ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ
ಹಲ್ಲೆ ಮಾಡಿದವರು ಇದೇ ಘಟಕದ ನೌಕರರಾದ ಮುನಿ, ಬಸವರಾಜು, ಕುಮಾರ್, ಶಿವಮೂರ್ತಿ ಹಾಗೂ ದೇವರಾಜ್ ಎಂದು ಗುರುತಿಸಲಾಗಿದೆ. ಈ ಐವರು ಆರೋಪಿಗಳು ಚಾಲಕನ ಮೇಲೆ ಹಲ್ಲೆ ಮಾಡುತ್ತಿದ್ದರೂ ಕೂಡ ಘಟನೆ ನಡೆದ ಸ್ಥಳದಲ್ಲೇ ಡಿಎಂ ಇದ್ದರೂ ಸಹ ಗಲಾಟೆಯನ್ನು ತಡೆಯುವ ಪ್ರಯತ್ನ ಮಾಡಿಲ್ಲ, ಹಾಗಾಗಿ ಈ ಘಟನೆಯು ಪೂರ್ವ ನಿಯೋಜಿತ ಎಂಬ ಆರೋಪ ಕೇಳಿ ಡಿಎಂ ವಿರುದ್ಧ ಕೇಳಿ ಬಂದಿದೆ

ಕನಕಪುರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಕನಕಪುರ ಕ್ಷೇತ್ರದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನಕಪುರ ಘಟಕದಲ್ಲಿ ಘಟಕ ವ್ಯವಸ್ಥಾಪಕ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರನೊಬ್ಬನಿಗೆ 5ಮಂದಿಯಿಂದ ಘಟಕದಲ್ಲೇ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕನಕಪುರ ಘಟಕದ ಘಟಕ ವ್ಯವಸ್ಥಾಪಕರಾದ ಸಚಿನ್ ಎಂಬುವರು ಮೂಲತ ಕನಕಪುರದವರಾಗಿದ್ದು ನನಗೆ ಸಿಎಂ ಆಶೀರ್ವಾದವಿದೆ ಎಂದು ಘಟಕದಲ್ಲಿ ಯಾವುದೇ ನೌಕರರು ಅವರು ಮಾಡುತ್ತಿರುವ ಅನ್ಯಾಯಗಳ ವಿರುದ್ಧ ಪ್ರಶ್ನೆ ಮಾಡುವ ಆಗಿಲ್ಲ. ಒಂದುವೇಳೆ ಪ್ರಶ್ನೆ ಮಾಡಿದರೆ ಅವರ ಮೇಲೆ ಈ ರೀತಿ ಹಲ್ಲೆ ಮಾಡಿಸುವುದು ಅವರ ಪ್ರವೃತಿಯಾಗಿದೆ ಎಂದು ನೌಕರರು ಆರೋಪಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಚಾಲಕ ಶಿವಕುಮಾರ್ ಎಂಬುವರು ಘಟಕದಲ್ಲಿ ನಡೆಯುತ್ತಿರುವ ಅನ್ಯಾಯ ಹಾಗೂ ಲಂಚಾವತಾರದ ಬಗ್ಗೆ ಪ್ರಶ್ನೆ ಮಾಡಿ ಡ್ಯೂಟಿಗೆ ಹೋಗಿದ್ದಾರೆ. ಈ ಪ್ರಶ್ನೆ ಮಾಡಿದ್ದಕ್ಕೆ ಕೋಪಗೊಂಡ ಘಟಕ ವ್ಯವಸ್ಥಾಪಕ ಸಚಿನ್ ಸಾಯಂಕಾಲ ಕರ್ತವ್ಯ ಮುಗಿಸಿ ಶಿವಕುಮಾರ್ ಘಟಕಕ್ಕೆ ಬರುವವರೆಗೂ ಕಾದು ಕುಳಿತು ಬಂದ ವೇಳೆ ಐದು ಜನರನ್ನು ಘಟಕಕ್ಕೆ ಕರೆಸಿಕೊಂಡು ಚಾಲಕನಿಗೆ ಮನಸೋ ಇಚ್ಚೆ ಹೊಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಈ ಹಲ್ಲೆ ಮಾಡಿದವರು ಇದೇ ಘಟಕದ ನೌಕರರಾದ ಮುನಿ, ಬಸವರಾಜು, ಕುಮಾರ್, ಶಿವಮೂರ್ತಿ ಹಾಗೂ ದೇವರಾಜ್ ಎಂದು ಗುರುತಿಸಲಾಗಿದೆ. ಈ ಐವರು ಆರೋಪಿಗಳು ಚಾಲಕನ ಮೇಲೆ ಹಲ್ಲೆ ಮಾಡುತ್ತಿದ್ದರೂ ಕೂಡ ಘಟನೆ ನಡೆದ ಸ್ಥಳದಲ್ಲೇ ಡಿಎಂ ಇದ್ದರೂ ಸಹ ಗಲಾಟೆಯನ್ನು ತಡೆಯುವ ಪ್ರಯತ್ನ ಮಾಡಿಲ್ಲ, ಹಾಗಾಗಿ ಈ ಘಟನೆಯು ಪೂರ್ವ ನಿಯೋಜಿತವಾಗಿದ್ದು ಈ ಘಟನೆಗೆ ಕಾರಣರಾಗಿರುವಂತಹ ಘಟಕ ವ್ಯವಸ್ಥಾಪಕರು ಹಾಗೂ ಉಳಿದ ಐದು ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಘಟಕದಲ್ಲಿ ನಡೆದಿರುವ ಹಲ್ಲೆ ಮತ್ತೆ ಎಲ್ಲಿಯೂ ಆಗಬಾರದು ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಅಧಿಕಾರಿಗಳು ಕ್ರಮ ತೆಗೆದುಕೊಂಡು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
Related









