟ ಬಳಿಕ ನನ್ನ ಗಂಡನಾಗಿ ನೀನು ಇರಬೇಖು ಎಂದು ಒತ್ತಾಯಿಸಿದ್ದಳು. ಅಷ್ಟೇ ಅಲ್ಲ ಯಾರಿಗೂ ಏನನ್ನೂ ಹೇಳಬೇಡ. ಇದನ್ನು ಪೊಲೀಸರಿಗೆ ಹೇಳಿದರೆ ತೊಂದರೆಯಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಳು ಎಂದು ತಿಳಿಸಿದ್ದಾನೆ.

ಈ ಸಂಬಂಧ ಹೂಸ್ಟನ್ ಪೊಲೀಸರು ಕ್ವಾನೆಲ್ ಎಕ್ಸ್ ಅವರ ಸಮ್ಮುಖದಲ್ಲಿ ತಾಯಿ ಜೆನ್ನಿ ಮತ್ತು ಮಗ ರೂಡಿಯನ್ನು ಮುಖಾಮುಖಿಯಾಗಿ ವಿಚಾರಣೆ ನಡೆಸಿ, ನಂತರ ಘಟನೆಯ ಸತ್ಯಾಸತ್ಯತೆ ತಿಳಿದು ತಾಯಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ನಾನು ಕಾದು ಕುಳಿತಿದ್ದರೂ ಬಸ್‌ ನಿಲ್ಲಿಸಿಲ್ಲ - ಚಾಲಕ, ಕಂಡಕ್ಟರ್‌ ತಿಂಗಳ ಸಂಬಳ ನನಗೆ ನಷ್ಟಪರಿಹಾರ ಕೊಡಿ: ವಕೀಲನ ಒತ್ತ... ಕೆಎಂಎಫ್ ಸಿಬ್ಬಂದಿಗೆ 7ನೇ ವೇತನ ಆಯೋಗ ಜಾರಿ- 2024ರ ಆ.1ರಿಂದಲೇ ಪೂರ್ವಾನ್ವಯ KSRTC ಏಕಸ್ವಾಮ್ಯಕ್ಕೆ ಮೂಗುದಾರ ಹಾಕಿ- ಸರ್ಕಾರದ ಕಾಯ್ದೆ ಸರಿ ಎಂದ ಕೋರ್ಟ್ ಸ್ಮಶಾನ ಜಾಗ ಭೂಗಳ್ಳನಿಗೆ ಬಿಟ್ಟುಕೊಡಲು ಟಿಪ್ಪಣಿ ಮಂಡಿಸಿರುವ ಭ್ರಷ್ಟ ಅಧಿಕಾರಿಗಳು: ಎನ್.ಆರ್.ರಮೇಶ್ ಆರೋಪ ಕ್ರೀಡಾಪಟುಗಳಿಗೆ ಕೊಡುವ ಏಕಲವ್ಯ ಪ್ರಶಸ್ತಿ ಮುಂದುವರಿಸಲಿ: ಶೋಭಾ ನಾರಾಯಣ್ ಬಿಡದಿಯಿಂದ ಹೆದ್ದಾರಿಯಲ್ಲೇ ಮುಂದೆ ಬಂದರೆ ನಿಮಗೆ ಟೋಲ್‌ ಬರೆ ಗ್ಯಾರಂಟಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಸ್ಕಾರ್ಪಿಯೋ ಕಾರು KSRTC ಕನಕಪುರ ಬಸ್‌ ನಿಲ್ದಾಣದಲ್ಲಿ ವಿಕಲ ಚೇತನರಿಂದ ₹700 ವಸೂಲಿ, ಕಂಡಕ್ಟರ್ಸ್‌ ಕೊಡಬೇಕು ₹10 : ಟಿಸಿಗೆ ಡಿಎಂ ಸಾಥ್... ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ