KSRTC ನೌಕರರದ್ದು ಹಾವು ಸಾಯೊಲ್ಲ ಕೋಲು ಮುರಿಯೊಲ್ಲ ಎಂಬ ಸ್ಥಿತಿ: ಇಂದಿನ ರಾಜೀ ಸಂಧಾನ ಸಭೆ ಮತ್ತೆ ವಿಫಲ ಜೂ.10ಕ್ಕೆ ಮುಂದೂಡಿಕೆ
ಕಾರ್ಮಿಕ ಇಲಾಖೆ ಆಯುಕ್ತರು ಈ ವೇತನ ಹೆಚ್ಚಳ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕಾರಣ ಆಯುಕ್ತರು ಸರ್ಕಾರದ ಒಬ್ಬ ನೌಕರ ಅಷ್ಟೆ, ಇವರಿಗೆ ಸರ್ಕಾರಕ್ಕೆ ಆದೇಶ ಮಾಡುವ ಅಧಿಕಾರವಿಲ್ಲ. ಇವರು ಸಾರಿಗೆ ನೌಕರರಿಗೆ ಇಷ್ಟು ವೇತನ ಮಾಡಬೇಕು ಎಂದು ಆದೇಶ ಮಾಡುವುದಿದ್ದರೆ ಅದು ಸಿಎಂಗೆ ಮಾಡಬೇಕು. ಏಕೆಂದರೆ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವ ಅಧಿಕಾರ ಇರುವುದು ಸಿಎಂಗೆ ಮಾತ್ರ. ಆದರೆ, ಸಿಎಂಗೆ ಆದೇಶ ಮಾಡುವ ಅಧಿಕಾರ ಈ ಕಾರ್ಮಿಕ ಆಯುಕ್ತರಿಗೆ ಇಲ್ಲ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ 1.4.2025ರಿಂದ ಆಗಿರುವ ಶೇ.12.5ರಷ್ಟು ವೇತನ ಹೆಚ್ಚಳ ಹಾಗೂ 26 ತಿಂಗಳ ವೇತನ ಹೆಚ್ಚಳ ಹಿಂಬಾಕಿ ನೀಡಿರುವುದಕ್ಕೆ ಆಕ್ರೋಶಗೊಂಡಿರುವ ನೌಕರರು ನಮಗೆ 1.1.2024ರಿಂದ ವೇತನ ಹೆಚ್ಚಳವಾಗಬೇಕು ಹಾಗೂ 38 ತಿಂಗಳ ಹಿಂಬಾಕಿ ಕೊಡಲೇ ಬೇಕು ಎಂಬ ಪ್ರಮುಖ ಬೇಡಿಕೆಯಿಟ್ಟು ಮೇ20ರಿಂದ ಪ್ರತಿಭಟನೆಗೆ ಕರೆ ನೀಡಿದ್ದರು.

ಆದರೆ, ಈ ಸಂಬಂಧ ಹೈ ಕೋರ್ಟ್ನಲ್ಲಿ ಪಿಐಎಲ್ ದಾಖಲಾಗಿದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಇದರ ಜತೆಗೆ ಇನ್ನು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಂಟಿ ಕ್ರಿಯಾ ಸಮಿತಿ ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದರು. ಹಿನ್ನೆಯಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರು ಸಭೆಯ ಮೇಲೆ ಸಭೆ ಕರೆಯುತ್ತಿದ್ದಾರೆ. ಆದರೆ ಇವರು ಕರೆದಿದ್ದ ರಾಜೀ ಸಂಧಾನ ಸಭೆ ವಿಫಲಗೊಂಡಿದ್ದು ಮತ್ತೆ ಜೂನ್ 10ಕ್ಕೆ ಮುಂದೂಡಲಾಗಿದೆ.
ಈ ಸಂಧಾನ ಸಭೆಗೆ ಸಾರಿಗೆ ನಿಗಮಗಳ ಆಡಳಿತವರ್ಗ ಮತ್ತು ಕಾರ್ಮಿಕ ಸಂಘದವರು ಹಾಜರಾಗಿದ್ದರು. ಆದರೆ ಇಂದಿನ ಸಭೆಯೂ ವಿಫಲವಾಗಿದ್ದು, ಜೂನ್ 10ಕ್ಕೆ ಮಾಡುವುದಾಗಿ ಆಯುಕ್ತರು ತಿಳಿಸಿದ್ದಾರೆ.
KSRTC, BMTC, NWKRTC ಹಾಗೂ KKRTC ನೌಕರರಿಗೆ 20.05.2026ರ ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿತ್ತು. ಆದರೆ, ಅಂದು ಹೈ ಕೋರ್ಟ್ ನಿರ್ದೇಶನದಿಂದ ಯಾವುದೇ ಮುಷ್ಕರ ನಡೆಯಲು ಅವಕಾಶವಾಗಿಲ್ಲ.
ಈ ನಡುವೆ ರಾಜೀ ಸಂಧಾನ ಸಭೆ ಮತ್ತೆ ಸಭೆ ಜೂನ್ 10ಕ್ಕೆ ಮುಂದೂಡಲಾಗಿದೆ. ಹೀಗಾಗಿ ಹೈ ಕೋರ್ಟ್ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಪ್ರಕರಣ ಜೂನ್ 2ರಂದು ಮತ್ತೆ ವಿಚಾರಣೆಗೆ ಬರಲಿದ್ದು, ಈ ಬಗ್ಗೆ ಹೈ ಕೋರ್ಟ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕಾರಣ ಮೊದಲು ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಿ ನಂತರ ಬನ್ನು ಎಂದು ಕೋರ್ಟ್ ನಿರ್ದೇಶನ ನೀಡಿತ್ತು.
ಒಟ್ಟಾರೆ ಕಾರ್ಮಿಕ ಇಲಾಖೆ ಆಯುಕ್ತರು ಈ ವೇತನ ಹೆಚ್ಚಳ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕಾರಣ ಆಯುಕ್ತರು ಸರ್ಕಾರದ ಒಬ್ಬ ನೌಕರ ಅಷ್ಟೆ, ಇವರಿಗೆ ಸರ್ಕಾರಕ್ಕೆ ಆದೇಶ ಮಾಡುವ ಅಧಿಕಾರವಿಲ್ಲ. ಇವರು ಸಾರಿಗೆ ನೌಕರರಿಗೆ ಇಷ್ಟು ವೇತನ ಮಾಡಬೇಕು ಎಂದು ಆದೇಶ ಮಾಡುವುದಿದ್ದರೆ ಅದು ಸಿಎಂಗೆ ಮಾಡಬೇಕು. ಏಕೆಂದರೆ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವ ಅಧಿಕಾರ ಇರುವುದು ಸಿಎಂಗೆ ಮಾತ್ರ. ಆದರೆ, ಸಿಎಂಗೆ ಆದೇಶ ಮಾಡುವ ಅಧಿಕಾರ ಈ ಕಾರ್ಮಿಕ ಆಯುಕ್ತರಿಗೆ ಇಲ್ಲ.
ಇನ್ನು ಖಾಸಗಿ ಕಂಪನಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದರೆ ಅದನ್ನು ಬಗೆ ಹರಿಸುವ ಅಧಿಕಾರ ಈ ಕಾರ್ಮಿಕ ಆಯುಕ್ತರಿಗೆ ಇದೆ. ಏಕೆಂದರೆ ಇವರು ಸರ್ಕಾರದ ಅಧಿಕಾರಿಯಾಗಿ ಖಾಸಗಿ ಕಂಪನಿಯ ಮಾಲೀಕರಿಗೆ ಈ ರೀತಿ ಕಾನೂನಾತ್ಮಕವಾಗಿ ಮಾಡಬೇಕು ಎಂದು ಆದೇಶ ಮಾಡುವ ಅಥವಾ ನಿರ್ದೇಶನ ನೀಡುವ ಅಧಿಕಾರವಿರುತ್ತದೆ. ಆದರೆ, ಸರ್ಕಾರ ಒಬ್ಬ ಅಧಿಕಾರಿಯಾಗಿ ಸರ್ಕಾರಕ್ಕೆ ಆದೇಶ ಮಾಡುವ ಅಧಿಕಾರ ಈ ಆಯುಕ್ತರಿಗೆ ಇಲ್ಲ. ಹೀಗಾಗಿ ಸಾರಿಗೆ ನೌಕರರ ವೇತನ ಸಂಬಂಧದ ಸಮಸ್ಯೆ ಇವರ ಬಳಿ ಬಗೆಹರಿಯುವ ಯಾವುದೇ ಲಕ್ಷಣಗಳು ಇಲ್ಲ. ಇದನ್ನು ನೌಕರರು ಅರ್ಥಮಾಡಿಕೊಳ್ಳಬೇಕಿದೆ.
Related









