- ವಿಜಯಪಥ ಸಮಗ್ರ ಸುದ್ದಿ
ದೊಡ್ಡಬಳ್ಳಾಪುರ: ಮತದಾನದ ದಿನದಂದು ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ಮಾಡಿಲ್ಲ ಕೇವಲ ರಾಜಕೀಯ ದುರುದ್ದೇಶದಿಂದ ನನ್ನ ಮೇಲೆ ಹಲ್ಲೆ ಮಾಡಿರುವ ಆರೋಪ ಹೊರಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್. ಅಪ್ಪಯ್ಯಣ್ಣ ತಿಳಿಸಿದ್ದಾರೆ.
ಮತದಾನದ ದಿನದಂದು ಹಾಡೋನಹಳ್ಳಿ ಯ ಶೆಟ್ಟಪ್ಪ ಎಂಬವರ ಮೇಲೆ ಹಲ್ಲೆ ಮಾಡಿರುವುದಾಗಿ ಕೆಲ ಪತ್ರಿಕೆ ಹಾಗೂ ಮಾಧ್ಯಮಗಳಿಗೆ ಶೆಟಪ್ಪ ಎಂಬುವವರು ಹೇಳಿಕೆ ನೀಡಿದ್ದರು. ಇದು ಕೇವಲ ರಾಜಕೀಯ ದುರುದ್ದೇಶ ಹಾಗೂ ನನ್ನ ತೇಜೋವಧೆ ಮಾಡಲು ಇಲ್ಲಸಲ್ಲದ ಆರೋಪಗಳನ್ನು ಕೆಲ ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಯಾವುದೇ ವ್ಯಕ್ತಿಗೂ ನಾಮಪತ್ರ ಸಲ್ಲಿಸಲು ಬೆದರಿಕೆ ಅಥವಾ ಪ್ರಚಾರ ಮಾಡದಂತೆ ಒತ್ತಡ ಹೇರಿಲ್ಲ ಮತದಾನ ಮಾಡುವುದು ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗೆ ಇರುವ ಹಕ್ಕು. ಅನ್ನು ನಾವು ಏಕೆ ಕಸಿದುಕೊಳ್ಳಲು ಪ್ರಯತ್ನಿಸಲಿ ಎಂದಿದ್ದಾರೆ.