NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಸಂಬಂಧ ಕೋರ್ಟ್‌ ಆದೇಶ ಮಾಡಿದರೆ ನಾವು ಪಾಲಿಸಲೇಬೇಕು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ವೇತನ ವಿಚಾರದಲ್ಲಿ ಹೈ ಕೋರ್ಟ್‌ ಆದೇಶ ಮಾಡಿದರೆ ಆ ಆದೇಶವನ್ನು ನಾವು ಪಾಲಿಸಲೇಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಇಂದು ಹೈ ಕೋರ್ಟ್‌ನ 9ನೇ ಹಾಲ್‌ನಲ್ಲಿ ಮೇ 19ರಂದು ಮನೆಗೆಲಸದ ಮಹಿಳೆ ಸಿ.ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್‌.ಶ್ರೀಧರ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠ, ನೌಕರರ ಬೇಡಿಕೆ ಮೊದಲು ಈಡೇರಿಸಿ ಬಳಿಕ ಇತ್ಯರ್ಥಪಡಿಸುತ್ತೇವೆ ಎಂದು ಹೇಳಿದೆ.

ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಕೋರ್ಟ್‌ ಇಂದು ಕಾರ್ಮಿಕ ಆಯುಕ್ತರ ಬಳಿ ಇತ್ಯರ್ಥಪಡಿಸಿಕೊಳ್ಳಿ ಎಂದು ನಿರ್ದೇಶನ ನೀಡಿದೆ. ಅದರಂತೆ ನಮ್ಮ ನಿಗಮದ ಎಂಡಿಗಳು ಹೋಗಿ ಚರ್ಚೆ ನಡೆಸಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರಂತೆ ಮುಂದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ನಡುವೆ ಸರ್ಕಾರದ ಇತರೆ ಇಲಾಖೆಗಳ ನೌಕರರಿಗಿಂತ ಕಡಿಮೆ ವೇತನ ಇದೆ ಇದು ಸರಿಯಾದ ಕ್ರಮವಲ್ಲ ಸರ್‌ ಎಂದು ವರದಿಗಾರರೂ ಕೂಡ ಪ್ರಶ್ನಿಸಿದರು. ಈ ವೇಳೆ ಕೋರ್ಟ್‌ ಆದೇಶ ಮಾಡಿದರೆ ಅದನ್ನು ನಾವು ಪಾಲಿಸಲೇ ಬೇಕು ಎಂದರು.

ಇದರ ಜತೆಗೆ ಈ ಬಾರಿ ಮಾಧ್ಯಮ ಮಿತ್ರರೂ ಕೂಡ ನೌಕರರಿಗೆ ಇರುವ ವೇತನ ತಾರತಮ್ಯತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಇದು ಸರಿಯಲ್ಲ ಎನ್ನುತ್ತಿದ್ದಾರೆ. ಇದರ ಜತೆಗೆ ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ರಂಗಣ ಅವರು ಕೂಡ ಪಿಐಎಲ್‌ ಹಾಕಿರುವುದಕ್ಕೆ ಮುಷ್ಕರಕ್ಕೆ ತಡೆ ನೀಡುವುದು  ಸರಿ. ಆದರೆ ನೌಕರರಿಗೆ ಹೇಗೆ ನ್ಯಾಯಕೊಡುತ್ತೀರಾ ಅವರು ಹೇಗೆ ಜೀವನ ಸಾಗಿಸಬೇಕು ಎಂದು ಪ್ರಶ್ನಿಸಿದ್ದರು.

ಅಲ್ಲದೆ, ಪ್ರತಿಬಾರಿಯೂ ವೇತನ ಸಂಬಂಧ ಹೋರಟಕ್ಕೆ ಮುಂದಾದರೆ ಈ ರೀತಿಯ ಪಿಐಎಲ್‌ನಡಿ ಹೋರಾಟ ನಿಲ್ಲಿಸಲಾಗುತ್ತಿದೆ. ಹೀಗೆ ಆದರೆ ನೌಕರರ ಹಕ್ಕನ್ನು ಕೇಳುವವರು ಯಾರು, ಸರ್ಕಾರ ಅಂತು ಈ ಬಗ್ಗೆ ಉದಾಸೀನತೆಯಿಂದ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಎಲ್ಲದರ ಪರಿಣಾಮವೋ ಏನೋ ಗೊತ್ತಿಲ್ಲ ಆದರೆ, ಇಂದು ಹೈ ಕೋರ್ಟ್‌ ನೌಕರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ ಎಂದೇ ಹೇಳಬಹುದಾಗಿದೆ.

ಈ ನಡುವೆ ಸಾರಿಗೆ ಸಚಿವರು ಕೂಡ ಏನು ಸಬೂಬು ಹೇಳದೆ ಕೋರ್ಟ್‌ ಆದೇಶವನ್ನು ನಾವು ಪಾಲಿಸಲೇಬೇಕು ಎಂದು ಮೃದುಧೋರಣೆ ತಳೆದಿರುವುದು ಕೂಡ ನೌಕರರಿಗೆ ಎಲ್ಲೋ ಒಂದು ಕಡೆ ನ್ಯಾಯಸಿಗುವ ಆತ್ಮವಿಶ್ವಾಸ ಮೂಡಿದೆ ಎಂದರೆ ತಪ್ಪಾಗಲಾರದು.

ಒಟ್ಟಾರೆ ನೌಕರರು ಕಳೆದ ದಶಕಗಳಿಂದಲೂ ಅನುಭವಿಸುತ್ತಿರುವ ಯಾತನೆಗೆ ಹೈ ಕೋರ್ಟ್‌ ಈಗಲಾದರೂ ಮುಕ್ತಿ ನೀಡುತ್ತದೆ ಎಂಬ ಭರವಸೆಯಲ್ಲಿ ನೌಕರರು ಕಾಯುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡ ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟು ಕೊಟ್ಟ ಭರವಸೆಯನ್ನು ಈಡೇರಿಸುವತ್ತ ಮನಸ್ಸು ಮಾಡಿದರೆ ಮುಂದೆ ಇಂಥ ಸಂದರ್ಭ ಬರುವುದಿಲ್ಲ ಎಂಬುವುದಂತು ಸ್ಪಷ್ಟ.

Deva
the authorDeva

Leave a Reply

error: Content is protected !!
Latest news
ಫೆಬ್ರವರಿ 2025- ಮಾರ್ಚ್‌ 2025ರ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಗೆ ನಿರ್ದೇಶನ ನೀಡಲು ಹೈ ಕೋರ್ಟ್‌ ಮೆಟ್ಟಿಲೇರಿ... BMTC ನೌಕರರಿಗೆ ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ 4ತಿಂಗಳ ಮೂಲ ತುಟ್ಟಭತ್ಯೆ ಮೇ 2026ರ ವೇತನದೊಂದಿಗೆ ಪಾವತಿಸಲ... KSRTC ನೌಕರರ ವೇತನ ಸಂಬಂಧ ಕೋರ್ಟ್‌ ಆದೇಶ ಮಾಡಿದರೆ ನಾವು ಪಾಲಿಸಲೇಬೇಕು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನೌಕರರ ನ್ಯಾಯಯುತವಾದ ಬೇಡಿಕೆಯ ನ್ಯಾಯಯುತವಾಗಿ ಈಡೇರಿಸಿದ ನಂತರ ಪ್ರಕರಣ ಇತ್ಯರ್ಥ: ಹೈ ಕೋರ್ಟ್‌ KSRTC ಮೈಸೂರು ಡಿಸಿಗೆ- RC, FC ಚಾಲಕ ನಿರ್ವಾಹಕರ ಜವಾಬ್ದಾರಿನಾ?: ಹೇ ತಲೆಕೆಟ್ಟ ಡಿಸಿ ನೀನು ನಿಜವಾಗಲು ಜವಾಬ್ದಾರಿಯಿಂ... ಭಾರೀ ಮಳೆಗೆ ನೆಲಕಚ್ಚಿದ ಪರಂಗಿ ಅಡಿಕೆ ಗಿಡಗಳು -ಅಪಾರ ಪ್ರಮಾಣದ ಬೆಳೆ ಹಾನಿ ರೈತರ ಗೋಳಾಟ ಪ್ರೀತಿ ನಿರಾಕರಿಸಿದ್ದಕ್ಕೆ ಹೈಟೆನ್ಷನ್ ಕಂಬ ಹತ್ತಿ ಕುಳಿತಿರುವ ಪಾಗಲ್‌ ನಾಳೆಯಿಂದ ಹಮ್ಮಿಕೊಂಡಿದ್ದ ಅರ್ನಿದಿಷ್ಟವಾಧಿ ಸಾರಿಗೆ ನೌಕರರ ಮುಷ್ಕರ ವಾಪಸ್‌: ಜಂಟಿ ಕ್ರಿಯಾ ಸಮಿತಿ ಜಂಟಿ ಕ್ರಿಯಾ ಸಮಿತಿಗೆ ಶಾಕ್‌: KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹೈ ಕೋರ್ಟ್‌ ತಡೆ ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ ಮತ್ತೊಂದು KSRTC ನೌಕರರ ಸಂಘ