ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ
ದೊಡ್ಡ ನಗರಗಳ ಸುತ್ತ ಜನಪ್ರತಿನಿಧಿಗಳು, ಶಾಸಕರ ಭೂ ಮಾಫಿಯಾ ಹಾವಳಿಯಿಂದ ರೈತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ರೈತರು ಜಾಗೃತರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು- ಕುರುಬೂರು ಶಾಂತಕುಮಾರ್ ಕರೆ

ಮೈಸೂರು: ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮಾಡಿತು.
ಇಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಮೈಸೂರು ತಾಲೂಕಿನ ಟಿ.ಕಾಟೂರು ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟಿಸಿದ ಬಳಿಕ ಪ್ರತಿಭಟನೆ ಮಾಡಿ, ಹಲವು ಜನಪ್ರತಿನಿಧಿಗಳ ಭೂ ಮಾಫಿಯಾ ಹಾವಳಿ, ರೈತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ ಎಂದು ಕಿಡಿಕಾರಿದರು.
ದೊಡ್ಡ ನಗರಗಳ ಸುತ್ತ ಜನಪ್ರತಿನಿಧಿಗಳು, ಶಾಸಕರ ಭೂ ಮಾಫಿಯಾ ಹಾವಳಿಯಿಂದ ರೈತರು ಭೂಮಿ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ರೈತರು ಜಾಗೃತರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ಕರೆ ನೀಡಿದರು.
ಇನ್ನು ವಿದ್ಯುತ್ ಕಂಪನಿಯನ್ನು ಖಾಸಗಿ ಟಾಟಾ ಕಂಪನಿ ಮಾಲೀಕತ್ವಕ್ಕೆ ವಹಿಸಿದರೆ ರೈತರ ಕೃಷಿ ಪಂಪಸೆಟ್ಗಳಿಗೆ ಉಚಿತ ವಿದ್ಯುತ್ ನಿಲ್ಲುತ್ತದೆ. ರಾಜ್ಯದ 40 ಲಕ್ಷ ಕೃಷಿ ಪಂಪ್ ಸೆಟ್ ರೈತರು ತಮ್ಮ ತಮ್ಮ ಭಾಗದಲ್ಲಿ ಪ್ರತಿಭಟಿಸಿ ವಿರೋಧಿಸಬೇಕು ಎಂದರು.

ರೈತರ ಹೋರಾಟ ಅಂದರೆ ರಾಜಕೀಯ ಪಕ್ಷದ ಹಂಗಿನಲ್ಲಿ ನಡೆಯಬಾರದು, ಇದರಿಂದ ಹೋರಾಟಗಳು ವಿಫಲವಾಗುತ್ತಿವೆ ಎಂದ ಅವರು, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿ ಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಅವರು ಯೋಜನೆಗೆ ಅಡಿಗಲು ಹಾಕಿ ಈ ಭಾಗದ ಜನರ ರೈತರ ಹಿತ ಕಾಪಾಡಬೇಕು ಸರ್ವೋಚ್ಚ ನ್ಯಾಯಾಲಯದ ತೀರ್ಪು ನೀಡಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಲಕ್ಷ್ಮೀಪುರ ವೆಂಕಟೇಶ್, ವರಕೋಡು ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ದೇವನೂರು ವಿಜಯೇಂದ್ರ, ವಾಜಮಂಗಲ ಮಹಾದೇವ, ಕಾಟುರು ಮಹದೇವಸ್ವಾಮಿ, ಕಾಟೂರು ನಾಗೇಶ್, ಕೂರ್ಗಳ್ಳಿ ರವಿಕುಮಾರ್, ಗಿರೀಶ್, ನಾಗೇಂದ್ರ, ರಂಗರಾಜು, ನಂಜುಂಡಿ, ಅಂಬಳೆ ಮಂಜುನಾಥ್, ಸಿದ್ಧರಾಮ, ಮಾರ್ಬಳ್ಳಿ ಶಿವಣ್ಣ, ಬಸವರಾಜು, ಬರಡನಪುರ ಮಹೇಶ್, ಶ್ರೀಕಂಠ, ಸತೀಶ್, ಬಾಲು.
ಟಿ. ಕಾಟೂರು ಗ್ರಾಮ ಘಟಕದ ಅಧ್ಯಕ್ಷರಾದ ಪುಟ್ಟಸ್ವಾಮಿ, ಗೌರವ ಅಧ್ಯಕ್ಷ ಮಹಾದೇವ ನಾಯಕ, ಉಪಾಧ್ಯಕ್ಷ ನಾರಾಯಣಿ, ಟಿ.ಕಾಟೂರು ಗ್ರಾಮಸ್ಥರಾದ ಮಾದೇಶ್, ಮನೋಹರ್, ಮಂಜು, ಪುಟ್ಟರಾಜು, ದೊಡ್ಡದೇವನಾಯಕ, ಮಹೇಶ್, ಗೋವಿಂದರಾಜು, ಮಾರನಾಯಕ ಸೇರಿದಂತೆ 300ಕ್ಕೂ ಹೆಚ್ಚು ರೈತರು ಇದ್ದರು.







